ಮಹದೇವ್ ಬೆಟ್ಟಿಂಗ್ ಆಪ್ ಪ್ರಕರಣ ಸಂಬಂಧ ಅದ್ದೂರಿಯಾಗಿ ನಡೆಯುತ್ತಿದ್ದ ಮದುವೆ ಸಮಾರಂಭಕ್ಕೆ ಇಡಿ ಅಧಿಕಾರಿಗಳು ದಾಳಿ ನಡೆಸಿದ ಪರಿಣಾಮ ವರ ಓಡಿ ಹೋಗಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
ಮಹದೇವ್ ಬೆಟ್ಟಿಂಗ್ ಆಪ್ ಪ್ರಕರಣದ ಪ್ರಮುಖ ಆರೋಪಿ ಸೌರಭ್ ಅಹುಜಾ ಹುಡುಕಾಟಕ್ಕಾಗಿ ಜಾರಿ ನಿರ್ದೇಶನಾಲಯ (ಇಡಿ) ಜುಲೈ 2 ರಂದು ಜೈಪುರದ ಪಂಚತಾರಾ ಹೋಟೆಲ್ ಮೇಲೆ ದಾಳಿ ನಡೆಸಿತು. ಈ ಸಂದರ್ಭದಲ್ಲಿ ಸೌರಭ್ ಅವರ ವಿವಾಹ ನೆರವೇರುತ್ತಿದ್ದು. ಇಡಿ ದಾಳಿ ದಾಳಿ ನಡೆಸುವ ಮುನ್ಸೂಚನೆ ಮೇರೆಗೆ ಕೆಲವೇ ಕ್ಷಣಗಳಲ್ಲಿ ಸಹುಜಾ ಎಸ್ಕೇಪ್ ಆಗಿದ್ದಾನೆ.
ನವವಿವಾಹಿತ ವಧುವನ್ನು ED ಯಿಂದ ಸುದೀರ್ಘವಾಗಿ ಪ್ರಶ್ನಿಸಲಾಯಿತು, ಮದುವೆಯಲ್ಲಿ ಹಲವಾರು ಕುಟುಂಬ ಸದಸ್ಯರು ಮತ್ತು ಅತಿಥಿಗಳು ಉಪಸ್ಥಿತರಿದ್ದರು. ಅಹುಜಾಗೆ ಸಹಾಯ ಮಾಡಿದ ಮತ್ತು ತಪ್ಪಿಸಿಕೊಳ್ಳಲು ಅನುಕೂಲ ಮಾಡಿದ ಆರೋಪದ ಮೇಲೆ ಮೂವರು ವ್ಯಕ್ತಿಗಳನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಮೂವರನ್ನು ರಾಯ್ಪುರಕ್ಕೆ ಕರೆದೊಯ್ಯಲಾಯಿತು.
ಈ ದಾಳಿ ಜೈಪುರದ ಹೋಟೆಲ್ ಸರ್ಕ್ಯೂಟ್ನಲ್ಲಿ ಸಂಚಲನ ಮೂಡಿಸಿದೆ. ಪ್ರಾಸಂಗಿಕವಾಗಿ, ಫೇರ್ಮಾಂಟ್ ಹೋಟೆಲ್ ಈ ಹಿಂದೆ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕರನ್ನು ಇರಿಸಿದಾಗ ಸುದ್ದಿ ಮಾಡಿತ್ತು.