Select Your Language

Notifications

webdunia
webdunia
webdunia
webdunia

ಪೂಜ್ಯರು ಜನಿಸಿದ ನಾಡಿನ ಮಣ್ಣನಿಂದ ಮಾಡಿದ ರಸಗುಲ್ಲಾವನ್ನು ಪ್ರಸಾದದಂತೆ ಸ್ವೀಕರಿಸುತ್ತೇನೆ-ಪ್ರಧಾನಿ ಮೋದಿ

ಪೂಜ್ಯರು ಜನಿಸಿದ ನಾಡಿನ ಮಣ್ಣನಿಂದ ಮಾಡಿದ ರಸಗುಲ್ಲಾವನ್ನು ಪ್ರಸಾದದಂತೆ ಸ್ವೀಕರಿಸುತ್ತೇನೆ-ಪ್ರಧಾನಿ ಮೋದಿ
ನವದೆಹಲಿ , ಮಂಗಳವಾರ, 30 ಏಪ್ರಿಲ್ 2019 (10:32 IST)
ನವದೆಹಲಿ : ಪ್ರಧಾನಿ ಮೋದಿಗೆ ಮಣ್ಣಿನಿಂದ ಮಾಡಿದ ರಸಗುಲ್ಲಾ ನೀಡುತ್ತೇನೆ ಎಂದ ಮಮತಾ ಬ್ಯಾನರ್ಜಿಗೆ ಪ್ರಧಾನಿ ಮೋದಿ ಅವರು ತಕ್ಕ ಉತ್ತರ ನೀಡಿದ್ದಾರೆ. 




ಅಕ್ಷಯ್ ಕುಮಾರ್ ಜೊತೆಗಿನ ಸಂದರ್ಶನದಲ್ಲಿ ಪ್ರಧಾನಿ ತಮಗೆ ಮಮತಾ ಬ್ಯಾನರ್ಜಿ ಪ್ರತೀ ವರ್ಷ ಕುರ್ತಾ ಮತ್ತು ಸಿಹಿಯನ್ನ ಕಳುಹಿಸುತ್ತಾರೆ ಎಂದು ಹೇಳಿದ್ದರು. ಇದರಿಂದ ಆಕ್ರೋಶ ಗೊಂಡ ಸಿಎಂ ಮಮತಾ ಬ್ಯಾನರ್ಜಿ, ಮೋದಿಗೆ ಜೇಡಿಮಣ್ಣು ಮತ್ತು ಕಲ್ಲುಗಳಿರುವ ರಸಗುಲ್ಲಾಗಳನ್ನ ಕೊಡುತ್ತೇವೆ. ಈ ರಸಗುಲ್ಲಾ ತಿಂದು ಮೋದಿಯ ಎಲ್ಲಾ ಹಲ್ಲುಗಳೂ ಉದುರಿಹೋಗಬೇಕು ಎಂದು ಕಿಡಿಕಾರಿದ್ದರು.


ಈ ಹೇಳಿಕೆಗೆ ಸಮಾಧಾನದಿಂದ ಪ್ರತಿಕ್ರಿಯೆ ನೀಡಿದ ಪ್ರಧಾನಿ ಮೋದಿಯವರು, ಬಂಗಾಳ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಜೆಸಿ ಬೋಸ್, ನೇತಾಜಿ ಸುಭಾಶ್ ಚಂದ್ರ ಬೋಸ್ ಅಂತಹ ಪೂಜ್ಯರು ಜನಿಸಿದ ನಾಡಿನ ಮಣ್ಣು, ಇಂಥಹ ಮಣ್ಣಿನಿಂದ ಮಾಡಿದ ರಸಗುಲ್ಲಾಗಳನ್ನು ಪಡೆಯುವುದು ನನ್ನ ಭಾಗ್ಯ, ಅದನ್ನು ನಾನು ಪ್ರಸಾದದಂತೆ ಸ್ವೀಕರಿಸುತ್ತೇನೆ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

Share this Story:

Follow Webdunia kannada

ಮುಂದಿನ ಸುದ್ದಿ

ಸರಣಿ ಬಾಂಬ್‍ ದಾಳಿಯ ಹಿನ್ನಲೆ; ಬುರ್ಖಾಕ್ಕೆ ನಿಷೇಧ ಹೇರಿದ ಶ್ರೀಲಂಕಾ