Select Your Language

Notifications

webdunia
webdunia
webdunia
webdunia

ಕಾರ್ ಓವರ್ ಟೇಕ್ ಮಾಡಿದ್ದಕ್ಕೆ ಹತ್ಯೆ: ಬಿಜೆಪಿಯಿಂದ ಗಯಾ ಬಂದ್

ಕಾರ್ ಓವರ್ ಟೇಕ್ ಮಾಡಿದ್ದಕ್ಕೆ ಹತ್ಯೆ: ಬಿಜೆಪಿಯಿಂದ ಗಯಾ ಬಂದ್
ಗಯಾ , ಸೋಮವಾರ, 9 ಮೇ 2016 (10:14 IST)
ಜೆಡಿಯು ಎಮ್‌ಎಲ್‌ಸಿ ಪುತ್ರನಿಂದ ವಿದ್ಯಾರ್ಥಿಯ ಹತ್ಯೆ ಖಂಡಿಸಿ ಬಿಜೆಪಿ ಗಯಾ ಬಂದ್‌ಗೆ ಕರೆ ನೀಡಿದೆ. 
 
ಘಟನೆ ನಡೆದಾಗಿನಿಂದ ಆರೋಪಿ ರಾಕಿ (23) ಪರಾರಿಯಾಗಿದ್ದು, ಕ್ರಿಮಿನಲ್ ಸಂಚು ಮತ್ತು ಆರೋಪಿಗೆ ಆಶ್ರಯ ನೀಡಿದ ಆರೋಪದ ಮೇಲೆ ಪೊಲೀಸರು ಆರೋಪಿಯ ತಂದೆ ಬಿಂದಿ ಯಾದವ್‌ನನ್ನು ಬಂಧಿಸಿದ್ದಾರೆ.
 
ವರದಿಗಳ ಪ್ರಕಾರ ರಾಕಿ ದೆಹಲಿಯ ರೈಫಲ್ ಕ್ಲಬ್ ಸದಸ್ಯನಾಗಿದ್ದಾನೆ. 
 
ನಾವು ಬಿಂದಿ ಯಾದವ್ ಮತ್ತು ಅಂಗರಕ್ಷಕನನ್ನು ಬಂಧಿಸಿದ್ದೇವೆ. ಗಯಾದ ಎಸ್ಎಸ್‌ಪಿ ಗರಿಮಾ ಮಲಿಕ್ ತಿಳಿಸಿದ್ದಾರೆ. 
 
ಬಿಹಾರದ ಪ್ರಮುಖ ಉದ್ಯಮಿಯೊಬ್ಬರ ಪುತ್ರ ಆದಿತ್ಯ ಸಚ್‌ದೇವ ಶನಿವಾರ ರಾತ್ರಿ ತನ್ನ ಸ್ನೇಹಿತರ ಜತೆ ಸ್ವಿಫ್ಟ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ. ಆ ಸಂದರ್ಭದಲ್ಲಿ ಬಿಹಾರದ ಎಂಎಲ್‌ಸಿ ಮನೋರಮಾ ದೇವಿಯ ಪುತ್ರ ಕುಳಿತಿದ್ದ ರೇಂಜ್ ರೋವರ್ ಕಾರನ್ನು ಓವರ್ ಟೇಕ್ ಮಾಡಿದ್ದ. 
 
ತನ್ನ ಕಾರನ್ನು ಓವರ್ ಟೇಕ್ ಮಾಡಿದ ಎಂಬ ಕ್ಷುಲ್ಲಕ ಕಾರಣಕ್ಕೆ ರಾಕಿ  ಆದಿತ್ಯ ಮತ್ತು ಆತನ ಸ್ನೇಹಿತರ ಜತೆ ವಾಗ್ವಾದಕ್ಕೆ ಇಳಿದಿದ್ದಾನೆ. ಬಳಿಕ ತನ್ನ ಬಳಿ ಇದ್ದ ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾನೆ. ಘಟನೆಯಲ್ಲಿ ಆದಿತ್ಯ ಮೃತಪಟ್ಟಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ವೀರ ವನಿತೆ: ಅತ್ಯಾಚಾರಕ್ಕೆ ಯತ್ನಿಸಿದವನಿಗೆ ತಕ್ಕ ಶಾಸ್ತಿ