ಜೆಎನ್ಯು ವಿದ್ಯಾರ್ಥಿಸಂಘದ ನಾಯಕ, ದೇಶದ್ರೋಹದ ಆರೋಪ ಎದುರಿಸುತ್ತಿರುವ ಕನ್ಹಯ್ಯ ಕುಮಾರ್ಗೆ ಕಪ್ಪು ಬಾವುಟ ತೋರಿಸಿದ ಇಬ್ಬರನ್ನು ಭಾನುವಾರ ಮನಬಂದಂತೆ ಥಳಿಸಲಾಗಿದೆ.
ಕನ್ಹಯ್ಯ ಎರಡು ದಿನಗಳ ತವರು ಪ್ರವಾಸದಲ್ಲಿದ್ದು ಇಂದು ಅಖಿಲ ಭಾರತ ಸ್ಟೂಡೆಂಟ್ಸ್ ಫೆಡರೇಶನ್ ಮತ್ತು ಅಖಿಲ ಭಾರತ ಯುವ ಫೆಡರೇಷನ್ ಆಯೋಜಿಸಿದ್ದ ಆಜಾದಿ ಎಂಬ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಇಬ್ಬರು ವ್ಯಕ್ತಿಗಳು ಕಪ್ಪು ಬಾವುಟ ತೋರಿಸಿ, ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗಿದ್ದಾರೆ.
ಇದರಿಂದ ಸಿಟ್ಟಿಗೆದ್ದ ಕನ್ಹಯ್ಯ ಬೆಂಬಲಿಗರು ಅವರಿಬ್ಬರನ್ನು ಹಿಡಿದು ಥಳಿಸಿದ್ದಾರೆ. ಬಳಿಕ ಪೊಲೀಸರು ಮಧ್ಯ ಪ್ರವೇಶಿಸಿ ಪ್ರತಿಭಟನಾಕಾರರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಎರಡು ದಿನಗಳ ಬಿಹಾರ್ ಪ್ರವಾಸದಲ್ಲಿರುವ ಕನ್ಹಯ್ಯ ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಆರ್ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರನ್ನು ಸಹ ಭೇಟಿಯಾಗಿದ್ದಾರೆ.