Webdunia - Bharat's app for daily news and videos

Install App

Indore Raja Raguvamshi murder: ಮಗನಂತೇ ನಾಟಕವಾಡಿ, ರಘುವಂಶಿ ಸಾವಿನ ದಿನ ತಬ್ಬಿ ಸಾಂತ್ವನಿಸಿದ್ದ ಆರೋಪಿ ರಾಜ್

Krishnaveni K
ಮಂಗಳವಾರ, 10 ಜೂನ್ 2025 (13:10 IST)
ಇಂಧೋರ್: ರಾಜ ರಘುವಂಶಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೊಂದೇ ಶಾಕಿಂಗ್ ವಿಚಾರಗಳು ಬಯಲಾಗುತ್ತಿದೆ. ಸೋನಮ್ ಪ್ರಿಯಕರ, ಹಂತಕ ರಾಜ್ ಖುಶ್ವಾ ಮನೆ ಮಗನಂತೇ ನಾಟಕವಾಡಿ ರಘುವಂಶಿ ಅಂತಿಮ ಕ್ರಿಯೆ ವೇಳೆ ಬಂದು ಮನೆಯವರನ್ನು ತಬ್ಬಿ ಸಾಂತ್ವನಿಸಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ.

ರಘುವಂಶಿ ಪತ್ನಿ ಸೋನಮ್ ಜೊತೆ ರಾಜ್ ಖುಶ್ವಾಗೆ ಪ್ರೇಮ ಸಂಬಂಧವಿತ್ತು. ಇದೇ ಕಾರಣಕ್ಕೆ ರಘುವಂಶಿಯನ್ನು ಸೋನಮ್ ಮತ್ತು ರಾಜ್ ತಮ್ಮ ಸ್ನೇಹಿತರ ಸಹಾಯದೊಂದಿಗೆ ಮೇಘಾಲಯಕ್ಕೆ ಹನಿಮೂನ್ ನೆಪದಲ್ಲಿ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದರು.

ಜೂನ್ 2 ರಂದು ರಘುವಂಶಿ ಮೃತದೇಹವನ್ನು ಪೊಲೀಸರು ಪತ್ತೆ ಮಾಡಿದ್ದರು. ಇದಾದ ಬಳಿಕ ಅಂತಿಮ ಕ್ರಿಯೆ ವೇಳೆ ರಘುವಂಶಿ ಮನೆಗೆ ರಾಜ್ ಖುಶ್ವಾ ಬಂದಿದ್ದ. ಸೋನಮ್ ತಂದೆಯನ್ನು ತಬ್ಬಿ ಹಿಡಿದು ನಾನು ನಿಮ್ಮ ಮಗನಂತೆ, ಸಮಾಧಾನ ಮಾಡಿಕೊಳ್ಳಿ ಎಂದು ಸಾಂತ್ವನ ಹೇಳುವ ನಾಟಕವನ್ನೂ ಆಡಿದ್ದ.

ಸೋನಮ್ ಮನೆಯಿಂದ ಈತನ ಮನೆ ಕೇವಲ ಒಂದೂವರೆ ಕಿ.ಮೀ. ದೂರದಲ್ಲಿತ್ತು. ಬಾಲ್ಯದಿಂದಲೂ ಆತ ಸೋನಮ್ ಮನೆಯವರಿಗೆ ಆಪ್ತನಾಗಿದ್ದನಂತೆ. ರಘುವಂಶಿ ಕೊಲೆ ಬಳಿಕವೂ ಸಾಂತ್ವನ ಹೇಳುವ ನೆಪದಲ್ಲಿ ಆತ ಮನೆಗೆ ಬಂದಿದ್ದ. ಆದರೆ ಆತನೇ ಈ ಕೃತ್ಯದಲ್ಲಿ ಭಾಗಿಯಾಗಿದ್ದಾನೆ ಎಂದು ನಮಗೆ ಗೊತ್ತೇ ಇರಲಿಲ್ಲ ಎಂದು ಸೋನಮ್ ತಂದೆ ಹೇಳಿಕೊಂಡಿದ್ದಾರೆ. ಮನೆ ಮಗನಂತಿದ್ದವನಿಗೇ ಬೆನ್ನಿಗೆ ಚೂರಿ ಹಾಕಿದ ಎಂದರೆ ಸೋನಮ್ ಕುಟುಂಬದವರಿಗೆ ನಂಬಲೂ ಸಾಧ್ಯವಾಗುತ್ತಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಾರದ ಹಿಂದೆಯಷ್ಟೇ ಮುಂಬಡ್ತಿ ಪಡೆದಿದ್ದ ಡಿ ರೂಪಾ ಸೇರಿ ಹಲವು ಅಧಿಕಾರಿಗಳ ವರ್ಗಾವಣೆ

Raja Raghuvanshi murder case: ಮೇಘಾಲಯ SIT ಸೋನಮ್ ಮುಂದಿಡುವ ಪ್ರಶ್ನೆಗಳು ಹೀಗಿದೆ

Air India Flight Crash: ಅಪಘಾತದ ನಂತರದ ಸ್ಫೋಟ, ಬೆಂಕಿಯ ತೀವ್ರತೆಗೆ ಇದೇ ಕಾರಣ

Air India Flight Crash: ವಿಮಾನದಲ್ಲಿದ್ರು ಗುಜರಾತ್‌ನ ಮಾಜಿ ಸಿಎಂ, ಇಲ್ಲಿದೆ ಪುರಾವೆ

ಮುಂದಿನ ಸುದ್ದಿ
Show comments