Select Your Language

Notifications

webdunia
webdunia
webdunia
webdunia

ಇಡೀ ಕುಟುಂಬವನ್ನೇ ಸ್ಮಶಾನ ಮಾಡಿದ ಪಾಪಿ! ಮುಂದೇನಾಯ್ತು ?

ಇಡೀ ಕುಟುಂಬವನ್ನೇ ಸ್ಮಶಾನ ಮಾಡಿದ ಪಾಪಿ! ಮುಂದೇನಾಯ್ತು ?
ಗಾಂಧಿನಗರ , ಶುಕ್ರವಾರ, 1 ಏಪ್ರಿಲ್ 2022 (09:27 IST)
ಗಾಂಧಿನಗರ : ಪತಿ ತನ್ನ ಹೆಂಡತಿ, ಇಬ್ಬರು ಹದಿಹರೆಯದ ಮಕ್ಕಳು ಮತ್ತು ಹೆಂಡತಿಯ ಅಜ್ಜಿಯನ್ನು ಕೊಂದಿರುವ ಅಮಾನುಷ ಘಟನೆಯೊಂದು ಅಹಮದಾಬಾದ್ನಲ್ಲಿ ಬೆಳಕಿಗೆ ಬಂದಿದೆ.

ಸೋನಾಲ್ಬೆನ್ ಗಾಯಕ್ವಾಡ್(37), ಅವರ ಮಗ ಗಣೇಶ್ (17), ಮಗಳು ಪ್ರಗತಿ(15) ಮತ್ತು ಸೋನಾಲ್ಬೆನ್ ಅವರ ಅಜ್ಜಿ ಸುಭದ್ರಾಬೆನ್(70) ಅವರನ್ನು ವಿನೋದ್ ಚಾಕುವಿನಿಂದ ಇರಿದು ಕ್ರೂರವಾಗಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಮೇಲೆ ವಿನೋದ್ ಮನೆಗೆ ಬೀಗ ಹಾಕಿ ಅಲ್ಲಿಂದ ಪರಾರಿಯಾಗಿದ್ದ.

ಸೋನಾಲ್ಬೆನ್ ಅವರ ತಾಯಿ ಸಂಜುಬೆನ್ ಅವರು ಪೊಲೀಸರನ್ನು ಸಂಪರ್ಕಿಸಿದ್ದು, ತನ್ನ ಮಗಳಿಗೆ ಫೋನ್ ರೀಚ್ ಆಗುತ್ತಿಲ್ಲ. ಮನೆಗೆ ಹೋಗಿ ನೋಡಿದರೆ ಬೀಗ ಹಾಕಲಾಗಿದೆ ಎಂದು ದೂರು ಕೊಟ್ಟಿದ್ದಾರೆ. ಈ ಹಿನ್ನೆಲೆ ಪೊಲೀಸರು ಅಹಮದಾಬಾದ್ನ ಓಧವ್ ಪ್ರದೇಶದ ಸೋನಾಲ್ಬೆನ್ ಅವರ ಮನೆ ಬೀಗ ಒಡೆದು ನೋಡಿದಾಗ ಅರೆ ಕೊಳೆತ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿದೆ.

ಶವ ಪತ್ತೆಯಾದ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು, ಆರೋಪಿಯನ್ನು ಹುಡುಕಲು ಪ್ರಾರಂಭ ಮಾಡಿದ್ದಾರೆ. ಈ ವೇಳೆ ಆರೋಪಿ ವಿನೋದ್ ಮಧ್ಯಪ್ರದೇಶದ ಇಂದೋರ್ನಿಂದ ಗುಜರಾತ್ಗೆ ಮರಳುತ್ತಿದ್ದಾಗ ದಾಹೋದ್ ಜಿಲ್ಲೆಯ ಎಸ್ಟಿ(ರಾಜ್ಯ ಸಾರಿಗೆ ನಿಗಮ) ಬಸ್ನಲ್ಲಿ ಸಿಕ್ಕಿ ಬಿದ್ದಿದ್ದಾನೆ.

ವಿನೋದ್ನನ್ನು ಬಂಧಿಸಿದ ಪೊಲೀಸರು ವಿಚಾರಣೆ ಮಾಡಿದಾಗ, ತನ್ನ ಹೆಂಡತಿ, ಮಕ್ಕಳು ಮತ್ತು ಹೆಂಡತಿ ಅಜ್ಜಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಅಹಮದಾಬಾದ್ ಅಪರಾಧ ವಿಭಾಗವು ಪ್ರಕಟಣೆಯಲ್ಲಿ ತಿಳಿಸಿದೆ. 

 

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀಲಂಕಾದಲ್ಲಿ ತೈಲ ಪೂರೈಕೆಯಿಂದ ಹಿಂಸಾತ್ಮಕ ಪ್ರತಿಭಟನೆ !