Select Your Language

Notifications

webdunia
webdunia
webdunia
webdunia

ಯಾದವ್ ಕೌಟುಂಬಿಕ ಕಲಹದಲ್ಲಿ ಬಹುದೊಡ್ಡ ಟ್ವಿಸ್ಟ್

New twist
ಲಖನೌ , ಮಂಗಳವಾರ, 31 ಜನವರಿ 2017 (16:45 IST)
ಸಮಾಜವಾದಿ ಪಕ್ಷದಲ್ಲಿ ನಡೆಯುತ್ತಿರುವ ಆಂತರಿಕ ಕಲಹಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ತಾವು ಹೊಸಪಕ್ಷವನ್ನು ಕಟ್ಟುವುದಾಗಿ ಮುಲಾಯಂ ಸಹೋದರ, ಅಖಿಲೇಶ್ ಚಿಕ್ಕಪ್ಪ ಶಿವಪಾಲ್ ಸಿಂಗ್ ಘೋಷಿಸಿದ್ದಾರೆ. 
ಇಟವಾದಲ್ಲಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ತಮ್ಮ ಸಂಪ್ರದಾಯಿಕ ಕ್ಷೇತ್ರ ಜಸ್ವಂತ ನಗರದಿಂದ ಸಮಾಜವಾದಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದಿದ್ದಾರೆ. 
 
ಇಂದು ನಾಮಪತ್ರ ಸಲ್ಲಿಸಿದ ಶಿವಪಾಲ್, ಭೃಷ್ಟಾಚಾರವನ್ನು ತಡೆಯಲು ಯತ್ನಿಸಿದ್ದರಿಂದ ತಮ್ಮನ್ನು ಅಮಾನತು ಮಾಡಲಾಯಿತು ಎಂದರು.
 
ಮುಲಾಯಂ ಅವರನ್ನು ಕೊಂಡಾಡಿದ ಅವರು,ಮುಲಾಯಂ, ಎಸ್‌ಪಿ- ಕಾಂಗ್ರೆಸ್ ಮೈತ್ರಿ ವಿರೋಧಿಸುತ್ತಿರುವುದನ್ನು ಸಮರ್ಥಿಸಿಕೊಂಡಿದ್ದು ತಮ್ಮ ರಾಜಕೀಯ ಜೀವನದಲ್ಲಿ ನೇತಾಜಿಗೆ ಬದ್ಧನಾಗಿರುತ್ತೇನೆ ಎಂದಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಎಸ್.ಎಂ.ಕೃಷ್ಣ ಮನವೊಲಿಸುವಲ್ಲಿ ಪಕ್ಷ ಕಾರ್ಯಗತವಾಗಿದೆ: ಆಸ್ಕರ್ ಫರ್ನಾಂಡಿಸ್