Select Your Language

Notifications

webdunia
webdunia
webdunia
webdunia

ತಾಯ್ನಾಡಿಗೆ ಮರಳಿ ಬಂದ ಧೀರ ಯೋಧನಿಗೆ ಸ್ವಾಗತ ಕೋರಿದ ಪ್ರಧಾನಿ ಮೋದಿ

ತಾಯ್ನಾಡಿಗೆ ಮರಳಿ ಬಂದ ಧೀರ ಯೋಧನಿಗೆ ಸ್ವಾಗತ ಕೋರಿದ ಪ್ರಧಾನಿ ಮೋದಿ
ನವದೆಹಲಿ , ಶನಿವಾರ, 2 ಮಾರ್ಚ್ 2019 (08:19 IST)
ನವದೆಹಲಿ : ಶತ್ರು ರಾಷ್ಟ್ರದಿಂದ  ಮರಳಿ ಬಂದ ಧೀರ ಯೋಧ ಅಭಿನಂದನ್ ಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ನಾಯಕರು ಟ್ವೀಟ್ ಮೂಲಕ ಸ್ವಾಗತ ಕೋರಿದ್ದಾರೆ.

ಅಭಿನಂದನ್ ತಯ್ನಾಡಿಗೆ ಆಗಮಿಸುತ್ತಿದಂತೆ ದೇಶದೆಲ್ಲೆಡೆ ಪಟಾಕಿ ಸಿಡಿಸಿ, ಸಿಹಿ ನೀಡಿ ಸಾರ್ವಜನಿಕರು ಸಂಭ್ರಮಿಸಿದ್ದಾರೆ. ಪ್ರಧಾನಿ ಮೋದಿ ಅವರು ನಿಮ್ಮ ಧೈರ್ಯ, ಸ್ಥೈರ್ಯ ದೇಶಕ್ಕೆ ಮಾದರಿ. ನಮ್ಮ ದೇಶದ ಸೇನಾಪಡೆಗಳು 130 ಕೋಟಿ ಭಾರತೀಯರಿಗೆ ಸ್ಫೂರ್ತಿ ಆಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೇ ರಾಹುಲ್ ಗಾಂಧಿ ಅವರು ಕೂಡ ಸ್ವಾಗತಕೋರಿದ್ದು, ನಿಮ್ಮ ಶೌರ್ಯ, ಘಟನತೆಯಿಂದ ನಮ್ಮನ್ನು ಮತ್ತಷ್ಟು ಹೆಮ್ಮೆ ಪಡುವಂತೆ ಮಾಡಿದ್ದೀರಿ ಎಂದಿದ್ದಾರೆ.


 

ಹಾಗೇ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಪಂಜಾಬ್ ಸಿಎಂ ಅಮರಿಂದರ್ ಸಿಂಗ್, ಮಾಜಿ ಸಿಎಂ ಸಿದ್ದರಾಮಯ್ಯ, ಬಿಎಸ್ ಯಡಿಯೂರಪ್ಪ ಸೇರಿದಂತೆ ದೇಶದ ಪ್ರಮುಖ ರಾಜಕೀಯ ಗಣ್ಯರು ಅಭಿನಂದನ್ ಅವರಿಗೆ ಸ್ವಾಗತ ಕೋರಿದ್ದಾರೆ.


 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.


Share this Story:

Follow Webdunia kannada

ಮುಂದಿನ ಸುದ್ದಿ

ಮರಳಿ ಭಾರತಕ್ಕೆ ಆಗಮಿಸಿದ ವಾಯುಸೇನೆಯ ವೀರಯೋಧ ಅಭಿನಂದನ್