Webdunia - Bharat's app for daily news and videos

Install App

ಮಗು ಪಡೆಯುವ ಹಂಬಲದಿಂದ ನಡೆದಿದೆ ಇಂತಹ ಘೋರ ಕೃತ್ಯ

Webdunia
ಬುಧವಾರ, 1 ಮೇ 2019 (18:00 IST)
ಪಂಜಾಬ್ : ಮಗು ಪಡೆಯುವ ಆಸೆಯಿಂದ ಮಹಿಳೆಯೊಬ್ಬಳು ಮಾಂತ್ರಿಕನ ಮಾತು ಕೇಳಿ ಮಾಡಿದ ಘನಕಾರ್ಯವೆನೆಂದು ಕೇಳಿದರೆ ನಿಮ್ಮ ಎದೆಯಲ್ಲಿ ನಡುಕ ಉಂಟಾಗುತ್ತದೆ.




ರವೀಂದ್ರ ಕೌರ್ (40) ಎಂಬ ಮಹಿಳೆಗೆ ಈಗಾಗಲೇ ಮೊದಲ ಗಂಡನಿಂದ ನಾಲ್ಕು ಮಕ್ಕಳನ್ನು ಪಡೆದ ನಂತರ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ನಂತರ ಮೊದಲ ಗಂಡನಿಗೆ ವಿಚ್ಚೇದನ ನೀಡಿ ಮತ್ತೊಂದು ಮದುವೆಯಾದ ಆಕೆ ಮಗುವನ್ನು ಪಡೆಯುವ ಆಸೆಯಿಂದ ಮಾಂತ್ರಿಕನ ಬಳಿ ಪರಿಹಾರ ಕೇಳಲು ತೆರಳಿದ್ದಾಳೆ. ಆಗ ಆತ ಗರ್ಭಿಣಿ ಮಹಿಳೆಯನ್ನು ಕೊಂದು, ಭ್ರೂಣವನ್ನು ಹೊರತೆಗೆದು ಅದು ತನ್ನದೆಂದು ಹೇಳು ಎಂದು ಕ್ರೂರವಾದ ಪರಿಹಾರ ತಿಳಿಸಿದ್ದಾನೆ.


ಆಗ ರವೀಂದ್ರ ಕೌರ್ ನೆರಮನೆಯ ಏಳು ತಿಂಗಳ ಚೊಚ್ಚಲ ಗರ್ಭಿಣಿಯನ್ನು ಮನೆಗೆ ಕರೆದು ಪತಿಯ ಸಹಾಯದಿಂದ ಆಕೆಯನ್ನು ಹೊಟ್ಟೆಯನ್ನು ಕೊಯ್ದು ಭ್ರೂಣವನ್ನು ಹೊರತೆಗೆದಿದ್ದಾಳೆ. ಇದರ ಪರಿಣಾಮ ತಾಯಿ,ಮಗು ಇಬ್ಬರು ಸಾವನಪ್ಪಿದ್ದಾರೆ. ಭ್ರೂಣವನ್ನು ತಮ್ಮ ಮನೆಯ ಆವರಣದಲ್ಲೇ ಸಮಾಧಿ ಮಾಡಿದ ಪಾಪಿಗಳು ಮಹಿಳೆಯ ದೇಹವನ್ನು ಪೆಟ್ಟಿಗೆಯಲ್ಲಿ ಹಾಕಿ ಹೊರಸಾಗಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಅನುಮಾನಗೊಂಡ ಮೃತ ಮಹಿಳೆ ಪತಿ ರವೀಂದ್ರ ಕೌರ್, ಆಕೆಯ ಪತಿ, ಸ್ಥಳೀಯ ಮಾಂತ್ರಿಕ ಸೇರಿ ಹಲವರ ಮೇಲೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಒಟ್ಟು ಏಳು ಆರೋಪಿಗಳಲ್ಲಿ ಈಗಾಗಲೇ ಐವರನ್ನು ಬಂಧಿಸಿದ್ದು, ಉಳಿದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.



 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments