Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿ ಕ್ಯಾಬಿನೆಟ್ ಬದಲಾವಣೆ: ಯಾರನ್ನು ಕೈ ಬಿಡಬಹುದು, ಯಾರಿಗೆ ಸಚಿವ ಸ್ಥಾನ ಸಿಗಬಹುದು ಇಲ್ಲಿದೆ ಪಟ್ಟಿ

PM Modi in AI Summit
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟ ಪುನಾರಚನೆ ಕುರಿತಾದ ರಾಜಕೀಯ ಚರ್ಚೆಗಳು ದೆಹಲಿ ವಲಯದಲ್ಲಿ ತೀವ್ರಗೊಂಡಿವೆ. ಮುಂಬರುವ ಪ್ರಮುಖ ರಾಜ್ಯಗಳ ವಿಧಾನಸಭಾ ಚುನಾವಣೆಗಳು, ಪಕ್ಷದ ಆಂತರಿಕ ಸಮೀಕರಣ ಹಾಗೂ ಆಡಳಿತಕ್ಕೆ ಹೊಸ ವೇಗ ನೀಡುವ ಉದ್ದೇಶದಿಂದ ಈ ಬದಲಾವಣೆಗಳನ್ನು ನಿರೀಕ್ಷಿಸಲಾಗುತ್ತಿದೆ.

ಸಂಸತ್ತಿನ ರಾಜಕೀಯ ವರ್ತುಲಗಳಲ್ಲಿ ಹರಿದಾಡುತ್ತಿರುವ ಮಾಹಿತಿ ಹಾಗೂ ರಾಜಕೀಯ ವಿಶ್ಲೇಷಕರ ಪ್ರಕಾರ, ಸಚಿವ ಸಂಪುಟ ಸೇರಬಹುದಾದ ಮತ್ತು ಕೈಬಿಡಬಹುದಾದ ಸಂಭಾವ್ಯ ನಾಯಕರ ಪಟ್ಟಿ  ಇಲ್ಲಿದೆ:

ಸಚಿವ ಸಂಪುಟ ಸೇರಬಹುದಾದ ಸಂಭಾವ್ಯರು
ಈ ನಾಯಕರಿಗೆ ಅವರ ಅತ್ಯುತ್ತಮ ಸಾಂಸ್ಥಿಕ ಕಾರ್ಯವೈಖರಿ, ಪ್ರಾದೇಶಿಕ ಸಮೀಕರಣ ಮತ್ತು ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಜವಾಬ್ದಾರಿಗಳನ್ನು ನೀಡುವ ಸಾಧ್ಯತೆ ಇದೆ:

ವಿನೋದ್ ತಾವ್ಡೆ : ಮಹಾರಾಷ್ಟ್ರದ ಪ್ರಮುಖ ನಾಯಕರಾಗಿದ್ದು, ಪಕ್ಷದ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಮಹಾರಾಷ್ಟ್ರದ ಸಮೀಕರಣಗಳನ್ನು ಸರಿದೂಗಿಸಲು ಇವರಿಗೆ ಸಂಪುಟದಲ್ಲಿ ದೊಡ್ಡ ಸ್ಥಾನ ಸಿಗುವ ಸಾಧ್ಯತೆ ಇದೆ.

ಸುನಿಲ್ ಬನ್ಸಾಲ್ : ತೆಲಂಗಾಣ, ಪಶ್ಚಿಮ ಬಂಗಾಳ ಮತ್ತು ಒಡಿಶಾದಂತಹ ರಾಜ್ಯಗಳಲ್ಲಿ ಪಕ್ಷದ ಬೆಳವಣಿಗೆಗೆ ಕಾರ್ಯತಂತ್ರ ರೂಪಿಸಿದ ಇವರಿಗೆ ಆಡಳಿತದ ಜವಾಬ್ದಾರಿ ಸಿಗಬಹುದು ಎಂದು ವರದಿಯಾಗಿದೆ.

ರಾಧಾ ಮೋಹನ್ ದಾಸ್ ಅಗರ್ವಾಲ್ : ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಉಸ್ತುವಾರಿಯಾಗಿ ಯಶಸ್ವಿಯಾಗಿ ಕೆಲಸ ಮಾಡಿರುವ ಇವರನ್ನು ಸಚಿವರನ್ನಾಗಿ ಮಾಡುವ ಚರ್ಚೆಗಳು ಮುಂಚೂಣಿಯಲ್ಲಿವೆ.

ಸಹ ಮಿತ್ರಪಕ್ಷಗಳ ನಾಯಕರು : ಬಿಹಾರದ ಜೆಡಿಯು ಮತ್ತು ಆಂಧ್ರಪ್ರದೇಶದ ಟಿಡಿಪಿ ಪಕ್ಷಗಳ ಒಳಗಿನಿಂದ ಇನ್ನು ಕೆಲವು ಹೊಸ ಮುಖಗಳಿಗೆ ಹಾಗೂ ಯುವ ಸಂಸದರಿಗೆ ಸಚಿವ ಸ್ಥಾನದ ಸೌಭಾಗ್ಯ ಸಿಗುವ ಸಾಧ್ಯತೆ ದಟ್ಟವಾಗಿದೆ.

ಸಚಿವ ಸ್ಥಾನದಿಂದ ಕೈಬಿಡಬಹುದಾದ ಸಂಭಾವ್ಯರು
ಕೆಲವು ಹಿರಿಯ ನಾಯಕರನ್ನು ಸಚಿವ ಸಂಪುಟದಿಂದ ಮುಕ್ತಗೊಳಿಸಿ, ಮುಂಬರುವ ಚುನಾವಣೆಗಳ ದೃಷ್ಟಿಯಿಂದ ಪಕ್ಷದ ಸಾಂಸ್ಥಿಕ ಕೆಲಸಗಳಿಗೆ ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ಹೈಕಮಾಂಡ್ ಯೋಜಿಸಿದೆ ಎನ್ನಲಾಗಿದೆ:

ಪಕ್ಷದ ಸಂಘಟನೆಗೆ ನಿಯೋಜನೆ: ಆಡಳಿತದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿರುವ ಇಬ್ಬರು ಅಥವಾ ಮೂವರು ಹಿರಿಯ ಸಚಿವರನ್ನು ಸಂಘಟನಾತ್ಮಕ ಬದಲಾವಣೆಗಳಿಗಾಗಿ ಮುಕ್ತಗೊಳಿಸುವ ಸಾಧ್ಯತೆಯಿದೆ. ಆ ಪೈಕಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೆಸರೂ ಕೇಳಿಬರುತ್ತಿದೆ. ಇನ್ನು, ರಾಜ್ಯ ರಾಜಕಾರಣದಲ್ಲಿ ಒಲವು ಹೊಂದಿರುವ ಎಚ್ ಡಿ ಕುಮಾರಸ್ವಾಮಿಯವರನ್ನು ಕೈ ಬಿಟ್ಟು ರಾಜ್ಯದ ಬಿಜೆಪಿ ಸಂಸದ ಬಿವೈ ರಾಘವೇಂದ್ರಗೆ ಸಚಿವ ಸ್ಥಾನ ಸಿಗಬಹುದು ಎನ್ನಲಾಗುತ್ತಿದೆ. ಹೀಗಾದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನವೂ ವಿಜಯೇಂದ್ರ ಹೊರತಾಗಿ ಮತ್ತೊಬ್ಬರಿಗೆ ಸಿಗುವ ಸಾಧ್ಯತೆಯಿದೆ.

ಕಡಿಮೆ ಪ್ರದರ್ಶನ ನೀಡಿದವರು : ಕಳೆದ ಅವಧಿಯಲ್ಲಿ ತಮ್ಮ ಇಲಾಖೆಗಳಲ್ಲಿ ನಿರೀಕ್ಷಿತ ವೇಗ ಮತ್ತು ಫಲಿತಾಂಶ ನೀಡದ ಕೆಲವು ರಾಜ್ಯ ಸಚಿವರನ್ನು ಕೈಬಿಟ್ಟು, ಹೊಸ ಮುಖಗಳಿಗೆ ಅವಕಾಶ ನೀಡಬಹುದು ಎನ್ನಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಒಬ್ಬ ಅಧಿಕಾರಿ ಇಲ್ಲದೇ ಹೋಗಿದ್ದರೆ ಹಳ್ಳ ಹಿಡಿಯಿತ್ತಿತ್ತು ಕೇತನ್ ಅಗರ್ವಾಲ್ ಮರ್ಡರ್ ಕೇಸ್