Select Your Language

Notifications

webdunia
webdunia
webdunia
webdunia

ವಿಜಯ್ ಮಲ್ಯಗೆ ನ್ಯಾಯಾಂಗ ನಿಂದನೆಯ ಉರುಳು

ವಿಜಯ್ ಮಲ್ಯಗೆ ನ್ಯಾಯಾಂಗ ನಿಂದನೆಯ ಉರುಳು
ನವದೆಹಲಿ , ಮಂಗಳವಾರ, 9 ಮೇ 2017 (11:49 IST)
9 ಸಾವಿರ ಕೋಟಿ ರೂ. ಸಾಲ ಮರುಪಾವತಿಸದೇ ಲಂಡನ್ನಿನಲ್ಲಿ ತಲೆಮರೆಸಿಕೊಂಡಿರುವ ಮದ್ಯ ದೊರೆ ವಿಜಯ್ ಮಲ್ಯಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮಲ್ಯ ನ್ಯಾಯಾಂಗ ನಿಂದನೆ ಮಾಡಿರುವುದು ಸ್ಪಷ್ಟವಾಗಿದ್ದು, ಜುಲೈ 10ರಂದು ಹಾಜರಾಗುವಂತೆ ಸುಪ್ರೀಂಕೋರ್ಟ್ ಟಿನೋಸ್ ಜಾರಿ ಮಾಡಿದೆ.

ಎರಡು ಆಧಾರದ ಮೇಲೆ ವಿಜಯ್ ಮಲ್ಯ ನ್ಯಾಯಾಂಗ ನಿಂದನೆ ಮಾಡಿರುವುದು ಸಾಬೀತಾಗಿದೆ.. ಜುಲೈ10ಕ್ಕೆ ಹಾಜರಾಗಿ ಶಿಕ್ಷೆಯ ಪ್ರಮಾಣದ ಬಗ್ಗೆ ವಾದ ಮಂಡಿಸಲಿ ಎಂದು ಜಸ್ಟೀಸ್ ಎ.ಕೆ. ಗೋಯೆಲ್ ಮತ್ತು ಯು.ಯು. ಲಲಿತ್ ಅವರನ್ನೊಳಗೊಂಡ ಸುಪ್ರೀಂಕೋರ್ಟ್ ಪೀಠ ಆದೇಶಿಸಿದೆ.

9000 ಕೋಟಿ ರೂ. ಸಾಲ ಮರುಪಾವತಿಸಬೇಕೆಂದು ಬ್ಯಾಂಕ್`ಗಳ ಒಕ್ಕೂಟ ಮಲ್ಯ ವಿರುದ್ಧ ಕೇಸ್ ದಾಖಲಿಸಿದ್ದವು. ಕೋರ್ಟ್ ಆದೇಶದ ಬಳಿಕವೂ ಮಲ್ಯ ಹಣ ಪಾವತಿಸಿರಲಿಲ್ಲ.

ಈ ಮಧ್ಯೆ, ಫೆಬ್ರವರಿ 2016ರಂದು ದಿಯಾಜಿಯೋ ಪಿಕ್ ಕಂಪನಿಯಿಂದ 40 ಮಿಲಿಯನ್ ಡಾಲರ್ ಹಣ ಪಡೆದ ಮಲ್ಯ, ಸಾಲ ಮರುಪಾವತಿಸದೇ ತನ್ನ ಮಕ್ಕಳಿಗೆ ವರ್ಗಾವಣೆ ಮಾಡಿದ್ದ. ವಿಜಯ್ ಮಲ್ಯ ಮಾಡಿದ ಈ ಹಣದ ವರ್ಗಾವಣೆ, ಸಾಲ ಮರುಪಾವತಿ ನ್ಯಾಯಮಂಡಳಿ ಮತ್ತು ಕರ್ನಾಟಕ ಹೈಕೋರ್ಟ್ ನೀಡಿದ ಆದೇಶಗಳೂ ಸೇರಿ ಹಲವು ಕಾನೂನು ಆದೇಶಗಳ ಉಲ್ಲಂಘನೆಯಾಗಿದೆ ಎಂದು ಬ್ಯಾಂಕ್`ಗಳ ಒಕ್ಕೂಟ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಿತ್ತು. 

Share this Story:

Follow Webdunia kannada

ಮುಂದಿನ ಸುದ್ದಿ

ಬ್ರಿಟನ್ ರಾಣಿಗೆ ಬರ್ತ್ ಡೇ ಪಾರ್ಟಿಗೆ ಆಹ್ವಾನವಿತ್ತ ಭಾರತೀಯ ಪೋರ!