Select Your Language

Notifications

webdunia
webdunia
webdunia
webdunia

ನಾಯಿ ಕಾರಣಕ್ಕೆ ಬಲಿಯಾಯ್ತು ಯುವತಿಯ ಪ್ರಾಣ

ನಾಯಿ ಕಾರಣಕ್ಕೆ ಬಲಿಯಾಯ್ತು ಯುವತಿಯ ಪ್ರಾಣ
ಚೆನ್ನೈ , ಶನಿವಾರ, 2 ನವೆಂಬರ್ 2019 (13:19 IST)
ಚೆನ್ನೈ : ನಾಯಿ ಸಾಕಬೇಡ ಎಂದಿದ್ದಕ್ಕೆ ಬೇಸರಗೊಂಡ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.



ಕವಿತಾ (24) ಆತ್ಮಹತ್ಯೆ ಮಾಡಿಕೊಂಡ ಯುವತಿ. ಈಕೆ ನಾಯಿಯೊಂದನ್ನು ಸಾಕುತ್ತಿದ್ದಳು. ಆದರೆ ಈ ನಾಯಿ ಯಾವಾಗಲೂ ಬೊಗಳುತ್ತಿದ್ದರಿಂದ ಅಕ್ಕಪಕ್ಕದ ಮನೆಯವರು  ಕಿರಿಕಿರಿ ಮಾಡುತ್ತಿದ್ದರು, ಆದ್ದರಿಂದ ಇನ್ನುಂದೆ ನಾಯಿ ಸಾಕಬೇಡ, ಈ ನಾಯಿಯನ್ನು ಮನೆಯಿಂದ ಓಡಿಸು  ಎಂದು ತಂದೆ ಗದರಿದ್ದಾರೆ.



ಇದರಿಂದ ಬೇರಸಗೊಂಡ ಕವಿತಾ ನಾಯಿಯನ್ನು ಬಿಟ್ಟಿರಲಾಗದೆ ಗುರುವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮನೆಗೆ ಬಂದು ಪರಿಶೀಲಿಸಿದಾಗ ಕವಿತಾ ಬರೆದ ಡೆತ್ ನೋಟ್ ಸಿಕ್ಕಿದ್ದು, ಅದರಲ್ಲಿ ನಾಯಿಯನ್ನು ನೆಮ್ಮದಿಯಿಂದ ಬದುಕಲು ಬಿಡಿ, ಅದನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಬರೆದಿದ್ದಾಳೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯಾರ್ಥಿನಿಯ ಜೊತೆ ಅಸಭ್ಯವಾಗಿ ವರ್ತಿಸಿದ ಶಿಕ್ಷಕ ಅರೆಸ್ಟ್