Select Your Language

Notifications

webdunia
webdunia
webdunia
webdunia

ಪ್ಲೇಟ್ ನೀಡಲು ಲೇಟ್ ಮಾಡಿದ್ದಕ್ಕೆ ಸಿಬ್ಬಂದಿಯನ್ನೇ ಹೊಡೆದು ಕೊಲೆ!

ಪ್ಲೇಟ್ ನೀಡಲು ಲೇಟ್ ಮಾಡಿದ್ದಕ್ಕೆ ಸಿಬ್ಬಂದಿಯನ್ನೇ ಹೊಡೆದು ಕೊಲೆ!
ನವದೆಹಲಿ , ಗುರುವಾರ, 9 ಫೆಬ್ರವರಿ 2023 (14:04 IST)
ನವದೆಹಲಿ : ಮದುವೆಯೊಂದರಲ್ಲಿ ಊಟದ ತಟ್ಟೆಗಳನ್ನು ನೀಡುವುದರ ಕುರಿತು ನಡೆದ ವಾಗ್ವಾದದಲ್ಲಿ ಮ್ಯೂಸಿಕ್ ಬ್ಯಾಂಡ್ನ ಸದಸ್ಯರು ಅಡುಗೆ ಸಿಬ್ಬಂದಿಯನ್ನು ಹೊಡೆದು ಹತ್ಯೆಗೈದ ಘಟನೆ ದೆಹಲಿಯಲ್ಲಿ ನಡೆದಿದೆ.

ಅಡುಗೆ ಸಿಬ್ಬಂದಿ ಸಂದೀಪ್ ಮೃತ ವ್ಯಕ್ತಿ. ದೆಹಲಿಯ ಪ್ರಶಾಂತ್ ವಿಹಾರ್ನಲ್ಲಿ ಈ ಘಟನೆ ನಡೆದಿದೆ. ಡಿಜೆ ಸೇರಿದಂತೆ ಮ್ಯೂಸಿಕ್ ಬ್ಯಾಂಡ್ನ ಸದಸ್ಯರು ಸಂದೀಪ್ ಸಿಂಗ್ ಬಳಿ ಊಟಕ್ಕೆ ಪ್ಲೇಟ್ಗಳನ್ನು ಕೇಳಿದ್ದರು.

ಈ ವೇಳೆ ಸಂದೀಪ್ ಸಿಂಗ್, ಸ್ವಚ್ಛಗೊಳಿಸಲಾಗುತ್ತಿದೆ. ಹಾಗಾಗಿ ಸ್ವಲ್ಪ ಸಮಯದ ನಂತರ ಪ್ಲೇಟ್ಗಳನ್ನು ನೀಡುತ್ತೇವೆ ಎಂದು ಆ ವಾದಕರಿಗೆ ತಿಳಿಸಿದ್ದಾನೆ.

ಪ್ಲೇಟ್ ನೀಡುವುದು ತಡವಾಗಿದ್ದರಿಂದ ಕೋಪಗೊಂಡ ಬ್ಯಾಂಡ್ ಸದಸ್ಯರು ಸಂದೀಪ್ನನ್ನು ಪ್ಲಾಸ್ಟಿಕ್ ಕ್ರೇಟ್ನಿಂದ ಥಳಿಸಿದ್ದಾರೆ. ಕೂಡಲೇ ಅಲ್ಲಿದ್ದವರು ಸಂದೀಪನನ್ನು ಆಸ್ಪತ್ರೆಗೆ ಸಾಗಿಸಿದ್ದರೂ ಆತ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. 

 

Share this Story:

Follow Webdunia kannada

ಮುಂದಿನ ಸುದ್ದಿ

ಹೋಟೆಲ್ ರೂಮ್‍ಗಳಿಗೆ ಭರ್ಜರಿ ಡಿಮ್ಯಾಂಡ್?