Select Your Language

Notifications

webdunia
webdunia
webdunia
webdunia

ತ್ರಿಶ್ಶೂರ್ ನಲ್ಲಿ ಮೋದಿ, ವಯನಾಡಿನಲ್ಲಿ ಇಂದು ರಾಹುಲ್ ಗಾಂಧಿ ಅಬ್ಬರ

PM Modi-Rahul Gandhi

Krishnaveni K

ತಿರುವನಂತಪುರಂ , ಸೋಮವಾರ, 15 ಏಪ್ರಿಲ್ 2024 (11:24 IST)
Photo Courtesy: Twitter
ತಿರುವನಂತಪುರಂ: ಲೋಕಸಭೆ ಚುನಾವಣೆ ಪ್ರಚಾರಕ್ಕಾಗಿ ಇಂದು ಕೇರಳದಲ್ಲಿ ಪ್ರಧಾನಿ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ.

ನಿನ್ನೆ ಕರ್ನಾಟಕದಲ್ಲಿ ಮೋದಿ ಅಬ್ಬರದ ಪ್ರಚಾರ ನಡೆಸಿದ್ದರು. ಇಂದು ದಕ್ಷಿಣದ ಮತ್ತೊಂದು ರಾಜ್ಯ ಕೇರಳದಲ್ಲಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ. ಕೇರಳದ ತ್ರಿಶ್ಶೂರ್ ನಲ್ಲಿ ಮೋದಿ ಇಂದು ಪ್ರಚಾರ ನಡೆಸಲಿದ್ದಾರೆ. ಇಲ್ಲಿಂದ ನಟ, ಬಿಜೆಪಿ ನಾಯಕ ಸುರೇಶ್ ಗೋಪಿ ಕಣಕ್ಕಿಳಿಯುತ್ತಿದ್ದಾರೆ.

ಸುರೇಶ್ ಗೋಪಿಗೆ ಸಾಕಷ್ಟು ಜನ ಬೆಂಬಲವಿದೆ. ಹೀಗಾಗಿ ಅವರು ಗೆಲ್ಲಬಹುದು ಎಂಬ ಭರವಸೆ ಬಿಜೆಪಿಯಲ್ಲಿದೆ. ಇದಕ್ಕೆ ಮೊದಲು ಸುರೇಶ್ ಗೋಪಿ ಮಗಳ ಮದುವೆಯಲ್ಲೂ ಮೋದಿ ಪಾಲ್ಗೊಂಡಿದ್ದರು. ಇದೀಗ ಅವರ ಪರವಾಗಿ ಪ್ರಚಾರ ನಡೆಸಲು ದೇವರ ನಾಡಿಗೆ ಬರಲಿದ್ದಾರೆ.

ಇನ್ನೊಂದೆಡೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡಾ ಇಂದು ವಯನಾಡಿನಲ್ಲಿ ಪ್ರಚಾರ ನಡೆಸಲಿದ್ದಾರೆ. ರಾಹುಲ್ ವಯನಾಡಿನ ಹಾಲಿ ಸಂಸದ ಕೂಡಾ. ಈ ಬಾರಿಯೂ ಮತ್ತೊಮ್ಮೆ ಇಲ್ಲಿಂದಲೇ ಸ್ಪರ್ಧೆ ನಡೆಸುತ್ತಿದ್ದಾರೆ. ಹೀಗಾಗಿ ವಯನಾಡಿನಲ್ಲಿ ಇಂದು ಹಲವು ಕಾರ್ಯಕ್ರಮಗಳಲ್ಲಿ ರಾಹುಲ್ ಗಾಂಧಿ ಭಾಗಿಯಾಗಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಂಗಳೂರಿನಲ್ಲಿ ಮೋದಿ ಸ್ವಾಗತಿಸಿದ ಹುಲಿ ಡ್ಯಾನ್ಸರ್ ಗಳು