Webdunia - Bharat's app for daily news and videos

Install App

ಚುಂಬಿಸಿದ ಎಂದು ಮದುವೆ ಮುರಿದು ದೂರು ನೀಡಿದ ವಧು!

Webdunia
ಗುರುವಾರ, 1 ಡಿಸೆಂಬರ್ 2022 (13:13 IST)
ಬರೀಲಿ : ಅತಿಥಿಗಳ ಸಮ್ಮುಖದಲ್ಲಿ ವೇದಿಕೆಯ ಮೇಲೆ ವರನು  ವಧುವನ್ನು ಚುಂಬಿಸಿದ ಹಿನ್ನೆಲೆ ವಧು ಮದುವೆಯನ್ನು  ಮುರಿದುಕೊಂಡಿರುವ ಘಟನೆ ಉತ್ತರ ಪ್ರದೇಶದ ಸಂಭಾಲ್ನಲ್ಲಿ ನಡೆದಿದೆ.

23 ವರ್ಷದ ಯುವತಿ ಪೋಷಕರು ನೋಡಿದ 26 ವರ್ಷದ ವಿವೇಕ ಅಗ್ನಿಹೋತ್ರಿ ಎಂಬ ಯುವಕನನ್ನು ಮದುವೆಯಾಗುತ್ತಿದ್ದಳು. ಮದುವೆ ಕಾರ್ಯಕ್ರಮವೂ ನಡೆದಿತ್ತು.

ಹಾರ ಬದಲಿಸಿದ ಬಳಿಕ ಮದುವೆಯಾಗುತ್ತಿದ್ದ ಯುವಕ ತನ್ನ ಪತ್ನಿಯಾಗಬೇಕಿದ್ದ ಯುವತಿಗೆ ವೇದಿಕೆಯ ಮೇಲೆ ಚುಂಬಿಸಿದ. ಚುಂಬನದ ಬಳಿಕ ಯುವತಿ ಮದುವೆಯನ್ನೇ ಮುರಿದು ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. 

ವರ ತನ್ನ ಸ್ನೇಹಿತರ ಜೊತೆಗೆ ಬೆಟ್ಟಿಂಗ್ ಕಟ್ಟಿ ಎಲ್ಲರ ಎದುರು ನನಗೆ ಮುತ್ತು ನೀಡಿದ್ದಾನೆ. ವೇದಿಕೆಯ ಮೇಲೆ ಇದ್ದಾಗಲೇ ಅನುಚಿತವಾಗಿ ವರ್ತಿಸಿದ್ದಾನೆ. ನನ್ನ ಸ್ವಾಭಿಮಾನದ ಬಗ್ಗೆ ಯೋಚಿಸಿಲ್ಲ.

ಅವನು ಭವಿಷ್ಯದಲ್ಲಿ ಹೇಗೆ ವರ್ತಿಸುತ್ತಾನೆ ಗೊತ್ತಿಲ್ಲ ಆದರೆ ಅವನ ನಡವಳಿಕೆಯಿಂದ ನಾನು ಆಘಾತಗೊಂಡಿದ್ದು, ಅನುಮಾನವೂ ಹೆಚ್ಚಿದೆ ಹೀಗಾಗಿ ನಾನು ಮದುವೆಯಾಗದಿರಲು ನಿರ್ಧರಿಸಿದ್ದೇನೆ ಎಂದು ವಧು ತನ್ನ ದೂರಿನಲ್ಲಿ ತಿಳಿಸಿದ್ದಾಳೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments