Webdunia - Bharat's app for daily news and videos

Install App

ಪ್ರೇಯಸಿಯನ್ನು ನೋಡಲು ಬಂದ ಯುವಕ ಹೆಣವಾದ!?

Webdunia
ಗುರುವಾರ, 30 ಡಿಸೆಂಬರ್ 2021 (09:09 IST)
ತಿರುವನಂತಪುರಂ :  ತನ್ನ ಗೆಳತಿಯನ್ನು ಭೇಟಿಯಾಗಲು ಸಿನಿಮೀಯ ರೀತಿಯಲ್ಲಿ ಮನೆಗೆ ಬಂದಿದ್ದಾನೆ. ಮನೆಯ ಮಂದಿ ಎಲ್ಲಾ ಮಲಗಿದ್ದಾಗ ತನ್ನ ಪ್ರೇಯಸಿಯನ್ನು ಅಚ್ಚರಿ ಮಾಡುವ ಆತನ ಯೋಜನೆ ಕೈಕೊಟ್ಟಿದೆ.
 
ದುರದೃಷ್ಟ ಎಂದರೆ, ಪ್ರೇಯಸಿಯ ತಂದೆಯೇ ಆತನನ್ನು ಕಳ್ಳ  ಎಂದು ಇರಿದು ಕೊಂದಿರುವ ಘಟನೆ ತಿರುವನಂತಪುರಂದಲ್ಲಿ ನಡೆದಿದೆ. ಇಂದು ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ.

ಯುವಕನ ಕೊಂದ ಬಳಿಕ ಯುವತಿ ತಂದೆ ಚಾಲಕುಡಿ ಲೈನ್ ನಿವಾಸಿ ಲಾಲನ್ ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡು, ಪೊಲೀಸರಿಗೆ ಶರಣಾಗಿದ್ದಾರೆ. ರಾತ್ರಿ ತನ್ನ ಮಗಳ ಕೊಠಡಿಯಿಂದ ಶಬ್ದ ಕೇಳಿದ ನಂತರ ಕೋಣೆಯನ್ನು ತೆರೆದಿದ್ದೇನೆ ಎಂದು ಲಾಲನ್ ಪೊಲೀಸರಿಗೆ ತಿಳಿಸಿದ್ದಾರೆ.

ಕೊಠಡಿಯಿಂದ ಶಬ್ದ ಕೇಳಿ ಬಾಗಿಲು ಬಡಿದರೂ ಕೊಠಡಿ ತೆರೆಯಲಿಲ್ಲ. ನಂತರ ಲಾಲನ್ ಮನೆಯಲ್ಲಿ ತಡಕಾಡಿದ್ದು,  ಈ ವೇಳೆ ಆತನನ್ನು ಕಳ್ಳ ಎಂದು ಭಾವಿಸಿ ಚಾಕುವಿನಿಂದ ಚುಚ್ಚಿ ಕೊಂದಿರುವುದಾಗಿ ಅವರು ತಿಳಿಸಿದ್ದಾರೆ. ಈ ಸುದ್ದಿ ತಿಳಿದ ತಕ್ಷಣಕ್ಕೆ ಯುವಕನನ್ನು ಪೊಲೀಸರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ದುರದೃಷ್ಟವಶಾತ್ ಯುವಕ ಆಸ್ಪತ್ರೆಗೆ ಸಾಗಿಸುವ ಮೊದಲೇ ಉಸಿರು ಚೆಲ್ಲಿದ್ದಾನೆ. ಮೃತದೇಹವನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇರಿಸಲಾಗಿದೆ.

ಘಟನೆಯ ಕುರಿತು ಪೊಲೀಸರು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ. ವಿವರವಾದ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ನಂತರ ಪ್ರತಿಕ್ರಿಯೆ ನೀಡುವುದಾಗಿ ಸಿಐ ಮಾಧ್ಯಮಗಳಿಗೆ ತಿಳಿಸಿದರು.

ಕಳ್ಳ ಎಂದು ಯುವಕನ ಕೊಲೆ

ಲಾಲನ್, ಯುವಕನನ್ನು ಕಳ್ಳನೆಂಬ ಶಂಕೆಯ ಮೇರೆಗೆ ದಾಳಿ ನಡೆಸಿ ಹತ್ಯೆ ಮಾಡಿರುವುದಾಗಿ ತಿಳಿಸಿದ್ದಾನೆ ನಡೆಸಿರುವುದಾಗಿ ಲಾಲನ್ ತಿಳಿಸಿರುವುದಾಗಿ ಪೊಲೀಸರನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ. ಮನೆಯಲ್ಲಿ ಎಲ್ಲರೂ ಮಲಗಿರುವಾಗ ಏನೋ ಸದ್ದು ಕೇಳಿ ಬಂದಿತು.

ಗಾಬರಿಗೆ ಒಳಗಾದ ನಾನು ಚಾಕು ಹಿಡಿದು ಮನೆಯಲ್ಲಿ ಓಡಾಡಿದೆ. ಈ ವೇಳೆ ಮಗಳ ಕೋಣೆಗೆ ಹೋದೆ ಬಾಗಿಲು ಬಂದ್ ಆಗಿತ್ತು. ಸದ್ದು ಅಲ್ಲಿಂದಲೇ ಬರುತ್ತಿದ್ದ ಹಿನ್ನಲೆ ಬಾಗಿಲು ಓಡಿದು ನುಗ್ಗಿದೆ. ಈ ವೇಳೆ ಯುವಕನನ್ನು ಕಳ್ಳ ಎಂದು ಆತ ತಮಗೆ ಹಾನಿ ಮಾಡುತ್ತಾನೆ ಎಂದು ಭಾವಿಸಿ ಚುಚ್ಚಿರುವುದಾಗಿ ತಿಳಿಸಿದ್ದಾರೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಫ್ರೀಡಂ ಪಾರ್ಕ್‌ನ ಕಾಂಪೌಂಡ್ ನೆಲಸಮದಿಂದ ಪರಿಸರಕ್ಕೆ ಹಾನಿ: ಬಿಜೆಪಿ ದೂರು

ಮುಂಬೈ– ಪುಣೆ ಪ್ರಯಾಣಿಕರ ಜತೆ ಗುಡ್‌ನ್ಯೂಸ್ ಹಂಚಿಕೊಂಡ ನಿತಿನ್ ಗಡ್ಕರಿ

ಉತ್ತರಕಾಶಿ ಮೇಘಸ್ಫೋಟ: ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ–ಕಾಲೇಜಿಗೆ ರಜೆ ಘೋಷಣೆ

ಧರ್ಮಸ್ಥಳ, ಎಲ್ಲರ ಚಿತ್ತ ನಾಳೆಯ ಕೊನೆಯ ಪಾಯಿಂಟ್‌ನತ್ತ, ಇಂದಿನ ಶೋಧದಲ್ಲಿ ಬಿಗ್‌ಟ್ವಿಸ್ಟ್‌

ಉತ್ತರಕಾಶಿಯ ರಣಭೀಕರ ಮೇಘಸ್ಫೋಟ: ಮಿಡಿದ ಮೋದಿಯಿಂದ, ರಕ್ಷಣಾ ನೆರವು ಘೋಷಣೆ

ಮುಂದಿನ ಸುದ್ದಿ
Show comments