Select Your Language

Notifications

webdunia
webdunia
webdunia
webdunia

ದಕ್ಷಿಣ ಸುಡಾನ್`ನಲ್ಲಿ ಅಪಹರಣಗೊಂಡಿದ್ದ ಇಬ್ಬರು ಭಾರತೀಯರ ಬಿಡುಗಡೆ

ದಕ್ಷಿಣ ಸುಡಾನ್`ನಲ್ಲಿ ಅಪಹರಣಗೊಂಡಿದ್ದ ಇಬ್ಬರು ಭಾರತೀಯರ ಬಿಡುಗಡೆ
ದಕ್ಷಿಣ ಸುಡಾನ್`ನಲ್ಲಿ ಅಪಹರಣಗೊಂಡಿದ್ದ ಇಬ್ಬರು ಭಾರತೀಯರ ಬಿಡುಗಡೆ , ಶುಕ್ರವಾರ, 31 ಮಾರ್ಚ್ 2017 (13:36 IST)
ಸುಡಾನ್ ಬಂಡುಕೋರರಿಂದ ಅಪಹರಣಕ್ಕೊಳಗಾಗಿದ್ದ ಇಬ್ಬರು ಭಾರತೀಯ ಇಂಜಿನಿಯರ್`ಗಳನ್ನ ಬಿಡುಗಡೆಗೊಳಿಸಲಾಗಿದೆ. ಭಾರತ ಸರ್ಕಾರದ ಮಧ್ಯಪ್ರವೇಶದ ಬಳಿಕ ಭಾರತೀಯರನ್ನ ಬಿಡುಗಡೆಗೊಳಿಸಲಾಗಿದೆ.
 

ದಕ್ಷಿಣ ಸುಡಾನ್`ನ ದಾರ್ ಪೆಟ್ರೋಲಿಯಂ ಕಂಪನಿಯ ಆಪರೇಟರ್ ಅಜಯ್ ರಾಜಾ ಗುರುವಾರ ರಾತ್ರಿ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಭಾರತೀಯರ ಬಿಡುಗಡೆಯಲ್ಲಿ ಪ್ರಮುಖ ಪಾತ್ರ ವಹಿಸಿದ ವಿದೇಶ಻ಂಗ ಸಚಿವೆ ಸುಷ್ಮಾ ಸ್ವರಾಜ್`ಗೆ ಅಭಿನಂದನೆ ಸಲ್ಲಿಸಿದ್ದಾರೆ. ಮಾರ್ಚ್ ತಿಂಗಳ ಆರಂಭದಲ್ಲಿ ಬಂಡುಕೋರರು ಭಾರತೀಯ ಇಂಜಿನಿಯರ್`ಗಳಾದ ಮಿಥುನ್ ಮತ್ತು ಎಡ್ವರ್ಡ್ ಅವರನ್ನ ಅಪಹರಿಸಿದ್ದರು.

ಈ ಬಗ್ಗೆ ಟ್ವಿಟ್ಟರ್`ನಲ್ಲಿ ಪ್ರತಿಕ್ರಿಯಿಸಿರುವ ಸುಷ್ಮಾ ಸ್ವರಾಜ್, ಭಾರತದ ಪ್ರಜೆಗಳಾದ ಮಿಥುನ್ ಮತ್ತು ಎಡ್ವರ್ಡ್ ಬಿಡುಗಡೆಯ ಸುದ್ದಿ ತಿಳಿಸಲು ನನಗೆ ಸಂತಸವಾಗುತ್ತಿದೆ. ಬಿಡುಗಡೆಯಲ್ಲಿ ಪ್ರಮುಖ ಪಾತ್ರ ವಹಿಸಿದ ದಕ್ಷಿಣ ಸುಡಾನ್`ನ ಭಾರತದ ರಾಯಭಾರಿ ಶ್ರೀಕುಮಾರ್ ಮೆನನ್ ಅವರಿಗೆ ಸುಷ್ಮಾ ಅಭಿನಂದನೆ ಸಲ್ಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಬಿಬಿಎಂಪಿ ಕಾರ್ಪೊರೇಟರ್