Select Your Language

Notifications

webdunia
webdunia
webdunia
webdunia

ರಜಿನಿಕಾಂತ್ ಶ್ರೀಲಂಕಾ ಪ್ರವಾಸ ರದ್ದು

ರಜಿನಿಕಾಂತ್ ಶ್ರೀಲಂಕಾ ಪ್ರವಾಸ ರದ್ದು
ಚೆನ್ನೈ , ಶನಿವಾರ, 25 ಮಾರ್ಚ್ 2017 (15:10 IST)
ತಮಿಳುನಾಡಿನ ಹಲವು ಸಂಘಟನೆಗಳ ವಿರೋಧದ ಹಿನ್ನೆಲೆಯಲ್ಲಿ ರಜಿನಿಕಾಂತ್ ತಮ್ಮ ಶ್ರೀಲಂಕಾ ಪ್ರವಾಸವನ್ನ ರದ್ದುಗೊಳಿಸಿದ್ದಾರೆ. 

ಏಪ್ರಿಲ್ 9ರಂದು ರಜಿನಿಕಾಂತ್ ಜಾಫ್ನಾಗೆ ಭೇಟಿ ನೀಡಬೇಕಿತ್ತು. ನಿರಾಶ್ರಿತ ತಮಿಳರಿಗೆ ಜ್ಞಾನಂ ಸೇವಾ ಸಂಸ್ಥೆ ನಿರ್ಮಿಸಿದ್ದ ಮನೆಗಳ ಹಸ್ತಾತರ ಕಾರ್ಯಕ್ರಮಕ್ಕೆ ರಜಿನಿಕಾಂತ್ ಅವರನ್ನ ಆಹ್ವಾನಿಸಿದ್ದರು. ಜನರನ್ನ ಉದ್ದೇಶಿಸಿ ರಜಿನಿ ಭಾಷಣ ಮಾಡುವ ಕಾರ್ಯಕ್ರಮವೂ ಇತ್ತು.

ಆದರೆ, ರಜಿನಿ ಭೇಟಿ ಕುರಿತಂತೆ ತಮಿಳು ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಶ್ರೀಲಂಕಾದಲ್ಲಿ ತಮಿಳರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಹೀಗಾಗಿ, ಶ್ರೀಲಂಕಾಗೆ ಭೇಟಿ ನೀಡಬಾರದೆಂದು ಸಂಘಟನೆಗಳು ಒತ್ತಾಯಿಸಿದ್ದವು. ಒತ್ತಾಯಕ್ಕೆ ಮಣಿದ ರಜಿನಿಕಾಂತ್ ತಮ್ಮ ಪ್ರವಾಸ ರದ್ದುಗೊಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಲಸಕ್ಕೆ ಬಾರದ ದೇವರ ಮಂದಿರ ಕಟ್ಟಬೇಕಿಲ್ಲ: ಪ್ರೊ. ಎಸ್. ಭಗವಾನ್