Select Your Language

Notifications

webdunia
webdunia
webdunia
webdunia

ಪಾರ್ಲಿಮೆಂಟ್ ನಲ್ಲಿ ಗಲಾಟೆ ಇಫೆಕ್ಟ್: ಹೊಸ ನಿಯಮ ತಂದ ಸ್ಪೀಕರ್ ಓಂ ಬಿರ್ಲಾ

Om Birla

Krishnaveni K

ನವದೆಹಲಿ , ಶುಕ್ರವಾರ, 20 ಡಿಸೆಂಬರ್ 2024 (10:48 IST)
ನವದೆಹಲಿ: ಪಾರ್ಲಿಮೆಂಟ್ ಮುಂಭಾಗ ನಿನ್ನೆ ನಡೆದ ಹೈಡ್ರಾಮಾ ಬಳಿಕ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಕಟ್ಟುನಿಟ್ಟಿನ ನಿಯಮವೊಂದನ್ನು ಜಾರಿಗೆ ತಂದಿದ್ದಾರೆ. ಇನ್ನು ಮುಂದೆ ಸದಸ್ಯರು ಈ ಪ್ರದೇಶದಲ್ಲಿ ಪ್ರತಿಭಟನೆ ಮಾಡುವಂತಿಲ್ಲ ಎಂದಿದ್ದಾರೆ.

ಅಮಿತ್ ಶಾ ಅವರ ಅಂಬೇಡ್ಕರ್ ಕುರಿತ ಹೇಳಿಕೆ ಖಂಡಿಸಿ ನಿನ್ನೆ ವಿಪಕ್ಷ ಸಂಸದರು ಪಾರ್ಲಿಮೆಂಟ್ ನ ಮಕರ ದ್ವಾರದ ಬಳಿ ಪ್ರತಿಭಟನೆ ನಡೆಸುತ್ತಿದ್ದರು. ಅವರಿಗೆ ಎದುರಾಗಿ ಆಡಳಿತ ಪಕ್ಷದ ಸಂಸದರೂ ಪ್ರತಿಭಟನೆ ನಡೆಸಿದ್ದು ಈ ವೇಳೆ ಎರಡೂ ಪಕ್ಷದ ಸಂಸದರ ನಡುವೆ ಘರ್ಷಣೆಯಾಗಿದೆ.

ಘಟನೆಯಲ್ಲಿ ಬಿಜೆಪಿಯ ಇಬ್ಬರು ಸಂಸದರು ಗಾಯಗೊಂಡಿದ್ದು, ಆಸ್ಪತ್ರೆ ಸೇರುವಂತಾಗಿದೆ. ಈ ಬಗ್ಗೆ ಆಡಳಿತ ಪಕ್ಷ ಮತ್ತು ವಿಪಕ್ಷ ಎರಡೂ ದೂರ-ಪ್ರತಿ ದೂರು ಸಲ್ಲಿದೆ. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಈ ರೀತಿಯ ಘಟನೆ ನಡೆದಿರುವುದು ವಿಪರ್ಯಾಸ.

ಈ ಘಟನೆಯ ನಂತರ ಸ್ಪೀಕರ್ ಓಂ ಬಿರ್ಲಾ ಇನ್ನು ಮುಂದೆ ಸಂಸತ್ತಿನ ದ್ವಾರದ ಬಳಿ ಪ್ರತಿಭಟನೆ ಮಾಡುವಂತಿಲ್ಲ ಎಂದು ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದಾರೆ. ಇನ್ನು ಮುಂದೆ ಯಾವುದೇ ಪಕ್ಷದ ಸಂಸದರು ಸಂಸತ್ ಭವನದ ದ್ವಾರದಲ್ಲಿ ಪ್ರತಿಭಟನೆ ಮಾಡುವಂತಿಲ್ಲ ಎಂದು ಆದೇಶ ಹೊರಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಟಿ ರವಿ ಬಂಧಿಸಿ ನಿರ್ಜನ ಪ್ರದೇಶದಲ್ಲಿ ವಾಹನ ನಿಲ್ಲಿಸಿದ ಪೊಲೀಸರು: ವಿಡಿಯೋ