Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರೂ ಸಿಕ್ಸರ್‌ ಹೊಡೆಯುವ ಬ್ಯಾಟ್ಸ್‌ಮೆನ್‌ಗಳೇ: ಸಚಿವ ಖಾದರ್

ಯು.ಟಿ.ಖಾದರ್
ಗುಂಡ್ಲುಪೇಟೆ , ಶನಿವಾರ, 25 ಮಾರ್ಚ್ 2017 (14:42 IST)
ಉಪಚುನಾವಣೆ ಪ್ರಚಾರದಲ್ಲಿ ನಾವೆಲ್ಲಾ ನೈಟ್ ವಾಚ್‌ಮೆನ್‌ಗಳು, ನಮ್ಮ ಮುಖ್ಯ ಬ್ಯಾಟ್ಸ್‌ಮೆನ್‌ಗಳು ಇನ್ನೂ ಫೀಲ್ಡೀಗಿಳಿದಿಲ್ಲ. ಪ್ರತಿಯೊಬ್ಬರು ಸಿಕ್ಸರ್ ಹೊಡೆಯುವ ಘಟಾನುಘಟಿ ಕ್ರಿಕೆಟಿಗರು ಎಂದು ಆಹಾರ ಖಾತೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
 
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೈಸೂರಿಗೆ ಬಂದು ಪ್ರಚಾರ ಮಾಡಿದ್ರೆ ಕೇಳೋದೆ ಬೇಡ. ಎದುರಾಳಿಗಳು ಕೊಚ್ಚಿಕೊಂಡು ಹೋಗ್ತಾರೆ ಎಂದು ಅಬ್ಬರಿಸಿದರು. 
 
ನಮ್ಮ ಮುಖ್ಯ ಬ್ಯಾಟ್ಸ್‌ಮೆನ್‌ಗಳು ಇನ್ನೂ ಕಣಕ್ಕೆ ಇಳಿದಿಲ್ಲ. ಅವರು ಸಿಂಗಲ್ ರನ್ ಹೊಡೆಯುವುದಿಲ್ಲ. ಎಲ್ಲರೂ ಸಿಕ್ಸರ್ ಹೊಡೆಯುವ ಬ್ಯಾಟ್ಸ್‌ಮೆನ್‌ಗಳೇ, ನಾಳೆಯಿಂದ ಚುನಾವಣೆ ಪ್ರಚಾರ ಕಣಕ್ಕೆ ಇಳಿಯಲಿದ್ದಾರೆ ಎಂದು ಆಹಾರ ಖಾತೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಆದಿತ್ಯನಾಥ್ ವಿರುದ್ಧ ಟ್ವೀಟ್ ಟೀಕೆ: ಐಪಿಎಸ್ ಅಧಿಕಾರಿ ಸಸ್ಪೆಂಡ್