Select Your Language

Notifications

webdunia
webdunia
webdunia
webdunia

ಅಪರೂಪಕ್ಕೆ ರಾಜ್ಯ ಸಭೆಗೆ ಕಾಲಿಟ್ಟ ಸಚಿನ್ ತೆಂಡುಲ್ಕರ್

ಅಪರೂಪಕ್ಕೆ ರಾಜ್ಯ ಸಭೆಗೆ ಕಾಲಿಟ್ಟ ಸಚಿನ್ ತೆಂಡುಲ್ಕರ್
ನವದೆಹಲಿ , ಶುಕ್ರವಾರ, 4 ಆಗಸ್ಟ್ 2017 (05:41 IST)
ನವದೆಹಲಿ: ಸಚಿನ್ ತೆಂಡುಲ್ಕರ್ ಸಂಸದ ಎನ್ನುವ ವಿಚಾರ ಬಹುತೇಕರಿಗೆ ಮರೆತು ಹೋಗಿದೆ. ಅದನ್ನು ನೆನಪಿಸುವುದಕ್ಕೇನೋ ಎಂಬಂತೆ ತೆಂಡುಲ್ಕರ್ ನಿನ್ನೆ ರಾಜ್ಯಸಭೆಯಲ್ಲಿ ಕಾಣಿಸಿಕೊಂಡಿದ್ದಾರೆ.

 
ತೆಂಡುಲ್ಕರ್ ಸಂಸತ್ತಿನಲ್ಲಿ ಕಾಣಿಸಿಕೊಂಡಿದ್ದೇ ತಡ ಟ್ವಿಟರ್ ನಲ್ಲಿ ಪ್ರತಿಕ್ರಿಯೆಯ ಮಹಾಪೂರವೇ ಹರಿದು ಬಂದಿದೆ. ಕೆಲವರು ಕಾಲೆಳೆದರೆ ಇನ್ನು ಕೆಲವರು ವಿಡಂಬನಾತ್ಮಕವಾಗಿ ಬರೆದಿದ್ದಾರೆ.

ಒಬ್ಬರಂತೂ ತೆಂಡುಲ್ಕರ್ ರನ್ನು ಈದ್ ಮಿಲಾದ್ ಗೆ ಬರುವ ಚಂದ್ರನಿಗೆ ಹೋಲಿಸಿದ್ದಾರೆ. ಇತ್ತೀಚೆಗಷ್ಟೇ ಸಮಾಜವಾದಿ ಪಕ್ಷದ ಸದಸ್ಯರೊಬ್ಬರು ಇಂತಹ ಸಂಸದರ ಗೈರು ಹಾಜರಿಯನ್ನು ಪ್ರಶ್ನಿಸಿದ್ದರು. ಅದರ ಬೆನ್ನಲ್ಲೇ ತೆಂಡುಲ್ಕರ್ ಸಂಸತ್ತಿಗೆ ‘ಹಾಜರಿ’ ಹಾಕಿದ್ದಾರೆ.

ಇದನ್ನೂ ಓದಿ.. 50 ನೇ ಪಂದ್ಯವನ್ನು ಸ್ಮರಣೀಯವಾಗಿಸಿದ ಚೇತೇಶ್ವರ ಪೂಜಾರ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಗುಜರಾತ್ ರಾಜ್ಯದಲ್ಲಿ ಪ್ರಜಾಪ್ರಭುತ್ವ ಸತ್ತು ಹೋಗಿದೆ: ಪರೇಶ್ ರಾವಲ್