Webdunia - Bharat's app for daily news and videos

Install App

ಭಯೋತ್ಪಾದನೆಯನ್ನು ಬುಡ ಸಮೇತ ಕಿತ್ತುಹಾಕಬೇಕು: ಪ್ರಧಾನಿ ಮೋದಿ

Webdunia
ಬುಧವಾರ, 13 ಡಿಸೆಂಬರ್ 2023 (11:26 IST)
ಭಯೋತ್ಪಾದನೆ ಎಲ್ಲದಕ್ಕಿಂತ ಮುಖ್ಯ ಜಾಗತಿಕ ಸಮಸ್ಯೆಯಾಗಿದ್ದು, ಸಂಘಟಿತ ಹೋರಾಟದಿಂದ ಭಯೋತ್ಪಾದನೆಯನ್ನು ಬುಡಸಮೇತ ತೊಡೆದು ಹಾಕಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಗುಡುಗಿದ್ದಾರೆ.
 
ಜಗತ್ತಿನ ಕೆಲ ರಾಷ್ಟ್ರಗಳು ಈಗಲೂ ಭಯೋತ್ಪಾದನೆಯನ್ನೇ ತಮ್ಮ ರಾಜನೀತಿಯ ಅಸ್ತ್ರವನ್ನಾಗಿಸಿಕೊಂಡಿವೆ ಎಂದು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
 
ಭಯೋತ್ಪಾದಕತೆಯನ್ನು ಧರ್ಮದಿಂದ ಬೇರ್ಪಡಿಸಿ ನೋಡಬೇಕಾದ ಅಗತ್ಯವನ್ನು ಒತ್ತಿ ಹೇಳುತ್ತ, ಉಗ್ರವಾದವನ್ನು ರಾಜನೀತಿಯ ಅಸ್ತ್ರವಾಗಿಸಿಕೊಂಡಿರುವ ರಾಷ್ಟ್ರಗಳ ವಿರುದ್ಧ ಯಾವುದೇ ರಾಜಕೀಯ ರಾಜಕೀಯ ವಿಚಾರಗಳನ್ನು ಪರಿಗಣಿಸದೆ ಕ್ರಮ ಕೈಗೊಳ್ಳಬೇಕಿದೆ,' ಎಂದು ಮನವಿ ಮಾಡಿಕೊಂಡಿದ್ದಾರೆ.
 
ಉಗ್ರರಿಗೆ ನೆರವು ನೀಡುತ್ತಿರುವವರಿಂದ ದೂರಾಗಿ ಮಾನವೀಯತೆಗೆ ಬೆಲೆ ಕೊಡುವವರೊಂದಿಗೆ ನಾವು ಒಗ್ಗೂಡಬೇಕಿದೆ. ಭಯೋತ್ಪಾದನೆಯಂಥ ಸವಾಲನ್ನು ಎದುರಿಸಲು ಅಂತರರಾಷ್ಟ್ರೀಯ ಕಾನೂನುಗಳಲ್ಲಿ ಸುಧಾರಣೆ ತರಬೇಕಿದೆ, ಎಲ್ಲರೂ ಒಕ್ಕೊರಲಿನಿಂದ ಉಗ್ರವಾದದ ವಿರುದ್ಧ ಧ್ವನಿ ಎತ್ತಬೇಕಿದೆ ಎಂದು ಅವರು ಹೇಳಿದ್ದಾರೆ.
 
'ಭಯೋತ್ಪಾದನೆಗೆ ಪ್ರಾಯೋಜಕತ್ವ ಮತ್ತು ಬೆಂಬಲ ನೀಡುವವರನ್ನು ನಾವು ದೂರವಿಡಬೇಕು. ಮಾನವೀಯ ಮೌಲ್ಯಗಳಿಗೆ  ಬೆಲೆ ಕೊಡುವವರ ಬೆಂಬಲವಾಗಿ ನಿಲ್ಲಬೇಕಿದೆ. ಭಯೋತ್ಪಾದನೆಯ ಅನನ್ಯ ಸವಾಲುಗಳನ್ನು ಎದುರಿಸಲು ಅಂತಾರಾಷ್ಟ್ರೀಯ ಕಾನೂನು ಚೌಕಟ್ಟನ್ನು ಪುನರ್ ರಚಿಸುವ ಅಗತ್ಯವಿದೆ', ಎಂದು ಪ್ರಧಾನಿ ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಬ್ಬಾ ಕರ್ತವ್ಯ ನಿಷ್ಠೆಯೇ.. ಕಳ್ಳನ ಹಿಡಿಯಲು ಕೊಳಚೆ ನೀರಿನ ಗುಂಡಿಗೇ ಹಾರಿದ ಶಿವಮೊಗ್ಗ ಪೊಲೀಸರು Video

ಹಸಿವಾಗ್ತಿದೆ ಹಾಲು ಕೊಡಮ್ಮಾ.. ಕರುವಿನ ಈ ಒಂದು ವಿಡಿಯೋ ಕ್ಯೂಟ್ ಮಾತ್ರವಲ್ಲ, ಕಣ್ಣಂಚು ತೇವವಾಗಿಸುತ್ತೆ Video

Karnataka Weather: ಕರ್ನಾಟಕದಲ್ಲಿ ವಾರಂತ್ಯಕ್ಕೆ ಮಳೆಯಿರಲಿದೆಯೇ, ಇಲ್ಲಿದೆ ಹವಾಮಾನ ವರದಿ

ಭಾರೀ ಮಳೆ, ದೆಹಲಿ ಇಂದಿರಾಗಾಂಧಿ ಏರ್‌ಪೋರ್ಟ್‌ ಒಳಗೂ ನುಗ್ಗಿದ ನೀರು, Video

ಆಪರೇಷನ್ ಆಶ್ದಾರ್ ಅಡಿಯಲ್ಲಿ ಓರ್ವ ಭಯೋತ್ಪಾದಕನನ್ನು ಹೊಡೆದುರುಳಿಸಿದ ಭಾರತೀಯ ಸೇನೆ

ಮುಂದಿನ ಸುದ್ದಿ
Show comments