Publish Date: Mon, 05 Mar 2018 (09:02 IST)
Updated Date: Mon, 05 Mar 2018 (09:05 IST)
ನವದೆಹಲಿ: ಬೇಕಿದ್ರೆ ಬರೆದಿಟ್ಕೊಳ್ಳಿ.. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮೋದಿ ಗೆಲ್ಲೋದಿಲ್ಲ. ಮುಂದಿನ ವರ್ಷ ಆಗಸ್ಟ್ 15 ರಂದು ಮೋದಿ ಕೆಂಪುಕೋಟೆಯಲ್ಲಿ ಧ್ವಜ ಹಾರಿಸಿ ಮಾಡುವ ಭಾಷಣವೇ ಅವರ ಅಂತಿಮ ಭಾಷಣವಾಗಲಿದೆ ಎಂದು ತೃಣಮೂಲ ಕಾಂಗ್ರೆಸ್ ಡೆರಿಕ್ ಓಬ್ರಿಯಾನ್ ಹೇಳಿದ್ದಾರೆ.
2019 ರಲ್ಲಿ ಮೋದಿ ಸ್ವಾತಂತ್ರ್ಯ ಭಾಷಣ ಮಾಡಲ್ಲ. ಇದು ತೃಣಮೂಲ ಕಾಂಗ್ರೆಸ್ ಮತ್ತು ಇತರ ಪಕ್ಷಗಳ ವತಿಯಿಂದ ನನ್ನ ಸವಾಲು ಎಂದು ಓಬ್ರಿಯಾನ್ ಹೇಳಿಕೊಂಡಿದ್ದಾರೆ.
ವಿವಿಧ ಸಣ್ಣ ಪುಟ್ಟ ಪಕ್ಷಗಳು ಒಂದಾಗಿ ಬಿಜೆಪಿಗೆ ಪರ್ಯಾಯ ಶಕ್ತಿಯಾಗಿ ತೃತೀಯ ರಂಗ ಸ್ಥಾಪಿಸುವ ತೃಣಮೂಲ ಕಾಂಗ್ರೆಸ್ ನಾಯಕಿ ಪ.ಬಂಗಾಲ ನಾಯಕಿ ಮಮತಾ ಬ್ಯಾನರ್ಜಿ ನಿರ್ಧಾರದ ಬೆನ್ನಲ್ಲೇ ಓಬ್ರಿಯಾನ್ ಇಂತಹದ್ದೊಂದು ಹೇಳಿಕೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ