Publish Date: Thu, 09 Jul 2026 (16:47 IST)
Updated Date: Thu, 09 Jul 2026 (16:51 IST)
ತಮಿಳುನಾಡಿನ ಸಿರ್ಕಾಳಿ (SirKazhi) ಸಮೀಪದ ರೈಲ್ವೆ ಕ್ರಾಸಿಂಗ್ನಲ್ಲಿ ಸಮಯಪ್ರಜ್ಞೆ ಮತ್ತು ಅದಮ್ಯ ಸಾಹಸದ ರೋಮಾಂಚನಕಾರಿ ಘಟನೆಯೊಂದು ನಡೆದಿದೆ. ತೀವ್ರ ವೇಗವಾಗಿ ಧಾವಿಸಿ ಬರುತ್ತಿದ್ದ ರೈಲಿಗೆ ಸಿಲುಕಿ ಸಾಯಲಿದ್ದ ವ್ಯಕ್ತಿಯನ್ನು, ಅಲ್ಲಿ ಕರ್ತವ್ಯದಲ್ಲಿದ್ದ ರೈಲ್ವೆ ಗೇಟ್ಕೀಪರ್ ಒಬ್ಬರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕ್ಷಣಾರ್ಧದಲ್ಲಿ ರಕ್ಷಿಸಿದ್ದಾರೆ.
ಸಿರ್ಕಾಳಿ ಸಮೀಪದ ಗೇಟ್ ಬಳಿ ಗೇಟ್ ಹಾಕಿ, ವೇಗದ ರೈಲು ಬರುವುದನ್ನು ಕಾಯಲಾಗುತ್ತಿತ್ತು. ಆದರೆ, ವ್ಯಕ್ತಿಯೊಬ್ಬ ಮುನ್ನೆಚ್ಚರಿಕೆಯನ್ನು ನಿರ್ಲಕ್ಷಿಸಿ ಅಪಾಯಕಾರಿಯಾಗಿ ಹಳಿ ದಾಟಲು ಮುಂದಾಗಿದ್ದನು. ಅದೇ ಸಮಯಕ್ಕೆ ಎಕ್ಸ್ಪ್ರೆಸ್ ರೈಲೊಂದು ತೀವ್ರ ವೇಗದಲ್ಲಿ ಅಲ್ಲಿಗೆ ಧಾವಿಸಿ ಬಂದಿದೆ. ಹಳಿ ದಾಟುತ್ತಿದ್ದ ವ್ಯಕ್ತಿಗೆ ರೈಲು ಅತ್ಯಂತ ಸಮೀಪ ಬಂದಿದ್ದು, ಇನ್ನೇನು ಅಪ್ಪಳಿಸಬೇಕು ಎನ್ನುವಷ್ಟರಲ್ಲಿ ಗೇಟ್ಕೀಪರ್ ಕಣ್ಣಿಮೆಯಿಕ್ಕುವಷ್ಟರಲ್ಲಿ ಅಪಾಯವನ್ನು ಗ್ರಹಿಸಿದ್ದಾರೆ.
ಕ್ಷಣವೂ ತಡಮಾಡದ ಗೇಟ್ಕೀಪರ್, ಧಾವಿಸಿ ಹೋಗಿ ಆ ವ್ಯಕ್ತಿಯನ್ನು ಹಳಿಯಿಂದ ಆಚೆಗೆ ಎಳೆದಿದ್ದಾರೆ. ಗೇಟ್ಕೀಪರ್ ವ್ಯಕ್ತಿಯನ್ನು ಬದಿಗೆ ತಳ್ಳಿದ ಕೇವಲ 2-3 ಸೆಕೆಂಡುಗಳಲ್ಲಿ ರೈಲು ಅದೇ ಹಳಿಯಲ್ಲಿ ಅತಿ ವೇಗವಾಗಿ ಹಾದುಹೋಗಿದೆ. ಗೇಟ್ಕೀಪರ್ ತೋರಿದ ಈ ಸಮಯಪ್ರಜ್ಞೆ ಮತ್ತು ಅದ್ಭುತ ಧೈರ್ಯದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಹಾಗೂ ರೈಲ್ವೆ ಅಧಿಕಾರಿಗಳು ಅವರ ಜೀವಪರ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ