Webdunia - Bharat's app for daily news and videos

Install App

ಮಗು ಪಡೆಯುವ ಹಂಬಲದಿಂದ ನಡೆದಿದೆ ಇಂತಹ ಘೋರ ಕೃತ್ಯ

Webdunia
ಬುಧವಾರ, 1 ಮೇ 2019 (18:00 IST)
ಪಂಜಾಬ್ : ಮಗು ಪಡೆಯುವ ಆಸೆಯಿಂದ ಮಹಿಳೆಯೊಬ್ಬಳು ಮಾಂತ್ರಿಕನ ಮಾತು ಕೇಳಿ ಮಾಡಿದ ಘನಕಾರ್ಯವೆನೆಂದು ಕೇಳಿದರೆ ನಿಮ್ಮ ಎದೆಯಲ್ಲಿ ನಡುಕ ಉಂಟಾಗುತ್ತದೆ.




ರವೀಂದ್ರ ಕೌರ್ (40) ಎಂಬ ಮಹಿಳೆಗೆ ಈಗಾಗಲೇ ಮೊದಲ ಗಂಡನಿಂದ ನಾಲ್ಕು ಮಕ್ಕಳನ್ನು ಪಡೆದ ನಂತರ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ನಂತರ ಮೊದಲ ಗಂಡನಿಗೆ ವಿಚ್ಚೇದನ ನೀಡಿ ಮತ್ತೊಂದು ಮದುವೆಯಾದ ಆಕೆ ಮಗುವನ್ನು ಪಡೆಯುವ ಆಸೆಯಿಂದ ಮಾಂತ್ರಿಕನ ಬಳಿ ಪರಿಹಾರ ಕೇಳಲು ತೆರಳಿದ್ದಾಳೆ. ಆಗ ಆತ ಗರ್ಭಿಣಿ ಮಹಿಳೆಯನ್ನು ಕೊಂದು, ಭ್ರೂಣವನ್ನು ಹೊರತೆಗೆದು ಅದು ತನ್ನದೆಂದು ಹೇಳು ಎಂದು ಕ್ರೂರವಾದ ಪರಿಹಾರ ತಿಳಿಸಿದ್ದಾನೆ.


ಆಗ ರವೀಂದ್ರ ಕೌರ್ ನೆರಮನೆಯ ಏಳು ತಿಂಗಳ ಚೊಚ್ಚಲ ಗರ್ಭಿಣಿಯನ್ನು ಮನೆಗೆ ಕರೆದು ಪತಿಯ ಸಹಾಯದಿಂದ ಆಕೆಯನ್ನು ಹೊಟ್ಟೆಯನ್ನು ಕೊಯ್ದು ಭ್ರೂಣವನ್ನು ಹೊರತೆಗೆದಿದ್ದಾಳೆ. ಇದರ ಪರಿಣಾಮ ತಾಯಿ,ಮಗು ಇಬ್ಬರು ಸಾವನಪ್ಪಿದ್ದಾರೆ. ಭ್ರೂಣವನ್ನು ತಮ್ಮ ಮನೆಯ ಆವರಣದಲ್ಲೇ ಸಮಾಧಿ ಮಾಡಿದ ಪಾಪಿಗಳು ಮಹಿಳೆಯ ದೇಹವನ್ನು ಪೆಟ್ಟಿಗೆಯಲ್ಲಿ ಹಾಕಿ ಹೊರಸಾಗಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಅನುಮಾನಗೊಂಡ ಮೃತ ಮಹಿಳೆ ಪತಿ ರವೀಂದ್ರ ಕೌರ್, ಆಕೆಯ ಪತಿ, ಸ್ಥಳೀಯ ಮಾಂತ್ರಿಕ ಸೇರಿ ಹಲವರ ಮೇಲೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಒಟ್ಟು ಏಳು ಆರೋಪಿಗಳಲ್ಲಿ ಈಗಾಗಲೇ ಐವರನ್ನು ಬಂಧಿಸಿದ್ದು, ಉಳಿದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.



 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Vijay Rupani: ಕೊನೆಗೂ ವಿಜಯ್ ರೂಪಾನಿ ಮೃತದೇಹದ ಗುರುತು ಪತ್ತೆ

ಅಹಮದಾಬಾದ್ ವಿಮಾನ ದುರಂತ ಆಯ್ತು ಅಂತ ನಾವೇನು ಮೋದಿ ರಾಜೀನಾಮೆ ಕೇಳಿದ್ವಾ

ಇಸ್ರೇಲ್- ಇರಾನ್ ಸಂಘರ್ಷ: ವಿಮಾನಗಳ ಹಾರಾಟ ಸ್ಥಗಿತದಿಂದ ಸಂಕಷ್ಟಕ್ಕೆ ಸಿಲುಕಿದ 18 ಕನ್ನಡಿಗರು

Video: ಪ್ರಿಯಾಂಕಾ ಗಾಂಧಿ ಉದ್ಘಾಟನೆ ಮಾಡಬೇಕೆನ್ನುವಷ್ಟರಲ್ಲಿ ಬಿದ್ದೇ ಹೋಯ್ತು ಫಲಕ

ಅಹಮದಾಬಾದ್‌ ವಿಮಾನ ದುರಂತ: ಇನ್ನೂ ಗುರುತು ಪತ್ತೆಯಾಗದ ಮಾಜಿ ಸಿಎಂ ವಿಜಯ್ ರೂಪಾನಿ ಮೃತದೇಹ

ಮುಂದಿನ ಸುದ್ದಿ
Show comments