Webdunia - Bharat's app for daily news and videos

Install App

ಬರೀ ಚುನಾವಣೆ ಗಿಮಿಕಾ? ಭಾರತ್ ಅಕ್ಕಿ ಸಿಗದೇ ಗ್ರಾಹಕರ ಆಕ್ರೋಶ

Krishnaveni K
ಬುಧವಾರ, 21 ಫೆಬ್ರವರಿ 2024 (11:27 IST)
ನವದೆಹಲಿ: ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಕಡಿಮೆ ಬೆಲೆಯಲ್ಲಿ ಜನರಿಗೆ ಅಕ್ಕಿ ಸಿಗುವಂತೆ ಮಾಡಲು ಭಾರತ್ ಬ್ರ್ಯಾಂಡ್ ನ ಅಕ್ಕಿ ಬಿಡುಗಡೆ ಮಾಡಿತ್ತು.

ಆದರೆ ಈಗ ಭಾರತ್ ಅಕ್ಕಿ ಸಿಗದೇ ಗ್ರಾಹಕರು ಕೇಂದ್ರ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಫೆಬ್ರವರಿ 6 ರಂದು ಭಾರತ್ ಬ್ರ್ಯಾಂಡ್ ಅಕ್ಕಿ ಬಿಡುಗಡೆ ಮಾಡಲಾಗಿತ್ತು. ಕೇವಲ 29 ರೂ.ಗೆ ಅಕ್ಕಿ ನೀಡಲಾಗುತ್ತಿತ್ತು. ಭಾರತ್ ಬ್ರ್ಯಾಂಡ್ ಅಕ್ಕಿ ಬಿಡುಗಡೆಯಾದ ಕೆಲವೇ ಸಮಯದಲ್ಲಿ ಗ್ರಾಹಕರು ಮುಗಿಬಿದ್ದು ಖರೀದಿ ಮಾಡಿದ್ದರು.  ಒಬ್ಬ ವ್ಯಕ್ತಿ 10 ಕೆ.ಜಿ. ಅಕ್ಕಿ ಪಡೆಯಲು ಅವಕಾಶವಿತ್ತು. ಆನ್ ಲೈನ್ ತಾಣಗಳಲ್ಲೂ ಅಕ್ಕಿ ಖರೀದಿಗೆ ಅವಕಾಶವಿದೆ ಎಂದು ಹೇಳಿಕೊಂಡಿತ್ತು.

ಆದರೆ ಇದೀಗ ಯೋಜನೆ ಆರಂಭವಾದ ಕೆಲವೇ ದಿನಗಳಲ್ಲಿ ಭಾರತ್ ಅಕ್ಕಿ ಎಲ್ಲಿ ಕೇಳಿದರೂ ಸಿಗುತ್ತಿಲ್ಲ. ಯೋಜನೆ ಆರಂಭದಲ್ಲೇ ಹೀಗಾದರೆ ಹೇಗೆ? ಹಾಗಿದ್ದರೆ ಅಷ್ಟೆಲ್ಲಾ ಪ್ರಚಾರ ಮಾಡಿ ಭಾರತ್ ಬ್ರ್ಯಾಂಡ್ ಅಕ್ಕಿ ಬಿಡುಗಡೆ ಮಾಡಿದ್ದು ಕೇವಲ ಚುನಾವಣೆ ಗಿಮಿಕ್ಕಾ ಎಂದು ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಭಾರತ್ ಅಕ್ಕಿ ಪಡೆಯಲು ಬಿಪಿಎಲ್, ಎಪಿಎಲ್ ರೇಷ್ ಕಾರ್ಡ್ ಗಣನೆಗೆ ಬರುವುದಿಲ್ಲ. ಕೇವಲ ನಿಮ್ಮ ಮೊಬೈಲ್ ನಂಬರ್ ನೀಡಿದರೆ ಸಾಕು. ಆದರೆ ಸದ್ಯಕ್ಕೆ ಗ್ರಾಹಕರ ಭಾರೀ ಬೇಡಿಕೆಯಿಂದಾಗಿ ಎಲ್ಲಾ ಕಡೆ ಅಕ್ಕಿ ಖಾಲಿಯಾಗಿದೆ. ಸದ್ಯಕ್ಕೆ ಅಕ್ಕಿ ಮಿಲ್ ನವರ ಜೊತೆ ಮಾತುಕತೆ ನಡೆಯುತ್ತಿದೆ. ಸದ್ಯದಲ್ಲಿಯೇ ಹೊಸ ಸ್ಟಾಕ್ ಬರಲಿದೆ. ಆಗ ಅಕ್ಕಿ ಮೊದಲಿನಂತೆ ಸಿಗುವುದು ಎಂದು ನೆಫೆಡ್ ಹೇಳಿದೆ. ಕೇಂದ್ರ ಸರ್ಕಾರ ಹೇಳಿದಂತೆ ಮೊಬೈಲ್ ವ್ಯಾನ್ ಮೂಲಕ ಅಕ್ಕಿ ಮಾರಾಟ ಮಾಡಲಾಗಿತ್ತು. ಆದರೆ ಆರಂಭದಲ್ಲಿಯೇ ಭಾರೀ ಬೇಡಿಕೆ ಬಂದಿದ್ದರಿಂದ ಕೆಲವೇ ಕ್ಷಣಗಳಲ್ಲಿ ಅಕ್ಕಿ ಖಾಲಿಯಾಗಿದೆ. ಇದೀಗ ಹೊಸ ಸ್ಟಾಕ್ ಬರುವವರೆಗೂ ಕಾಯಬೇಕು. ಆದರೆ ರಿಲಯನ್ಸ್ ಫ್ರೆಶ್, ಫ್ಲಿಪ್ ಕಾರ್ಟ್, ಅಮೆಝೋನ್ ಆನ್ ಲೈನ್ ತಾಣಗಳಲ್ಲೂ ಅಕ್ಕಿ ಸಿಗುತ್ತದೆಂದು ಹುಡುಕಾಡುತ್ತಿರುವ ಗ್ರಾಹಕರಿಗೆ ಸದ್ಯಕ್ಕೆ ನಿರಾಸೆಯಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಯಾವ ಚಾನೆಲ್ ಗಳು ನನ್ನ ಬಗ್ಗೆ ಸುಳ್ಳು ಸುದ್ದಿ ಹಾಕಿದ್ರೂ ಕೇಳೋನಲ್ಲ ನಾನು: ಸಿದ್ದರಾಮಯ್ಯ

ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕವಾದ ಎನ್ ರಾಮಚಂದರ್ ರಾವ್ ಹಿನ್ನೆಲೆ ಹೀಗಿದೆ

ಸರಣಿ ಹೃದಯಾಘಾತಕ್ಕೆ ಕೊವಿಡ್ ಲಸಿಕೆ ಕಾರಣವಾ: ಸಿದ್ದರಾಮಯ್ಯ ಸ್ಪೋಟಕ ಹೇಳಿಕೆ

ಕೇಂದ್ರ ಸರ್ಕಾರದಿಂದಾಗಿ ದಿನಬಳಕೆ ವಸ್ತುಗಳಿಗೂ ಇನ್ನು ಝಡ್ ಪ್ಲಸ್ ಭದ್ರತೆ ಕೊಡಬೇಕು

ಕಾಂಗ್ರೆಸ್ ಅಧಿಕಾರ, ಮಾನಸಿಕ ಅಸ್ವಸ್ಥರಿಗೂ ಏನಾದರೂ ಸಂಬಂಧ ಇದೆಯೇ?: ಸಿ.ಟಿ.ರವಿ

ಮುಂದಿನ ಸುದ್ದಿ
Show comments