Select Your Language

Notifications

webdunia
webdunia
webdunia
webdunia

ವಿಧಾನ ಮಂಡಲ ಅಧಿವೇಶನದಲ್ಲಿ ಕಂಬಳ ಪ್ರತಿಧ್ವನಿ

ಕಂಬಳ
Bangalore , ಮಂಗಳವಾರ, 7 ಫೆಬ್ರವರಿ 2017 (11:41 IST)
ಬೆಂಗಳೂರು: ಕರಾವಳಿಯ ಜಾನಪದ ಕ್ರೀಡೆ ಕಂಬಳವನ್ನು ಬೆಂಬಲಿಸಿ ಬಿಜೆಪಿ ಶಾಸಕ ಸುನಿಲ್ ಕುಮಾರ್ ದೇಸಾಯಿ ಧ್ವನಿಯೆತ್ತಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
 

ನಿನ್ನೆಯಂತೆ ಇಂದೂ ಸದನಕ್ಕೆ ಕಂಬಳಕ್ಕೆ ನಮ್ಮ ಬೆಂಬಲ ಎನ್ನುವ ಬಿತ್ತಿ ಪತ್ರ ಹಿಡಿದು ಆಗಮಿಸಿದ್ದ ಶಾಸಕ ಸುನಿಲ್ ಕುಮಾರ್ ಇಂದೂ ಕೂಡಾ ಅದೇ ರೀತಿ ಮಾಡಿದರು. ಅಲ್ಲದೆ ಸದನ ಆರಂಭವಾಗುತ್ತಿದ್ದ ಪ್ರಶ್ನೋತ್ತರ ವೇಳೆಯಲ್ಲಿ  ಈ ಬಗ್ಗೆ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಇದರ ಬಗ್ಗೆ ಈಗಾಗಲೇ ಆಲೋಚನೆ ಮಾಡಿದ್ದೇವೆ. ಇದೇ ಅಧಿವೇಶನದಲ್ಲೇ ಕಂಬಳದ ಪರವಾಗಿ ವಿಧೇಯಕ ತರುತ್ತೇವೆ ಎಂದುತ್ತರಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಎಸ್.ಡಿ.ಎಂ ಕಾಲೇಜಿಗೆ ರ‍್ಯಾಂಕ್‍ಗಳ ಸುರಿಮಳೆ