Select Your Language

Notifications

webdunia
webdunia
webdunia
webdunia

ಇಂದು ಬನ್ನಿ ನಿಮಗೆ 1ರೂ. ನೀಡಬೇಕಿದೆ ಎಂದು ಸಾಯುವ ಕೆಲವೇ ಗಂಟೆಗೆ ಮುಂಚೆ ಸುಷ್ಮಾ ಸ್ವರಾಜ್ ಹೇಳಿದ್ಯಾರಿಗೆ ಗೊತ್ತಾ?

ಇಂದು ಬನ್ನಿ ನಿಮಗೆ 1ರೂ. ನೀಡಬೇಕಿದೆ ಎಂದು ಸಾಯುವ ಕೆಲವೇ ಗಂಟೆಗೆ ಮುಂಚೆ ಸುಷ್ಮಾ ಸ್ವರಾಜ್ ಹೇಳಿದ್ಯಾರಿಗೆ ಗೊತ್ತಾ?
ನವದೆಹಲಿ , ಬುಧವಾರ, 7 ಆಗಸ್ಟ್ 2019 (11:13 IST)
ನವದೆಹಲಿ : ಮಂಗಳವಾರ ಹೃದಯಾಘಾತದಿಂದ ನಿಧನರಾದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಅವರು ಹೃದಯಾಘಾತಕ್ಕೊಳಗಾಗುವ ಕೆಲವು ಗಂಟೆಗಳ ಮುನ್ನ ಹಿರಿಯ ವಕೀಲರಾದ ಹರೀಶ್ ಸಾಳ್ವೆ ಅವರೊಂದಿಗೆ ಮಾತುಕತೆ ನಡೆಸಿದ್ದಾರಂತೆ.


ಕುಲಭೂಷನ್ ಜಾಧವ್ ಪ್ರಕರಣದಲ್ಲಿ ಸಮರ್ಥವಾದ ವಾದ ಮಂಡನೆ ಮಾಡಿ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಗೆಲುವು ಪಡೆದಿದ್ದ ಹಿರಿಯ ವಕೀಲರಾದ ಹರೀಶ್ ಸಾಳ್ವೆ ಅವರಿಗೆ ಮಂಗಳವಾರ ರಾತ್ರಿ 8.30ರ ಸಮಯದಲ್ಲಿ  ಕರೆ ಮಾಡಿ ಮಾತುಕತೆ ನಡೆಸಿದ ಸುಷ್ಮಾ ಸ್ವರಾಜ್ ಅವರು, ಬುಧವಾರ ಬೆಳಗ್ಗೆ 6 ಗಂಟೆಗೆ ಬನ್ನಿ. ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಗೆಲುವು ಪಡೆದಿದ್ದೀರಿ. ನಿಮ್ಮನ್ನು ಭೇಟಿ ಮಾಡಬೇಕಿದೆ. ನಿಮಗೆ ನೀಡಬೇಕಿದ್ದ ಶುಲ್ಕ 1 ರೂ. ಬಾಕಿ ಇದೆ ಎಂದು ಹೇಳಿದ್ದಾರಂತೆ.

 

ಸುಷ್ಮಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ ವಕೀಲರಾದ ಹರೀಶ್ ಸಾಳ್ವೆ ಅವರು ಈ ವಿಚಾರವನ್ನು ನೆನೆದು, ನನಗೆ ಆಹ್ವಾನ ನೀಡಿ ಈಗ ಅವರೇ ಇಲ್ಲ ಎಂದು ಭಾವುಕರಾಗಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಅಗಲಿದ ನಾಯಕಿ ಸುಷ್ಮಾ ಸ್ವರಾಜ್ ಗೆ ಅಂತಿಮ ನಮನ ಸಲ್ಲಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್