Select Your Language

Notifications

webdunia
webdunia
webdunia
webdunia

ನನ್ನನ್ನು ಎನ್ ಕೌಂಟರ್ ಮೂಲಕ ಕೊಲ್ಲಲು ಪ್ಲಾನ್ ಮಾಡಲಾಗಿತ್ತು-ಪ್ರವೀಣ್ ತೊಗಾಡಿಯಾ

ನನ್ನನ್ನು ಎನ್ ಕೌಂಟರ್ ಮೂಲಕ ಕೊಲ್ಲಲು ಪ್ಲಾನ್ ಮಾಡಲಾಗಿತ್ತು-ಪ್ರವೀಣ್ ತೊಗಾಡಿಯಾ
ಜೈಪುರ , ಮಂಗಳವಾರ, 16 ಜನವರಿ 2018 (13:34 IST)
ಜೈಪುರ: ‘ನಾನು ಯಾವತ್ತೂ ರಾಮ ಮಂದಿರ ನಿರ್ಮಾಣ, ಗೋ ಹತ್ಯಾ ನಿಷೇಧ, ರೈತ ಕಲ್ಯಾಣ ಯೋಜನೆಗಳು ಮುಂತಾದವುಗಳ ಬಗ್ಗೆ ಮಾತನಾಡುತ್ತಿದ್ದೆ. ಹೀಗಾಗಿ ಇದನ್ನು ಸಹಿಸದವರು ಸುಳ್ಳು ಪ್ರಕರಣಗಳಲ್ಲಿ ನನ್ನನ್ನು ಸಿಲುಕಿಸಿ ನಕಲಿ ಎನ್‌ಕೌಂಟರ್‌ ಮೂಲಕ ನನ್ನನ್ನು ಕೊಲ್ಲಲು ಯತ್ನಿಸಲಾಗುತ್ತಿದೆ’ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಪ್ರವೀಣ್ ತೊಗಾಡಿಯಾ ಹೇಳಿದ್ದಾರೆ. 


ಹತ್ತು ವರ್ಷಗಳಷ್ಟು ಹಿಂದಿನ ಕೇಸೊಂದಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಪೊಲೀಸರು ನನ್ನನ್ನು ಎನ್‌ಕೌಂಟರ್‌ನಲ್ಲಿ ಮುಗಿಸುವ ಯೋಜನೆ ಹೊಂದಿದ್ದಾರೆ ಎಂಬ ಬಗ್ಗೆ ಸುಳಿವು ನನಗೆ ಸಿಕ್ಕಿತ್ತು. ನಾನು ಅವರಿಂದ ತಪ್ಪಿಸಿಕೊಳ್ಳುವ ಸಲುವಾಗಿ ನಾಪತ್ತೆಯಾಗಿದ್ದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರಿಟ್ಟರು ತೊಗಾಡಿಯಾ.


ಪ್ರವೀಣ್‌ ತೊಗಾಡಿಯಾ ಅವರು ನಿನ್ನೆ (ಸೋಮವಾರ) ನಾಪತ್ತೆಯಾಗಿದ್ದು ಬಳಿಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಪತ್ತೆಯಾಗಿದ್ದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ಕ್ವಾಟ್ರಸ್ ಮಹಿಳೆಯರಿಗೆ ಆತಂಕ ಮೂಡಿಸಿದ ಸೈಕೋ ಕಾಟ