Select Your Language

Notifications

webdunia
webdunia
webdunia
webdunia

ಸುಷ್ಮಾ ಸ್ವರಾಜ್ ನಿಧನದ ಬೆನ್ನಲ್ಲೇ ಸುಮಲತಾ ಮಾಡಿದ ಈ ಟ್ವೀಟ್ ಗೆ ನೆಟ್ಟಿಗರು ಫುಲ್ ಗರಂ

ಸುಷ್ಮಾ ಸ್ವರಾಜ್ ನಿಧನದ ಬೆನ್ನಲ್ಲೇ ಸುಮಲತಾ ಮಾಡಿದ ಈ ಟ್ವೀಟ್ ಗೆ ನೆಟ್ಟಿಗರು ಫುಲ್ ಗರಂ
ಬೆಂಗಳೂರು , ಬುಧವಾರ, 7 ಆಗಸ್ಟ್ 2019 (11:34 IST)
ಬೆಂಗಳೂರು : ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ನಿಧನರಾದ ಹಿನ್ನಲೆಯಲ್ಲಿ ಬಿಜೆಪಿ ಸೇರಿದಂತೆ ಹಲವು ರಾಜಕೀಯ ನಾಯಕರು ದುಃಖದಲ್ಲಿ ಮುಳುಗಿರುವಾಗ, ಸಂಸದೆ ಸುಮಲತಾ ಅಂಬರೀಶ್ ಟ್ವೀಟ್ ವೊಂದನ್ನು ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.




ಸುಷ್ಮಾ ಸ್ವರಾಜ್ ನಿಧನರಾದ ಕೆಲವು ಹೊತ್ತಿನ ನಂತರ ಸುಮಲತಾ ಅಂಬರೀಶ್ ಅವರು ಸುಷ್ಮಾ ಸ್ವರಾಜ್ ನಿಧನಕ್ಕೆ ಸಂತಾಪ ಸೂಚಿಸುವ ಬದಲು  ಬಿಜೆಪಿ ಜೊತೆಗಿನ ಡಿನ್ನರ್ ಮೀಟಿಂಗ್ ಮಾಡಿರುವ ಫೋಟೋ ಹಾಕಿ ಟ್ವೀಟ್ ಮಾಡಿದ್ದಾರೆ.


ಇದು ನೆಟ್ಟಿಗರ ಕೆಂಗಣ್ಣಿಗೆ ಕಾರಣವಾಗಿದ್ದು, ಭಾರತದ ಜನತೆಗಾಗಿ ಮಹತ್ತರವಾದ ಸೇವೆ ಸಲ್ಲಿಸಿದ ಸುಷ್ಮಾ ಸ್ವರಾಜ್ ರಂತಹ ದಿಗ್ಗಜೆಯನ್ನು ಕಳೆದುಕೊಂಡಿದ್ದೇವೆ. ಈ ಸಮಯದಲ್ಲಿ ಈ ತರಹದ ಟ್ವೀಟ್ ಮಾಡುವುದು ಸರಿಯಲ್ಲ. ಬಿಜೆಪಿಯವರ ಭಾವನೆಗೆ ಧಕ್ಕೆ ತರಬೇಡಿ ಎಂದು ಕಿಡಿಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಬನ್ನಿ ನಿಮಗೆ 1ರೂ. ನೀಡಬೇಕಿದೆ ಎಂದು ಸಾಯುವ ಕೆಲವೇ ಗಂಟೆಗೆ ಮುಂಚೆ ಸುಷ್ಮಾ ಸ್ವರಾಜ್ ಹೇಳಿದ್ಯಾರಿಗೆ ಗೊತ್ತಾ?