ಪ್ರಧಾನಿ ಮೋದಿ ಇಂದು ತಮ್ಮ ಸ್ವಕ್ಷೇತ್ರ ವಾರಣಾಸಿಗೆ ಭೇಟಿ ನೀಡಿ ಫಲಾನುಭವಿಗಳಿಗೆ ಪರಿಸರ ಸ್ನೇಹಿ ಇ-ರಿಕ್ಷಾವನ್ನು ವಿತರಿಸಿದರು.
ವಾರಣಾಸಿಯಲ್ಲಿ ಪರಿಸರ ಮಾಲಿನ್ಯವನ್ನು ತಗ್ಗಿಸುವ ನಿಟ್ಟಿನಲ್ಲಿ ಈ ಯೋಜನೆಗೆ ಪ್ರಧಾನಿ ಚಾಲನೆ ನೀಡಿದ್ದಾರೆ
ಸ್ವತಃ ಪ್ರಧಾನಿ ಈ ಇ-ರಿಕ್ಷಾದಲ್ಲಿ ಸವಾರಿ ಮಾಡಿದ್ದು ವಿಶೇಷವಾಗಿತ್ತು.
ಮಾಲಿನ್ಯ ನಿಯತ್ರಣ ದೃಷ್ಟಿಯಿಂದ ಈ ಮೊದಲೇ ಫಲಾನುಭವಿಗಳನ್ನು ಗುರುತಿಸಿ ಇ-ರಿಕ್ಷಾಗಳನ್ನು ವಿತರಿಸಲಾಗಿದೆ.
ಇದಕ್ಕೂ ಮುನ್ನ ಅವರು ಉಜ್ವಲ್ ಯೋಜನೆಗೆ ಚಾಲನೆ ನೀಡಿದರು. ಈ ಯೋಜನೆಯ ಮುಖ್ಯ ಉದ್ದೇಶ ಮುಂದಿನ 3 ವರ್ಷದ ಒಳಗೆ ಬಿಪಿಎಲ್ ಕುಟುಂಬದ 5 ಲಕ್ಷ ಮಹಿಳೆಯರಿಗೆ ಉಚಿತವಾಗಿ ಎಲ್ಪಿಜಿ ಸೌಲಭ್ಯ ಕಲ್ಪಿಸುವುದಾಗಿದೆ.