Select Your Language

Notifications

webdunia
webdunia
webdunia
webdunia

ಹುಡುಗಿಯ ವಿಚಾರಕ್ಕೆ ಇಂತಹ ದುಸ್ಥಿತಿ ತಂದುಕೊಂಡ್ರಾ ಈ ಹುಡುಗರು

ಹುಡುಗಿಯ ವಿಚಾರಕ್ಕೆ ಇಂತಹ ದುಸ್ಥಿತಿ ತಂದುಕೊಂಡ್ರಾ ಈ ಹುಡುಗರು
ಹೈದರಾಬಾದ್ , ಮಂಗಳವಾರ, 2 ಅಕ್ಟೋಬರ್ 2018 (10:59 IST)
ಹೈದರಾಬಾದ್ : ಹುಡುಗಿಯೊಬ್ಬಳ  ವಿಚಾರವಾಗಿ 10ನೇ ತರಗತಿಯ ಹುಡುಗರಿಬ್ಬರ ನಡುವೆ ಜಗಳವಾಗಿ ಪರಸ್ಪರ ಬೆಂಕಿ ಹಚ್ಚಿಕೊಂಡ ಘಟನೆ ತೆಲಂಗಾಣದ ಜಗ್ತಿಯಾಲ್  ನಗರದಲ್ಲಿ ನಡೆದಿದೆ.


ಈ ಇಬ್ಬರ ಹೆಸರು ಕೆ. ಮಹೇಂದರ್ ಹಾಗೂ ರವಿ ತೇಜಾ ಎಂಬುದಾಗಿ ತಿಳಿದುಬಂದಿದ್ದು,ಇವರು  ಮಿಷನರಿ ಸ್ಕೂಲ್​ನಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿದ್ದರು. ಇವರಿಬ್ಬರು ಅದೇ ಶಾಲೆಯ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದರಂತೆ.


ಭಾನುವಾರ ರಾತ್ರಿ ವೇಳೆ ಕೆ. ಮಹೇಂದರ್ ಹಾಗೂ ರವಿ ತೇಜಾ ಇಬ್ಬರೂ ಎಣ್ಣೆ ಪಾರ್ಟಿ ಮಾಡಿದ್ದಾರೆ. ಆ ವೇಳೆ ಈ ಹುಡುಗಿಯ ವಿಚಾರ ಪ್ರಸ್ತಾಪವಾಗಿ ಇಬ್ಬರು ಜಗಳವಾಡಿ ಪೆಟ್ರೋಲ್ ಸುರಿದು ಪರಸ್ಪರ ಬೆಂಕಿ ಹಚ್ಚಿಕೊಂಡಿದ್ದಾರೆ.


ಈ ಸಂದರ್ಭದಲ್ಲಿ ಅವರಿಬ್ಬರ ಜೊತೆ ಮೂರನೇ ಗೆಳೆಯ ಸಹ ಇದ್ದನೆಂದು ತಿಳಿದ ಪೊಲೀಸರು ಆತನನ್ನು ವಿಚಾರಣೆಗೊಳಪಡಿಸಿದಾಗ  ಈ ವಿಚಾರ ತಿಳಿದುಬಂದಿದೆ. ಘಟನೆಯಲ್ಲಿ ಓರ್ವ ಸ್ಥಳದಲ್ಲೆ ಸಾವನಪ್ಪಿದ್ದು, ಇನ್ನೊಬ್ಬ ನ ಸ್ಥಿತಿ ಚಿಂತಾಜನಕವಾಗಿದೆ.


ಸದ್ಯ ಎಲ್ಲ ಹೇಳಿಕೆಯನ್ನೂ ದಾಖಲಿಸಿಕೊಂಡಿರುವ ಪೊಲೀಸರು ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎನ್ನುವುದನ್ನು ತನಿಖೆ ಮಾಡುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ವಿವಾಹಕ್ಕೂ ಮುನ್ನ ಹುಟ್ಟಿದ ಮಗುವನ್ನು ಯುವತಿ ಹಾಗೂ ಪ್ರಿಯಕರ ಸೇರಿ ಮಾಡಿದ್ದೇನು ಗೊತ್ತಾ?