Webdunia - Bharat's app for daily news and videos

Install App

ಚಿಂದಿ ಜೀನ್ಸ್ ತೊಡುವವರ ಬಗ್ಗೆ ಉತ್ತರಾಖಂಡ ಸಿಎಂ ಆಕ್ಷೇಪ

Webdunia
ಗುರುವಾರ, 18 ಮಾರ್ಚ್ 2021 (09:02 IST)
ಡೆಹ್ರಾಡೂನ್: ಹರಿದ ಜೀನ್ಸ್ ಪ್ಯಾಂಟ್ ತೊಡುವುದು ಇಂದಿನ ಫ್ಯಾಷನ್. ಆದರೆ ಈ ಬಗ್ಗೆ ಉತ್ತರಾಖಂಡ ಸಿಎಂ ತಿರಾತ್ ಸಿಂಗ್ ರಾವತ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.


ಹರಿದ ಜೀನ್ಸ್ ತೊಡುವುದು ಆಧುನಿಕ ಸಮಾಜದಲ್ಲಿ ಸಾಮಾಜಿಕ ಅಧಃಪತನದ ಸಂಕೇತ ಎಂದು ತಿರಾತ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.  ಇದೆಂಥಾ ಸಂಸ್ಕೃತಿ ಎಂದು ಅವರು ಲೇವಡಿ ಮಾಡಿದ್ದಾರೆ.

‘ಮೊಣಕಾಲು ಕಾಣುವ ಹಾಗೆ ಚಿಂದಿ ಜೀನ್ಸ್ ತೊಡುವುದು ಮತ್ತು ಶ್ರೀಮಂತರಂತೆ ತೋರಿಸಿಕೊಳ್ಳುವುದು- ಇತ್ತೀಚೆಗೆ ಯುವಜನಾಂಗಕ್ಕೆ ಇಂಥಾ ಸಂಸ್ಕೃತಿಯನ್ನೇ ಹೇಳಿಕೊಡಲಾಗುತ್ತದೆ.  ಇವೆಲ್ಲಾ ಮನೆಯಿಂದಲ್ಲದೆ ಬೇರೆ ಎಲ್ಲಿಂದ ಬರಲು ಸಾಧ್ಯ? ಯುವತಿಯರೂ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಪಾಶ್ಚಿಮಾತ್ಯರು ನಮ್ಮ ಸಂಸ್ಕೃತಿಯನ್ನು ಕಲಿಯುತ್ತಿದ್ದಾರೆ.ಆದರೆ ನಾವು ನಗ್ನತೆಯ ಹಿಂದೆ ಓಡುತ್ತಿದ್ದೇವೆ. ಇದೆಲ್ಲಾ ಮನೆಯಲ್ಲಿ ಉತ್ತಮ ಸಂಸ್ಕಾರ ಹೇಳಿಕೊಡದೇ ಇರುವುದರ ಫಲ’ ಎಂದು ನೂತನ ಸಿಎಂ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments