Select Your Language

Notifications

webdunia
webdunia
webdunia
webdunia

ನಿರ್ಭಯಾ ಅಪಾಧಿಗಳಿಗೆ ಗಲ್ಲು: ಉತ್ತರ ಪ್ರದೇಶದ ಹ್ಯಾಂಗ್ ಮ್ಯಾನ್ ಗಳಿಗೆ ಕರೆ

ನಿರ್ಭಯಾ ಅಪಾಧಿಗಳಿಗೆ ಗಲ್ಲು: ಉತ್ತರ ಪ್ರದೇಶದ ಹ್ಯಾಂಗ್ ಮ್ಯಾನ್ ಗಳಿಗೆ ಕರೆ
ನವದೆಹಲಿ , ಗುರುವಾರ, 12 ಡಿಸೆಂಬರ್ 2019 (17:06 IST)
ನವದೆಹಲಿ: ದೆಹಲಿಯ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣದ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜಾರಿಗೊಳಿಸಲು ಉತ್ತರ ಪ್ರದೇಶದ ಹ್ಯಾಂಗ್ ಮ್ಯಾನ್ ಗಳಿಗೆ ಕರೆ ಕಳುಹಿಸಲಾಗಿದೆ.


ತಿಹಾರ್ ಜೈಲ್ ನಲ್ಲಿ ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜಾರಿಗೊಳಿಸಲಾಗುತ್ತದೆ. ಆದರೆ ಇಲ್ಲಿ ಹ್ಯಾಂಗ್ ಮ್ಯಾನ್ ಗಳಿಲ್ಲದ ಕಾರಣ ಉತ್ತರ ಪ್ರದೇಶದ ಹ್ಯಾಂಗ್ ಮ್ಯಾನ್ ಗಳನ್ನು ಕಳುಹಿಸಲು ತಿಹಾರ್ ಜೈಲು ಅಧಿಕಾರಿಗಳು ಕೋರಿದ್ದಾರೆ ಎಂದು ಉತ್ತರ ಪ್ರದೇಶ ಡಿಜಿಪಿ ಆನಂದ್ ಕುಮಾರ್ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಇಬ್ಬರು ಹ್ಯಾಂಗ್ ಮ್ಯಾನ್ ಗಳಿದ್ದಾರೆ. ಹೀಗಾಗಿ ಅವರನ್ನು ಕರೆಸಿಕೊಳ್ಳಲು ತಿಹಾರ್ ಜೈಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ ನೇಣುಗಂಬಕ್ಕೇರಲು ಹಗ್ಗ ಸಿದ್ಧಪಡಿಸಲಾಗಿದೆ. ಹೀಗಾಗಿ ಸದ್ಯದಲ್ಲೇ ಈ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜಾರಿಗೊಳಿಸುವುದು ಖಂಡಿತಾ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಂದೆ ಸತ್ತ ಬಳಿಕ ತಾಯಿ ಮೇಲೆ ಅತ್ಯಾಚಾರ ಮಾಡುತ್ತಿದ್ದ ಮಗ ಅರೆಸ್ಟ್