Webdunia - Bharat's app for daily news and videos

Install App

ಜಯಲಲಿತಾ ಪಕ್ಷಕ್ಕೆ ಆದ ಗತಿಯೇ ಕರುಣಾನಿಧಿ ಪಕ್ಷಕ್ಕೂ ಆಗುತ್ತಾ?

Webdunia
ಮಂಗಳವಾರ, 14 ಆಗಸ್ಟ್ 2018 (10:08 IST)
ಚೆನ್ನೈ: ಜೆ. ಜಯಲಲಿತಾ ತೀರಿಕೊಂಡ ಬಳಿಕ ಎಐಎಡಿಎಂಕೆ ಪಕ್ಷದೊಳಗೆ ಶಶಿಕಲಾ ನಟರಾಜನ್ ಮತ್ತು ಪನೀರ್ ಸೆಲ್ವಂ ನಡುವಿನ ಹೋರಾಟದ ಫಲವಾಗಿ ಪಕ್ಷ ಇಬ್ಬಾಗವಾಗಿದೆ. ಈಗ ಡಿಎಂಕೆ ಸ್ಥಿತಿಯೂ ಅದೇ ಆಗುವ ಹಂತದಲ್ಲಿದೆ.

ಎಂ ಕರುಣಾನಿಧಿ ಇಹಲೋಕ ತ್ಯಜಿಸಿ ಇನ್ನೂ ವಾರವಾಗುವ ಮೊದಲೇ ಪಕ್ಷದೊಳಗೆ ಅವರ ಇಬ್ಬರು ಪುತ್ರರ ನಡುವೆ ಅಧಿಕಾರಕ್ಕಾಗಿ ಕಚ್ಚಾಟ ತಾರಕಕ್ಕೇರಿದೆ.

ಎಂಕೆ ಅಳಗಿರಿ ಮತ್ತು ಎಂಕೆ ಸ್ಟಾಲಿನ್ ನಡುವೆ ಜಿದ್ದಾಜಿದ್ದಿ ನಡೆಯುತ್ತಿದ್ದು, ಪಕ್ಷದ ಸೂತ್ರ ತಮ್ಮದೇ ಎಂದು ಇಬ್ಬರೂ ಕಚ್ಚಾಡುತ್ತಿದ್ದಾರೆ. ಎಂಕೆ ಸ್ಟಾಲಿನ್ ಗೆ ಕರುಣಾನಿಧಿಯ ಬಲವಿತ್ತು. ಹೀಗಾಗಿಯೇ ಅವರು ತಾವೇ ಮುಂದಿನ ಡಿಎಂಕೆ ನೇತಾರ ಎನ್ನುತ್ತಿದ್ದಾರೆ. ಆದರೆ ಅಳಗಿರಿ ನನ್ನ ಬಳಿ ಕರುಣಾನಿಧಿಯ ನಿಜವಾದ ಬೆಂಬಲಿಗರಿದ್ದಾರೆ. ನಾನೇ ಮುಖ್ಯಸ್ಥ ಎನ್ನುತ್ತಿದ್ದಾರೆ.

ಇದರ ನಡುವೆ ಅಳಗಿರಿ ಮತ್ತು ಬೆಂಬಲಿಗರನ್ನು ಪಕ್ಷದಿಂದ ಸ್ಟಾಲಿನ್ ವಜಾಗೊಳಿಸಿದ್ದು, ಮತ್ತೊಂದು ಆಂತರಿಕ ಕಲಹಕ್ಕೆ ಕಾರಣವಾಗಿದೆ. ನಿನ್ನೆ ಕರುಣಾನಿಧಿ ಸಮಾಧಿಗೆ ಭೇಟಿ ನೀಡಿದ ಅಳಗಿರಿ ಹೋರಾಟದ ಸೂಚನೆ ನೀಡಿದ್ದಾರೆ. ಇದು ತಮಿಳುನಾಡನ್ನು ಮತ್ತೊಮ್ಮೆ ರಾಜಕೀಯ ಕದನದ ವೇದಿಕೆಯಾಗಿಸುವ ಲಕ್ಷಣ ಕಾಣಿಸುತ್ತಿದೆ. ಈ ಪರಿಸ್ಥಿತಿ ಲಾಭ ಪಡೆಯಲು ಈಗಷ್ಟೇ ಪಕ್ಷ ಸ್ಥಾಪಿಸಿರು ಕಮಲ್ ಹಾಸನ್, ತಮಿಳುನಾಡಿನಲ್ಲಿ ತನ್ನದೇ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿರುವ ಬಿಜೆಪಿಗೆ ವರವಾಗುವುದೇ ಎನ್ನುವುದನ್ನು ಬರುವ ದಿನಗಳಲ್ಲಿ ಕಾದು ನೋಡಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಹಮದಾಬಾದ್ ವಿಮಾನ ದುರಂತ: ಆರ್ ಎಸ್ಎಸ್, ಮುಸ್ಲಿಮರು ಮಾಡುತ್ತಿರುವ ಕೆಲಸ ನೋಡಿ

ಅಹಮದಾಬಾದ್ ವಿಮಾನ ದುರಂತ ಸ್ಥಳಕ್ಕೆ ಬರುತ್ತಿರುವ ಜನರಿಂದಲೇ ತನಿಖಾಧಿಕಾರಿಗಳಿಗೆ ತಲೆನೋವು

ನಮ್ಮವರ ಮೃತದೇಹ ಕೊಡಿ.. ಅಹಮದಾಬಾದ್ ಆಸ್ಪತ್ರೆ ಮುಂದೆ ಕುಟುಂಬಸ್ಥರ ಸಾಲು

ವಿಮಾನದ ಚಕ್ರಗಳು ಎಂಥಾ ಅಪಘಾತಕ್ಕೂ ಬೇಗ ಹಾನಿಯಾಗಲ್ಲ ಯಾಕೆ

Karnataka Weather: ಈ ವಾರದ ಹವಾಮಾನ ಬದಲಾವಣೆಯನ್ನು ತಪ್ಪದೇ ಗಮನಿಸಿ

ಮುಂದಿನ ಸುದ್ದಿ
Show comments