ಇತ್ತೀಚಿನ ದಿನಗಳಲ್ಲಿ ಅತ್ಯಾಚಾರ ಪ್ರಕರಣಗಳು ಮೀತಿ ಮೀರಿ ಹೋಗಿವೆ. ಮನೆ ಹೊರಗೆ, ಒಳಗೆ, ಕಚೇರಿ, ಬಸ್, ರೈಲು ಎಲ್ಲೆಂದರಲ್ಲಿ ಕಾಮುಕರ ಕಾಟ ಹೆಚ್ಚುತ್ತ ಹೋಗಿದ್ದು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮಹಿಳೆಯರು ಸಿದ್ಧರಾಗಬೇಕಿದೆ. ದೌರ್ಜನ್ಯವನ್ನು ದಿಟ್ಟತನದಿಂದ ಎದುರಿಸಿ ಸಂಭವಿಸಲಿದ್ದ ಬಹುದೊಡ್ಡ ಅಪಾಯದಿಂದ ಪಾರಾಗುವ ಮೂಲಕ ಕೊಡಗಿನ ಮಹಿಳೆಯೋರ್ವರು ಎಲ್ಲರಿಗೂ ಮಾದರಿ ಎನ್ನಿಸಿಕೊಂಡಿದ್ದಾರೆ.
ಅವರ ಹೆಸರು ಶೀಲಾ.ಕಾವೇರಿ ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ಅವರ ಮೇಲೆ ಕಾಮುಕನೊಬ್ಬ ಕೆಟ್ಟ ದೃಷ್ಟಿ ಬೀರಿದ್ದಾನೆ. ಏಕಾಏಕಿ ದಾಳಿ ನಡೆಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆದರೆ ಆತನ ದಾಳಿಗೆ ಬೆದರದ ಶೀಲಾ ಪ್ರತಿದಾಳಿ ನಡೆಸಿ ಅರ್ಧ ಗಂಟೆ ಕಾಲ ಸೆಣಸಾಡಿದ್ದಾಳೆ. ಕಾಮುಕನಿಗೆ ಕಚ್ಚಿ ಹೊಡೆದು ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಾರೆ.
ಮನೆಗೆ ಬಂದು ಪತಿ ಜಗದೀಶ್ಗೆ ವಿಚಾರ ತಿಳಿಸಿ ನಾಪೊಕ್ಲು ಠಾಣೆಯಲ್ಲಿ ದೂರು ನೀಡಿದ್ದಾಳೆ.
ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.