ಕದ್ದ ಚಿನ್ನದ ಜತೆಗೆ ಕ್ಷಮಾಪಣೆ ಪತ್ರ ಬರೆದಿಟ್ಟು ಮರಳಿಸಿದ ಕಳ್ಳ!

Webdunia
ಶುಕ್ರವಾರ, 13 ಜುಲೈ 2018 (12:12 IST)
ತಿರುವನಂತಪುರಂ: ಕಳ್ಳನ ಕೈಗೆ ಚಿನ್ನ ಸಿಕ್ಕರೆ ಮರಳಿ ಸಿಗುವುದುಂಟೆ? ಪೊಲೀಸರು ಹುಡುಕಿಕೊಟ್ಟರೆ ಕೆಲವೊಮ್ಮೆ ಸಿಗುವ ಸಾಧ್ಯತೆಯಿದೆಯೇನೋ. ಆದರೆ ಇಲ್ಲೊಬ್ಬ ಕದ್ದ ಮಾಲನ್ನು ಹಿಂದಿರುಗಿಸಿ ಕ್ಷಮಾಪಣೆ ಕೋರಿದ್ದಾನೆ.

ಇದು ನಡೆದಿರುವುದು ಕೇರಳದ ಅಂಬಲಪ್ಪುಳ ಎಂಬಲ್ಲಿ. ಬಿಜು ವಿ ನಾಯರ್ ಎಂಬವರು ಸಂಬಂಧಿಕರ ಮದುವೆಗೆಂದು ಮಂಗಳವಾರ ಮನೆಯಿಂದ ಹೊರಗೆ ಹೋಗಿದ್ದಾಗ ಕಳ್ಳತನ ನಡೆದಿದೆ.

ಮದುವೆ ಮುಗಿಸಿ ಮನೆಗೆ ಬಂದಾಗ ಘಟನೆ ತಿಳಿದುಬಂದಿದೆ. ತಕ್ಷಣ ಪೊಲೀಸರಿಗೆ ಬಿಜು ವಿ ನಾಯರ್ ದೂರು ನೀಡಿದ್ದಾರೆ. ಆದರೆ ವಿಚಿತ್ರವೆಂದರೆ ಗುರುವಾರ ಬೆಳಿಗ್ಗೆ ಅವರ ಮನೆ ಎದುರು ಪೇಪರ್ ಕವರ್ ಒಂದರಲ್ಲಿ ಕದ್ದ ಮಾಲು ಪತ್ತೆಯಾಗಿದೆ. ಜತೆಗೆ ಕಳ್ಳ ಒಂದು ಪತ್ರವನ್ನೂ ಇಟ್ಟಿದ್ದ!

ಅದರಲ್ಲಿ ತನಗೆ ಹಣದ ತೀರಾ ಅಗತ್ಯವಿತ್ತು. ಅದಕ್ಕಾಗಿ ಕದ್ದೆ. ಆದರೆ ಈಗ ಮರಳಿಸುತ್ತಿದ್ದೇನೆ. ದಯವಿಟ್ಟು ನನ್ನನ್ನು ಪೊಲೀಸರಿಗೆ ಹಿಡಿದುಕೊಡಬೇಡಿ. ನಾನು ಮಾಡಿದ ತಪ್ಪಿಗೆ ಕ್ಷಮೆ ಕೋರುತ್ತೇನೆ ಎಂದು ಬರೆದಿಟ್ಟಿದ್ದ. ಇದನ್ನು ನೋಡಿ ಬಿಜು ನಾಯರ್ ಪೊಲೀಸರಿಗೆ ನೀಡಿದ್ದ ದೂರು ವಾಪಸ್ ಪಡೆದುಕೊಂಡಿದ್ದು, ಪ್ರಕರಣ ಮುಂದುವರಿಸಿದಂತೆ ಕೋರಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಹಾಸನ ಟ್ರಕ್ ದುರಂತದ ಇನ್ನೊಂದು ವಿಡಿಯೋ ಇಲ್ಲಿದೆ

ಮನೆ ಬಾಡಿಗೆ ಕೊಡ್ತಿಲ್ಲ ಎಂದ ಸಮೀರ್ ಎಂಡಿ: ನಿಮ್ ಜೊತೆ ನಾವಿದ್ದೇವೆ ಬ್ರದರ್ ಎಂದ ವೀಕ್ಷಕರು

ಹಾಸನದಲ್ಲಿ ಟ್ರಕ್ ದುರಂತಕ್ಕೆ ಕುಮಾರಸ್ವಾಮಿ ಮನಸ್ಸು ವಿಲ ವಿಲ: ಓಡೋಡಿ ಬಂದ ನಿಖಿಲ್ ಕುಮಾರ್

ಹಾಸನ ಟ್ರಕ್ ದುರಂತಕ್ಕೀಡಾದವರಿಗೆ ಸಿಎಂ ಸಿದ್ದರಾಮಯ್ಯ ಪರಿಹಾರ

ಮುಂದಿನ ಸುದ್ದಿ
Show comments