Webdunia - Bharat's app for daily news and videos

Install App

ಶುಭಾಂಶು ಶುಕ್ಲ ಭೂಮಿಗಿಳಿಯುತ್ತಿದ್ದಂತೇ ಗಳ ಗಳನೇ ಕಣ್ಣೀರಿಟ್ಟ ತಾಯಿ: ವಿಡಿಯೋ

Krishnaveni K
ಮಂಗಳವಾರ, 15 ಜುಲೈ 2025 (16:29 IST)
Photo Credit: X
ಫ್ಲೋರಿಡಾ: ಯಶಸ್ವೀ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಯಾತ್ರೆ ಮುಗಿಸಿ ಶುಭಾಂಶು ಶುಕ್ಲ ಸೇರಿದಂತೆ ಎಲ್ಲಾ ನಾಲ್ವರು ಗಗನಯಾತ್ರಿಗಳು ಭೂಮಿಗೆ ಬಂದಿಳಿದಿದ್ದಾರೆ. ಶುಭಾಂಶು ಭೂಮಿಗೆ ಬಂದಿಳಿಯುತ್ತಿದ್ದಂತೇ ಅವರ ತಾಯಿ ಗಳ ಗಳನೇ ಕಣ್ಣೀರು ಸುರಿಸಿದ ದೃಶ್ಯ ಈಗ ವೈರಲ್ ಆಗಿದೆ.

18 ದಿನಗಳ ಕಾಲ ಬಾಹ್ಯಾಕಾಶ ನಿಲ್ದಾಣದಲ್ಲಿ ಕಳೆದ ಶುಭಾಂಶು ಶುಕ್ಲ ಸೇರಿದಂತೆ ನಾಲ್ವರು ಗಗನಯಾತ್ರಿಗಳು ಇಂದು ಭಾರತೀಯ ಕಾಲಮಾನ ಪ್ರಕಾರ 3 ಗಂಟೆಗೆ ನೌಕೆ ಯಶಸ್ವಿಯಾಗಿ ಕ್ಯಾಲಿಫೋರ್ನಿಯಾದ ಕರಾವಳಿಗೆ ಬಂದಿಳಿದಿದೆ.

ಈ ದೃಶ್ಯವನ್ನು ಉತ್ತರ ಪ್ರದೇಶದಲ್ಲಿ ಸ್ಪೇಸ್ ಸೆಂಟರ್ ನಲ್ಲಿ ಶುಭಾಂಶು ಶುಕ್ಲ ಪೋಷಕರು, ಕುಟುಂಬಸ್ಥರು ಲೈವ್ ವೀಕ್ಷಿಸಿದ್ದಾರೆ. ಮಗ ಬರುವುದನ್ನೇ ಕಾತುರದಿಂದ ಕಾದು ಕುಳಿತು ನೋಡುತ್ತಿದ್ದ ದಂಪತಿ ನೌಕೆ ಯಶಸ್ವಿಯಾಗಿ ಬಂದಿಳಿಯುತ್ತಿದ್ದಂತೇ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

ಅದರಲ್ಲೂ ಶುಭಾಂಶು ತಾಯಿಯಂತೂ ಸಂತೋಷದಿಂದ ಗಳ ಗಳನೆ ಪತಿಯ ಹೆಗಲಿಗೊರಗಿ ಅತ್ತಿದ್ದಾರೆ. ಬಾಹ್ಯಾಕಾಶಕ್ಕೆ ಹೋಗಿ ಪ್ರಯೋಗ ನಡೆಸಿ ಯಶಸ್ವಿಯಾಗಿ ಬಂದಿಳಿಯುವುದೇ ದೊಡ್ಡ ಸಾಹಸ. ಅದರಲ್ಲೂ ಶುಭಾಂಶು ಈ ಸಾಧನೆ ಮಾಡಿದ ಕೇವಲ ಎರಡನೇ ಭಾರತೀಯ. ಹೀಗಾಗಿ ಸಹಜವಾಗಿಯೇ ಪೋಷಕರ ಮುಖದಲ್ಲಿ ಸಂಭ್ರಮ ಎದ್ದು ಕಾಣುತ್ತಿತ್ತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸುಂದರವಾಗಿದ್ದಳೆಂದು ತಲೆ ಬೋಳಿಸಿ, ವರದಕ್ಷಿಣೆ ಕಿರುಕುಳ: ಯುಎಇಯಲ್ಲಿ ಮಗುವಿನೊಂದಿಗೆ ಕೇರಳ ಮಹಿಳೆ ಆತ್ಮಹತ್ಯೆ

ಶುಭಾಂಶು ಶುಕ್ಲ ಬದಲು ದಲಿತರನ್ನು ಬಾಹ್ಯಾಕಾಶಕ್ಕೆ ಕಳುಹಿಸಬೇಕಿತ್ತು: ಕಾಂಗ್ರೆಸ್ ನಾಯಕ ಉದಿತ್ ರಾಜ್

ಬೆಂಗಳೂರು, ನೋಟ್ಸ್ ನೀಡು ನೆಪದಲ್ಲಿ ವಿದ್ಯಾರ್ಥಿನಿ ಮೇಲೆ ಶಿಕ್ಷಕರಿಬ್ಬರು, ಸ್ನೇಹಿತನಿಂದ ರೇಪ್‌

ಮಂತ್ರಾಲಯಕ್ಕೆ ಭೇಟಿ ನೀಡಿದ ಬಳಿಕ ಪೀಠಾಧಿಪತಿಯರನ್ನು ಭೇಟಿಯಾದ ಸಚಿವ ರಾಮಲಿಂಗಾರೆಡ್ಡಿ

₹1 ಕೋಟಿ ಸುಲಿಗೆಗೆ ಉದ್ಯಮಿಯ ಮಗನನ್ನೇ ಕಿಡ್ನ್ಯಾಪ್ ಮಾಡುವುದಾಗಿ ಬೆದರಿಕೆ: ಸಂಚು ವಿಫಲ

ಮುಂದಿನ ಸುದ್ದಿ
Show comments