Select Your Language

Notifications

webdunia
webdunia
webdunia
webdunia

ಜಯಲಲಿತಾರನ್ನು ಶಶಿಕಲಾ ಕೊಲೆ ಮಾಡಿದ್ದರು: ಎಚ್. ಪಿ. ಪಾಂಡಿಯನ್

ಜಯಲಲಿತಾರನ್ನು ಶಶಿಕಲಾ ಕೊಲೆ ಮಾಡಿದ್ದರು: ಎಚ್. ಪಿ. ಪಾಂಡಿಯನ್
Chennai , ಮಂಗಳವಾರ, 7 ಫೆಬ್ರವರಿ 2017 (12:13 IST)
ಚೆನ್ನೈ: ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಸಾವಿನ ಸುತ್ತ ಹಲವು ಅನುಮಾನಗಳು ಹರಿದಾಡುತ್ತಲಿತ್ತು. ಆದರೆ ತಮಿಳುನಾಡಿನ ಮಾಜಿ ಶಾಸಕರೊಬ್ಬರು ಶಶಿಕಲಾ ಅವರೇ ಜಯಲಲಿತಾರನ್ನು ಕೊಲೆ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

 
ಸಿಎಂ ಪಟ್ಟಕ್ಕೆ ಏರುವ ಹಾದಿಯಲ್ಲಿ ಶಶಿಕಲಾಗೆ ಹಲವು ಅಡೆತಡೆಗಳು ಉಂಟಾಗುತ್ತಲೇ ಇವೆ. ಇದೀಗ ಮಾಜಿ ಶಾಸಕ ಪಿಎಚ್ ಪಾಂಡಿಯನ್ ಅಧಿಕಾರದ ಆಸೆಗೆ ಶಶಿಕಲಾ ಅವರೇ ಜಯಲಲಿತಾರನ್ನು ಕೊಲೆ ಮಾಡಿದ್ದಾರೆ.  ಎಲ್ಲದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

ಈ ವಾರ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಬೇಕಿದ್ದ ಚಿನ್ನಮ್ಮ ಶಶಿಕಲಾಗೆ ಅಕ್ರಮ ಆಸ್ಥಿ ಪ್ರಕರಣ ಉರುಳಾಗಿ ಪರಿಣಮಿಸುವದರೊಂದಿಗೆ ಪಟ್ಟ ಸದ್ಯಕ್ಕೆ ತಪ್ಪಿ ಹೋಗಿದೆ.  ಜಯಲಲಿತಾ ಸಾವಿನ ಬಗ್ಗೆ ಹಲವು ದಿನಗಳಿಂದ ಹಲವು ಬಗೆಯ ಅನುಮಾನಗಳು ಹರಿದಾಡುತ್ತಿದ್ದವು. ಇದಕ್ಕೆಲ್ಲಾ ತೇಪೆ ಹಚ್ಚಲು ನಿನ್ನೆ ದಿಡೀರ್ ಚೆನ್ನೈನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ವೈದ್ಯ ರಿಚರ್ಡ್ ಬ್ಯಾಲೆ ಜಯಲಲಿತಾರದ್ದು ಅಸಹಜ ಸಾವಲ್ಲ ಎಂದು ತಿಪ್ಪೆ ಸಾರಿದ್ದರು.

ಆದರೆ ಇದೆಲ್ಲಾ ಶಶಿಕಲಾರನ್ನು ಅಮಾಯಕಿ ಎಂದು ಬಿಂಬಿಸುವ ಯತ್ನ ಎಂದು ವಿರೋಧಿಗಳು ಆಕ್ಷೇಪ ಎತ್ತಿದ್ದಾರೆ. ಇದೀಗ ಪಾಂಡಿಯನ್ ನೇರವಾಗಿ ಶಶಿಕಲಾ ಮೇಲೆ ಕೊಲೆ ಅಪಾದನೆ ಹೊರಿಸಿದ್ದಾರೆ. ಇದು ಸಿಎಂ ಪಟ್ಟಕ್ಕೇರುವ ಹಾದಿಯಲ್ಲಿ ಶಶಿಕಲಾಗೆ ಮತ್ತೊಂದು ಮುಳ್ಳಾಗಿ ಪರಿಣಮಿಸುವ ಎಲ್ಲಾ ಸಾಧ್ಯತೆಯಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿಧಾನ ಮಂಡಲ ಅಧಿವೇಶನದಲ್ಲಿ ಕಂಬಳ ಪ್ರತಿಧ್ವನಿ