Select Your Language

Notifications

webdunia
webdunia
webdunia
webdunia

ಕೆಲಸಕ್ಕೆ ಬಾರದ ದೇವರ ಮಂದಿರ ಕಟ್ಟಬೇಕಿಲ್ಲ: ಪ್ರೊ. ಎಸ್. ಭಗವಾನ್

ಕೆಲಸಕ್ಕೆ ಬಾರದ ದೇವರ ಮಂದಿರ ಕಟ್ಟಬೇಕಿಲ್ಲ: ಪ್ರೊ. ಎಸ್. ಭಗವಾನ್
Raichur , ಶನಿವಾರ, 25 ಮಾರ್ಚ್ 2017 (15:07 IST)
ರಾಯಚೂರು: ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುವ ಅಗತ್ಯವಿಲ್ಲ. ಅದರ ಬದಲು ಶಾಲೆ, ಕಾಲೇಜು ಕಟ್ಟಿ ಎಂದು ಮತ್ತೊಮ್ಮೆ ಹಿಂದೂ ದೇವರ ಬಗ್ಗೆ ಪ್ರೊ. ಎಸ್. ಭಗವಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

 

ದೇಶದ ಮೇಲೆ 26 ಬಾರಿ ದಾಳಿಯಾಗಿದೆ. ಆಗ ರಾಮ ಎಲ್ಲಿದ್ದ? ಕೃಷ್ಣ, ಚಾಮುಂಡಿ ಏನು ಮಾಡ್ತಾ ಇದ್ದರು? ಇಂತಹ ಕೆಲಸಕ್ಕೆ ಬಾರದ ದೇವರ ಮಂದಿರಗಳನ್ನು ಕಟ್ಟುವ ಅಗತ್ಯವಿಲ್ಲ. ಅದರ ಬದಲು ಜನರಿಗೆ ಉಪಯೋಗವಾಗುವಂತಹ ಶಾಲೆ ಕಟ್ಟಿ ಎಂದು ಭಗವಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

 
ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ, ರಾಯಚೂರಿನಲ್ಲಿ ಪತ್ರಿಕಾಗೋಷ್ಠಿಯೊಂದರಲ್ಲಿ ಅವರು ಈ ರೀತಿ ಹೇಳಿಕೆ ನೀಡಿದ್ದಾರೆ. ಹಿಂದೆಯೂ ಹಿಂದೂ ದೇವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಅವರು ವಿವಾದಕ್ಕೊಳಗಾಗಿದ್ದರು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರೂ ಸಿಕ್ಸರ್‌ ಹೊಡೆಯುವ ಬ್ಯಾಟ್ಸ್‌ಮೆನ್‌ಗಳೇ: ಸಚಿವ ಖಾದರ್