Select Your Language

Notifications

webdunia
webdunia
webdunia
webdunia

Union Budget 2024 live updates: ನಿರ್ಮಲಾ ಸೀತಾರಾಮನ್ ಬಜೆಟ್ ಲೆಕ್ಕಾಚಾರ ಯಾರಿಗೆ ಎಷ್ಟು

Budget 2024 live

Krishnaveni K

ನವದೆಹಲಿ , ಮಂಗಳವಾರ, 23 ಜುಲೈ 2024 (10:52 IST)
ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮೋದಿ 3.0 ಸರ್ಕಾರದ ಮೊದಲ ಬಜೆಟ್ ಮಂಡಿಸುತ್ತಿದ್ದಾರೆ. ಇದು ನಿರ್ಮಲಾ ಅವರು ಮಂಡಿಸುತ್ತಿರುವ ಸತತ ಏಳನೇ ಬಜೆಟ್ ಆಗಿದೆ. ಈ ಬಜೆಟ್ ಮುಂದಿನ ಐದು ವರ್ಷಗಳಿಗೆ ದಿಕ್ಸೂಚಿಯಾಗಿರಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಈ ಬಾರಿ ಬಜೆಟ್ ನಲ್ಲಿ ರೈಲ್ವೇ, ಮೂಲಭೂತ ಸೌಕರ್ಯಾಭಿವೃದ್ಧಿ, ಕೃಷಿ ಯೋಜನೆಗಳಿಗೆ ಹೆಚ್ಚಿನ ಹಣ ಹಂಚಿಕೆಯಾಗುತ್ತಿದೆ. ನಿರ್ಮಲಾ ಸೀತಾರಾಮನ್ ಬಜೆಟ್ ನಲ್ಲಿ ಈ ಬಾರಿ ಯಾವೆಲ್ಲಾ ಯೋಜನೆಗಳಿಗೆ, ಯಾವೆಲ್ಲಾ ವಿಭಾಗಗಳಿಗೆ ಹೆಚ್ಚು ಅನುದಾನ ಸಿಗುತ್ತಿದೆ, ತೆರಿಗೆ ಹಂಚಿಕೆ ಹೇಗಿದೆ ಎಂಬಿತ್ಯಾದಿ ವಿವರಗಳು ಇಲ್ಲಿದೆ.
  • ಪ್ಲಾಸ್ಟಿಕ್, ಆಮದು ಬಟ್ಟೆಗಳು, ಮೊಬೈಲ್ ಟವರ್ ಏರಿಕೆ
  • ಇ-ಕಾಮರ್ಸ್ ಗಳ ಟಿಡಿಎಸ್  ದರ ಇಳಿಕೆ
  • ಟಿಡಿಎಸ್ ಶೇ. 1 ರಿಂದ ಶೇ.0.1 ಕ್ಕೆ ಇಳಿಕೆ
  • ಹೂಡಿಕೆದಾರರ ಮೇಲಿನ ಏಂಜಲ್ಸ್ ಟ್ಯಾಕ್ಸ್ ಇಳಿಕೆ
  • ಬಾಂಡ್, ಮ್ಯೂಚುವಲ್ ಫಂಡ್ ಗಳ ಲಾಭದ ಮೇಲೆ ತೆರಿಗೆ
  • ವಿದೇಶೀ ಬಂಡವಾಳ ಹೂಡಿಕೆದಾರರಿಗೆ ನೆರವು
  • ಸ್ಟಾರ್ಟ್ ಅಪ್ ಗಳ ಅಭಿವೃದ್ಧಿಗೆ ನೆರವು
  • ವೇತನ ಪಡೆಯುವ ಮಧ್ಯಮ ವರ್ಗದವರಿಗೆ ಆದಾಯ ತೆರಿಗೆ ಲಾಭ
  • 3 ಲಕ್ಷದವರೆಗಿನ ಆದಾಯಕ್ಕೆ ತರಿಗೆ ಇಲ್ಲ
  • ಆನ್ ಲೈನ್ ವ್ಯವಹಾರಗಳಿಗೆ ಟಿಡಿಎಸ್ ಕಡಿತ
  • ವಿತ್ತೀಯ ಕೊರತೆ ಜಿಡಿಪಿಯ ಶೇ. 4.9 ರಷ್ಟಿದೆ
  • ತೆರಿಗೆ ಪದ್ಧತಿ ಸರಳೀಕರಣ
  • ಮೇಕ್ ಇಂಡಿಯಾ ಯೋಜನೆಗಳಿಗೆ ಒತ್ತು
  • ಚಿನ್ನ, ಬೆಳ್ಳಿ ಮೇಲೆ 6% ಕಸ್ಟಮ್ಸ್ ಡ್ಯೂಟಿ ಕಡಿತ
  • ಮೊಬೈಲ್ ಫೋನ್, ಚಾರ್ಜರ್ ಬೆಲೆ ಇಳಿಕೆ
  • ಮೊಬೈಲ್ ಫೋನ್ ಗಳ ಮೇಲಿನ ತೆರಿಗೆ ಇಳಿಕೆ
  • ಕೆಲವು ಮೆಡಿಕಲ್ ಉಪಕರಣಗಳ ಮೇಲಿನ ಕಸ್ಟಮ್ಸ್ ಡ್ಯೂಟಿ ತೆರವು
  • ಕ್ಯಾನ್ಸರ್ ರೋಗಿಗಳ ನೆರವಿಗೆ ಮೂರು ಔಷಧಗಳ ಮೇಲಿನ ತೆರಿಗೆ ವಿನಾಯ್ತಿ
  • ವಿಷ್ಣು ಪಾದ್ ಟೆಂಪಲ್ ಕಾರಿಡಾರ, ಬೋಧ್ ಗಯಾ ಟೆಂಪಲ್ ಕಾರಿಡಾರ್ ಯೋಜನೆ
  • ನಳಂದಾ ಯೂನಿವರ್ಸಿಟಿ ಅಭಿವೃದ್ಧಿಗೆ ನೆರವು
  • ಒಡಿಶಾದ ದೇವಾಲಯಗಳು, ಐತಿಹಾಸಿಕ ಸ್ಥಳಗಳ ಅಭಿವೃದ್ಧಿಗೆ ನೆರವು
  • ಪ್ರಧಾನ ಮಂತ್ರಿ ಗ್ರಾಮ್ ಸಡಕ್ ಯೋಜನೆ ಫೇಸ್ 4 ಜಾರಿಗೆ
  • ಬಿಹಾರದಲ್ಲಿ ನೆರೆ ನಿಯಂತ್ರಣಕ್ಕೆ ಯೋಜನೆ
  • ಮೂಲಸೌಕರ್ಯ ಅಭಿವೃದ್ಧಿಗೆ 11 ಲಕ್ಷ ಕೋಟಿ
  • ಅಸ್ಸಾಂ ನೆರೆ ನಿರ್ವಹಣೆ ಯೋಜನೆಗಳಿಗೆ ಅನುದಾನ
  • ಹಿಮಾಚಲ ಪ್ರದೇಶ ಪುನರ್ ನಿರ್ಮಾಣಕ್ಕೆ ಒತ್ತು
  • ಆಸ್ತಿ ಖರೀದಿಯಲ್ಲಿ ಮಹಿಳೆಯರಿಗೆ ವಿಶೇಷ ಯೋಜನೆ
  • ಉತ್ತರಾಖಂಡ ಮೇಘಸ್ಪೋಟ, ನೆರೆ ಹಾವಳಿಗೆ ನೆರವು
  • ಮಹಿಳಾ ನಿರ್ದಿಷ್ಟ ಕೌಶಲ್ಯ ಯೋಜನೆ, ವಸತಿ ನಿಲಯಗಳ ನಿರ್ಮಾಣ
  • ಮಹಿಳೆಯರ ಉದ್ಯೋಗಕ್ಕೆ ವಿಶೇಷ ಒತ್ತು
  • ಸ್ಟ್ರೀಟ್ ಫುಡ್ ಹಬ್ ಗಳ ಅಭಿವೃದ್ಧಿಗೆ ಪ್ರೋತ್ಸಾಹ
  • ಪಿಎಂ ಸ್ವನಿಧಿ ಯೋಜನೆಯಡಿ ಒತ್ತು
  • ಪಿಎಂ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ
  • ರೂಫ್ ಟಾಪ್ ಸೋಲಾರ್ ಶಕ್ತಿ ಯೋಜನೆ ಜಾರಿಗೆ
  • 300 ಯೂನಿಟ್ ವರೆಗೆ ಉಚಿತ ವಿದ್ಯುತ್ ಬಳಕೆಗೆ ಅವಕಾಶ
  • ಪ್ರಧಾನಿ ಆವಾಸ್ ಯೋಜನೆಗೆ 10 ಲಕ್ಷ ಕೋಟಿ ಮೀಸಲು
  • 3 ಕೋಟಿ ಹೊಸ ಮನೆಗಳ ನಿರ್ಮಾಣ
  • ಉದ್ಯೋಗ ಸೃಷ್ಟಿಗೆ ಶಿಪ್ಪಿಂಗ್ ಉದ್ಯಮಕ್ಕೆ ಪ್ರೋತ್ಸಾಹ
  • ಪಿಪಿಪಿ ಮಾದರಿಯಲ್ಲಿ ಬಾಡಿಗೆ ಮನೆಗಳ ನಿರ್ಮಾಣ
  • ಕೈಗಾರಿಕಾ ನೌಕರರಿಗೆ ಡಾರ್ಮೆಂಟರಿ ರೀತಿ ಬಾಡಿಗೆ ಮನೆಗಳು
  • ದೊಡ್ಡ ಕಂಪನಿಗಳಲ್ಲಿ ಯುವಕರಿಗೆ ಉದ್ಯೋಗ ತರಬೇತಿ, ತಿಂಗಳಿಗೆ 5 ಸಾವಿರ ಪ್ರೋತ್ಸಾಹ ಧನ
  • 12 ಕೈಗಾರಿಕಾ ಪಾರ್ಕ್ ಗಳ ಸ್ಥಾಪನೆ
  • ಆಂಧ್ರಪ್ರದೇಶಕ್ಕೆ 15 ಸಾವಿರ ವಿಶೇಷ ಆರ್ಥಿಕ ಪ್ಯಾಕೇಜ್
  • ಬಿಹಾರ್, ಆಂಧ್ರಪ್ರದೇಶಕ್ಕೆ ಬಂಪರ್ ಕೊಡುಗೆ
  • ಅಮೃತ್ ಸರ್-ಗಯಾ ಆರ್ಥಿಕ ಕಾರಿಡಾರ್
  • ಎಂಎಸ್ ಎಂಇ ಕಾರ್ಮಿಕರ ಕಲ್ಯಾಣಕ್ಕೆ ವಿಶೇಷ ಒತ್ತು
  • ಉತ್ಪಾದನಾ ವಲಯದಲ್ಲಿ ಗ್ಯಾರಂಟಿ ಯೋಜನೆ
  • ಎಂಎಸ್ಎಂಇ ಕಾರ್ಮಿಕರ ಉತ್ಪನ್ನಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರಾಟ ಮಾಡಲು ಪ್ರೋತ್ಸಾಹ
  • ಮುದ್ರಾ ಯೋಜನೆಯಡಿ ಸಾಲ 10 ಲಕ್ಷದಿಂದ 20 ಲಕ್ಷಕ್ಕೆ ಏರಿಕೆ
  • ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ 3 ಕೋಟಿ ಮನೆಗಳ ನಿರ್ಮಾಣ
  • 4 ಕೋಟಿ ಯುವಕರಿಗೆ ಉದ್ಯೋಗ ಸೃಷ್ಟಿಗೆ ಯೋಜನೆ
  • ಬುಡಕಟ್ಟು ಜನಾಂಗದ ಅಭಿವೃದ್ಧಿಗೆ ಯೋಜನೆ
  • ಯುವಕರ ಉದ್ಯೋಗಕ್ಕಾಗಿ ಐದು ಹೊಸ ಯೋಜನೆ
  • ಬಿಹಾರದಲ್ಲಿ ರೈಲ್ವೇ ಯೋಜನೆಗಳಿಗೆ 26 ಸಾವಿರ ಕೋಟಿ
  • ಬಿಹಾರದಲ್ಲಿ ಹೊಸ ಮೆಡಿಕಲ್ ಕಾಲೇಜು, ಆಸ್ಪತ್ರೆ ನಿರ್ಮಾಣ
  • ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ 3 ಕೋಟಿ ಮನೆಗಳ ನಿರ್ಮಾಣ
  • ಆಂಧ್ರಪ್ರದೇಶದ ಕೈಗಾರಿಕೆಗಳ ಮೂಲಸೌಕರ್ಯಾಭಿವೃದ್ಧಿಗೆ ಸಹಾಯ
  • ವಿಶಾಖಪಟ್ಟಣ ಇಂಡಸ್ಟ್ರಿಯಲ್ ಕಾರಿಡಾರ್, ಹೈದರಾಬಾದ್-ಬೆಂಗಳೂರು ಇಂಡಸ್ಟ್ರಿಯಲ್ ಕಾರಿಡಾರ್ ಯೋಜನೆಗೆ ಸಹಾಯ
  • ಆಂಧ್ರಪ್ರದೇಶ ರಾಜಧಾನಿ ನಿರ್ಮಾಣಕ್ಕೆ ಆರ್ಥಿಕ ಸಹಾಯ
  • ಉನ್ನತ ಶಿಕ್ಷಣಕ್ಕೆ 10 ಲಕ್ಷದವರೆಗೆ ಸಾಲ
  • ಉನ್ನತ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿಗಳಿಗೆ ಸಾಲ
  • 5 ವರ್ಷಗಳಲ್ಲಿ 25 ಲಕ್ಷ ಯುವಕರಿಗೆ ಕೌಶಲ್ಯಾಭಿವೃದ್ಧಿಗೆ ನೆರವು
  • ತರಕಾರಿ ಬೆಳೆಗಳ ಉತ್ಪನ್ನಕ್ಕೆ ರೈತರಿಗೆ ಪ್ರೋತ್ಸಾಹ
  • ತರಕಾರಿಗಳ ಸಂಗ್ರಹಕ್ಕೆ ದಾಸ್ತಾನು ವ್ಯವಸ್ಥೆ
  • ರೈತರಿಗಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ವ್ಯವಸ್ಥೆ
  • ಉದ್ಯೋಗ ಹೆಚ್ಚಳಕ್ಕೆ ಮೂರು ಯೋಜನೆ
  • ಗ್ರಾಮೀಣ ಭಾಗದಲ್ಲಿ ಆರ್ಥಿಕತೆಗೆ ಉತ್ತೇಜನ
  • ನೈಸರ್ಗಿಕ ಕೃಷಿಗೆ ಉತ್ತೇಜನಕ್ಕೆ ಯೋಜನೆ
  • ಕೃಷಿ ಕ್ಷೇತ್ರದಲ್ಲಿ ಡಿಜಿಟಲೀಕರಣ
  • ಡಿಜಿಟಲ್ ಬೆಳೆ ಸರ್ವೆ
  • 100 ಜಿಲ್ಲೆಗಳಲ್ಲಿ ಡಿಜಿಟಲ್ ಬೆಳೆ ಸರ್ವೆ
  • ಕೃಷಿ ಸಂಬಂಧಿತ ವಲಯಕ್ಕೆ 1.52 ಲಕ್ಷ
  • ಶಿಕ್ಷಣ, ಉದ್ಯೋಗ, ಕೌಶಲ್ಯಾಭಿವೃದ್ಧಿಗೆ 1.48 ಲಕ್ಷ ಕೋಟಿ ಮೀಸಲು
  • ಪ್ರಧಾನ ಮಂತ್ರಿ ಗರೀಬಿ ಕಲ್ಯಾಣ ಅನ್ನ ಯೋಜನೆ 5 ವರ್ಷಕ್ಕೆ ವಿಸ್ತರಣೆ
  • ಒಟ್ಟು 9 ಅಂಶಗಳಿಗೆ ಬಜೆಟ್ ನಲ್ಲಿ ಒತ್ತು
  • ಮಧ್ಯಂತರ ಬಜೆಟ್ ನಲ್ಲಿ ಮಂಡಿಸಿದ ಯೋಜನೆಗಳು ಕಾರ್ಯರೂಪದಲ್ಲಿದೆ
  • ಈ ಬಜೆಟ್ ಮಧ್ಯಮ ವರ್ಗ, ನಿರುದ್ಯೋಗ ನಿವಾರಣೆ, ಯುವ ಜನತೆಯನ್ನು ಗುರಿಯಾಗಿರಿಸಲಾಗಿದೆ
  • ಬಜೆಟ್ ಮಂಡನೆ ಆರಂಭಿಸಿದ ನಿರ್ಮಲಾ ಸೀತಾರಾಮನ್
  • ಸದನ ಆರಂಭಕ್ಕೆ ಮುನ್ನ ಸ್ಪೀಕರ್ ಭಾಷಣ
  • ಕೆಲವೇ ಕ್ಷಣಗಳಲ್ಲಿ ನಿರ್ಮಲಾ ಬಜೆಟ್. ಸಂಸತ್ ಗೆ ಆಗಮಿಸಿದ ನಿರ್ಮಲಾ ಸೀತಾರಾಮನ್


Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕದಲ್ಲಿ ನೀಟ್ ಇರಲ್ಲ, ವೈದ್ಯಕೀಯ ಶಿಕ್ಷಣ ಪ್ರವೇಶಾತಿಗೆ ಸಿಇಟಿನೇ ಫೈನಲ್