Webdunia - Bharat's app for daily news and videos

Install App

ಅಯೋಧ್ಯೆ ರಾಮನ ಹಣೆಗೆ ಸೂರ್ಯ ತಿಲಕ ಸ್ಪರ್ಶಿಸುವುದನ್ನು ಹೆಲಿಕಾಪ್ಟರ್ ನಲ್ಲಿ ವೀಕ್ಷಿಸಿದ ಪ್ರಧಾನಿ ಮೋದಿ

Krishnaveni K
ಬುಧವಾರ, 17 ಏಪ್ರಿಲ್ 2024 (13:38 IST)
Photo Courtesy: Twitter
ನವದೆಹಲಿ: ಇಂದು ರಾಮನವಮಿ ನಿಮಿತ್ತ ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಹಣೆಗೆ ಸೂರ್ಯ ರಶ್ಮಿ ಸ್ಪರ್ಶವಾಗಿದೆ. ಈ ದೃಶ್ಯಾವಳಿಯನ್ನು ಪ್ರಧಾನಿ ಮೋದಿ ಕೂಡಾ ಲೈವ್ ಆಗಿ ವೀಕ್ಷಿಸಿದ್ದಾರೆ.

ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಜನ್ಮಭೂಮಿಯಲ್ಲಿ ರಾಮಮಂದಿರವನ್ನು ಪ್ರಧಾನಿ ಮೋದಿ ನೇತೃತ್ವದಲ್ಲಿ ಲೋಕಾರ್ಪಣೆಗೊಳಿಸಲಾಗಿತ್ತು. ಈ ವೇಳೆ ಇನ್ನು ಮುಂದೆ ಪ್ರತೀ ವರ್ಷ ರಾಮನವಮಿಯಂದು ಬಾಲರಾಮನ ಹಣೆಗೆ ಸೂರ್ಯ ತಿಲಕ ಸ್ಪರ್ಶಿಸಲಿದೆ ಎಂದು ಘೋಷಣೆ ಮಾಡಲಾಗಿತ್ತು.

ಆಧುನಿಕ ವಾಸ್ತು ಶಿಲ್ಪ ತಂತ್ರಜ್ಞಾನ ಬಳಸಿ ಸೂರ್ಯ ರಶ್ಮಿ ರಾಮನ ಹಣೆಗೆ ಬೀಳುವಂತೆ ಮಾಡಲಾಗಿದೆ. ಇಂದು ಈ ಅಪರೂಪದ ವಿದ್ಯಮಾನಕ್ಕೆ ದೇಶವಿಡೀ ಸಾಕ್ಷಿಯಾಗಿತ್ತು. ದೂರದರ್ಶನದಲ್ಲಿ ಈ ದೃಶ್ಯದ ನೇರಪ್ರಸಾರ ಮಾಡಲಾಗಿತ್ತು. ಹೀಗಾಗಿ ಕೋಟ್ಯಾಂತರ ಮಂದಿ ಇದನ್ನು ವೀಕ್ಷಿಸಿದ್ದರು.

ಪ್ರಧಾನಿ ಮೋದಿ ಇದೀಗ ಚುನಾವಣೆ ಪ್ರಚಾರ ನಿಮಿತ್ತ ಬ್ಯುಸಿ ಓಡಾಟದ ನಡುವೆಯೂ ಈ ದೃಶ್ಯಾವಳಿಯನ್ನು ಲೈವ್ ಆಗಿ ವೀಕ್ಷಿಸಿದ್ದಾರೆ. ಚುನಾವಣಾ ಪ್ರಚಾರಕ್ಕಾಗಿ ಹೆಲಿಕಾಪ್ಟರ್ ನಲ್ಲಿ ಪ್ರಯಾಣ ಮಾಡುತ್ತಿರುವಾಗ ಟ್ಯಾಬ್ ನಲ್ಲಿ ಲೈವ್ ಆಗಿ ಸೂರ್ಯ ತಿಲಕ ವಿದ್ಯಮಾನ ವೀಕ್ಷಿಸಿದ್ದಾರೆ. ಇದು ನನಗೆ ಅತೀವ ಭಾವುಕ ಕ್ಷಣವಾಗಿತ್ತು ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments