ಒಂದೂವರೆ ತಿಂಗಳಲ್ಲಿ ಏಳು ಬಾರಿ ಹಾವು ಕಡಿದರೂ ಬದುಕುಳಿದ ಯುವಕ

Krishnaveni K
ಶನಿವಾರ, 13 ಜುಲೈ 2024 (15:43 IST)
ಉತ್ತರಪ್ರದೇಶ: ವಿಷದ ಹಾವು ಒಮ್ಮೆ ಕಡಿದರೇ ಬದುಕುಳಿಯುವುದು ಕಷ್ಟ. ಹಾಗಿರುವಾಗ ಈ ಯುವಕನಿಗೆ ಕಳೆದ ಒಂದೂವರೆ ತಿಂಗಳಲ್ಲಿ ಏಳು ಬಾರಿ ಹಾವು ಕಡಿದಿದ್ದು ಆದರೂ ಬದುಕುಳಿದಿದ್ದಾನೆ ಎನ್ನುವುದೇ ಅಚ್ಚರಿ. ಇಂತಹದ್ದೊಂದು ಅಚ್ಚರಿ ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯಲ್ಲಿ ನಡೆದಿದೆ.

ಇಷ್ಟು ಬಾರಿ ಹಾವು ಕಡಿದರೂ ಆತ ಬದುಕುಳಿದಿರುವುದೇ ಪವಾಡ ಎಂದು ವೈದ್ಯರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸೌರಾ ಗ್ರಾಮದ ನಿವಾಸಿ ವಿಕಾಸ್ ದುಬೆ ಎಂಬಾತನಿಗೆ ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ಒಟ್ಟು ಏಳು ಬಾರಿ ಹಾವು ಕಡಿದಿದೆ.  ಇದೀಗ ಏಳನೇ ಬಾರಿ ಹಾವು ಕಡಿತಕ್ಕೊಳಗಾಗಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಈ ಬಾರಿಯೂ ಆತ ಸಾವಿನ ದವಡೆಯಿಂದ ಪಾರಾಗಿದ್ದಾನೆ. ಜೂನ್ 2 ರಂದು ಮನೆಯಲ್ಲಿ ಟಿವಿ ನೋಡಿಕೊಂಡು ಕುಳಿತಿದ್ದಾಗ ಹಾವು ಕಚ್ಚಿತ್ತು. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಮನೆಗೆ ಮರಳಿದ್ದ ಆತನಿಗೆ ಮತ್ತೆ ಜೂನ್ 10 ರಂದು ಎರಡನೇ ಬಾರಿ ಹಾವು ಕಚ್ಚಿದೆ. ಆಗಲೂ ಚಿಕಿತ್ಸೆ ಪಡೆದುಕೊಂಡು ಮನೆಗೆ ಮರಳಿದ್ದಾನೆ.

ಬಳಿಕ ಹಾವು ಎಂದರೇ ಆತನಿಗೆ ಭಯ ಹುಟ್ಟಿದೆ. ಇದರಿಂದಾಗಿ ಆತ ಈಗ ರಾತ್ರಿ ಮಲಗಲೂ ಹೆದರುತ್ತಿದ್ದಾನಂತೆ. ನಾಲ್ಕನೇ ಬಾರಿಗೆ ಹಾವು ಕಡಿತಕ್ಕೊಳಗಾದಾಗ ಆತನಿಗೆ ಕೆಲವು ದಿನ ಊರು ಬಿಟ್ಟು ಹೋಗುವಂತೆ ವೈದ್ಯರು ಸೂಚಿಸಿದ್ದಾರೆ. ಅದರಂತೆ ಆತ ತನ್ನ ಚಿಕ್ಕಮ್ಮನ ಊರಿಗೆ ತೆರಳಿದ್ದಾನೆ. ವಿಪರ್ಯಾಸವೆಂದರೆ ಅಲ್ಲೂ ಆತನಿಗೆ ಹಾವು ಕಚ್ಚಿದೆ. ಇದೊಂದು ಪವಾಡ ಎಂದು ವೈದ್ಯರೇ ಹೇಳುತ್ತಿದ್ದಾರೆ.

ಅದರಲ್ಲೂ ಇನ್ನೊಂದು ವಿಶೇಷವೆಂದರೆ ಪ್ರತೀ ಬಾರಿಯೂ ಆತನಿಗೆ ಶನಿವಾರವೇ ಹಾವು ಕಚ್ಚಿದೆ. 24 ವರ್ಷದ ಯುವಕ ವಿಕಾಸ್ ಗೆ ಈಗ 40 ದಿನಗಳಲ್ಲಿ 7 ನೇ ಬಾರಿ ಹಾವು ಕಚ್ಚಿದೆ. ಇದರ ಹಿಂದಿನ ರಹಸ್ಯವೇನೆಂದು ಈಗ ತಿಳಿಯಬೇಕಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೃತಿಕಾ ಸಾವನ್ನಪ್ಪಿದ ಬಳಿಕ ಮಹೇಂದ್ರ ರೆಡ್ಡಿ ಈ ವಿಚಾರಕ್ಕೆ ತುಂಬಾನೇ ಹಠ ಹಿಡಿದಿದ್ದಂತ್ತೆ

ಬೆಳೆದು ಬಂದ ಮೂಲವನ್ನು ಎಂದೂ ಮರೆಯಬಾರದು: ಟೀಕಾಕಾರರಿಗೆ ಡಿಕೆ ಶಿವಕುಮಾರ್‌ ಕ್ಲಾಸ್‌

ಬಿಹಾರ ಚುನಾವಣೆ: ಕೈತಪ್ಪಿದ ಟಿಕೆಟ್‌, ಬಟ್ಟೆ ಹರಿದುಕೊಂಡು ಹೋರಳಾಡಿದ ಆರ್‌ಜೆಡಿ ನಾಯಕ

ಅಭಿಷೇಕ್ ಆಚಾರ್ಯ ಬದುಕಿನಲ್ಲಿ ಆಟವಾಡಿದ ನಿರೀಕ್ಷಾ ಕೊನೆಗೂ ಅರೆಸ್ಟ್‌

ನೋದಣಿಯಾಗದಿರುವ ಆರ್‌ಎಸ್‌ಎಸ್‌ ಭೂಗತ ಸಂಘಟನೆಯಲ್ಲವೇ: ಬಿಕೆ ಹರಿಪ್ರಸಾದ್‌

ಮುಂದಿನ ಸುದ್ದಿ
Show comments