Webdunia - Bharat's app for daily news and videos

Install App

ಭೂತ ಉಚ್ಛಾಟಿಸುವುದಾಗಿ 48 ಲಕ್ಷ ದೋಚಿದ ಮಹಿಳೆ ಬಂಧನ

Webdunia
ಶನಿವಾರ, 31 ಅಕ್ಟೋಬರ್ 2020 (10:55 IST)
ಚೆನ್ನೈ: ಭೂತ ಉಚ್ಛಾಟಿಸುವ ನೆಪದಲ್ಲಿ ವ್ಯಕ್ತಿಯೊಬ್ಬರಿಂದ 8 ಲಕ್ಷ ರೂ. ನಗದು, ಚಿನ್ನಾಭರಣ ದೋಚಿದ ಸ್ವಯಂ ಘೋಷಿತ ದೇವಮಾನವ ಮಹಿಳೆಯನ್ನು ತಮಿಳುನಾಡಿನಲ್ಲಿ ಪೊಲೀಸರು ಬಂಧಿಸಿದ್ದಾರೆ.


ಶಿವಕುಮಾರ್ ಎಂಬ ವ್ಯಕ್ತಿ ಹಣ ಕಳೆದುಕೊಂಡವರು. ಇವರ ಪತ್ನಿ ಕೆಲವು ಸಮಯದ ಹಿಂದೆ ಸೀರೆಗೆ ಬೆಂಕಿ ತಗುಲಿ ಆಕಸ್ಮಿಕವಾಗಿ ತೀರಿಕೊಂಡಿದ್ದರು. ಈ ದುರ್ಘಟನೆಗೆ ಕಾರಣ ದುಷ್ಟ ಶಕ್ತಿಗಳು ಎಂದು ಶಿವಕುಮಾರ್ ನಂಬಿದ್ದರು.  ಹೀಗಾಗಿ ಮನೆಯಲ್ಲಿ ದುಷ್ಟ ಶಕ್ತಿಯ ದೂರ ಮಾಡಲು ಆರೋಪಿ ನಾರಾಯಣಿಯನ್ನು ಮಾಟ ಮಂತ್ರ ಮಾಡಲು ಕರೆ ತಂದಿದ್ದರು. ಮನೆಗೆ ಬಂದಿದ್ದ ನಾರಾಯಣಿ ಶಿವಕುಮಾರ್ ಅವರ ಬಳಿಯಿದ್ದ ಚಿನ್ನಾಭರಣವಲ್ಲದೆ, ಅವರ ಮನೆಗೆ ಬಂದ ನೆಂಟರಿಷ್ಟರ ಚಿನ್ನಾಭರಣಗಳನ್ನೂ ಪಡೆದು ದುಷ್ಟ ಶಕ್ತಿ ಹೋದ ಬಳಿಕ ಚಿನ್ನಾಭರಣ ಮರಳಿಸುವುದಾಗಿ ನಂಬಿಸಿದ್ದಳು. ಆದರೆ ವರ್ಷ ಕಳೆದರೂ ಚಿನ್ನಾಭರಣ ಹಿಂತಿರುಗಿಸದೇ ಇದ್ದಾಗ ಸಂಶಯಗೊಂಡ ಶಿವಕುಮಾರ್ ಪೊಲೀಸರ ಮೊರೆ ಹೋಗಿದ್ದಾರೆ. ಇದೀಗ ಪ್ರಕರಣ ಸಂಬಂಧ ಪೊಲೀಸರು ಆರೋಪಿ ನಾರಾಯಣಿ ಮತ್ತು ಆಕೆಗೆ ಸಹಾಯ ಮಾಡಿದ್ದ ಇಬ್ಬರನ್ನು ಬಂಧಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments