Select Your Language

Notifications

webdunia
webdunia
webdunia
webdunia

ಫಲಿತಾಂಶಕ್ಕೆ ಮೊದಲು ಕೇದಾರನಾಥ ಗುಹೆಯಲ್ಲಿ ಧ್ಯಾನಕ್ಕೆ ಕುಳಿತ ಪ್ರಧಾನಿ ಮೋದಿ

ಫಲಿತಾಂಶಕ್ಕೆ ಮೊದಲು ಕೇದಾರನಾಥ ಗುಹೆಯಲ್ಲಿ ಧ್ಯಾನಕ್ಕೆ ಕುಳಿತ ಪ್ರಧಾನಿ ಮೋದಿ
ನವದೆಹಲಿ , ಭಾನುವಾರ, 19 ಮೇ 2019 (07:54 IST)
ನವದೆಹಲಿ: ಲೋಕಸಭಾ ಚುನಾವಣೆ 2019 ರ ಫಲಿತಾಂಶಕ್ಕೆ ಕ್ಷಣಗಣನೆ ಪ್ರಾರಂಭವಾಗಿದ್ದು, ಫಲಿತಾಂಶಕ್ಕೂ ಮೊದಲು ಪ್ರಧಾನಿ ಮೋದಿ ಕೇದಾರನಾಥದ ಬಳಿ ಗುಹೆಯೊಂದರಲ್ಲಿ ಧ್ಯಾನಕ್ಕೆ ಕುಳಿತಿದ್ದಾರೆ.


ನಿನ್ನೆಯಿಂದ ಇಂದಿನವರೆಗೆ ಒಂದು ದಿನಗಳ ಕಾಲ ಪ್ರಧಾನಿ ಮೋದಿ ಧ್ಯಾನಕ್ಕೆ ಕೂರಲಿದ್ದಾರೆ. ಸುಮಾರು ಎರಡು ಕಿ.ಮೀ.ವರೆಗೆ ನಡೆದು ಗುಹೆ ಬಳಿ ತಲುಪಿದ ಪ್ರಧಾನಿ ಮೋದಿ ಏಕಾಂತದಲ್ಲಿ ಧ್ಯಾನ ಮಗ್ನರಾಗಿದ್ದಾರೆ.

ಅಲ್ಲದೆ ಆರಂಭದಲ್ಲಿ ಕೆಲವು ಮಾಧ್ಯಮ ಪ್ರತಿನಿಧಿಗಳಿಗೆ ಫೋಟೋ ತೆಗೆಯಲು ಅವಕಾಶ ನೀಡಲಾಗಿದೆಯಷ್ಟೇ. ಬಳಿಕ ಒಂದು ದಿನಗಳ ಕಾಲ ಯಾರೂ ಪ್ರಧಾನಿ ಮೋದಿ ಧ್ಯಾನಕ್ಕೆ ಭಂಗ ತರುವಂತಿಲ್ಲ ಎಂದು ಸೂಚನೆ ನೀಡಲಾಗಿದೆ. ಕೇಸರಿ ವಸ್ತ್ರ ಧರಿಸಿ ಪ್ರಧಾನಿ ಧ್ಯಾನಕ್ಕೆ ಕೂತ ಫೋಟೋಗಳು ಇದೀಗ ವೈರಲ್ ಆಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

‘ಮೈತ್ರಿಯಲ್ಲಿ ಸಿದ್ದರಾಮಯ್ಯ ಕೇಂದ್ರಿತ ರಾಜಕೀಯ’; ಟೈಮ್ ಬಾಂಬ್ ಫಿಕ್ಸ್