Webdunia - Bharat's app for daily news and videos

Install App

ಅಪಹರಣಕ್ಕೊಳಗಾದ ಮಹಿಳೆಯನ್ನು ರಕ್ಷಿಸಿ ರಿಯಲ್ ಹೀರೋ ಆದ ಪವನ್ ಕಲ್ಯಾಣ್

Sampriya
ಮಂಗಳವಾರ, 2 ಜುಲೈ 2024 (17:02 IST)
Photo Courtesy X
ಆಂಧ್ರಪ್ರದೇಶ: ಕಳೆದ 9 ತಿಂಗಳಿ ಹಿಂದೆ ಅಪಹರಣಕ್ಕೊಳಗಾದ ಯುವತಿಯನ್ನು ಪತ್ತೆಹಚ್ಚಿ ರಕ್ಷಿಸುವ ಮೂಲಕ ಡಿಸಿಎಂ ಪವನ್ ಕಲ್ಯಾಣ್ ಅವರು ನಿಜ ಜೀವನದಲ್ಲಿ ಹೀರೋ ಆಗಿದ್ದಾರೆ.

ಪ್ರಕರಣದ ಹಿನ್ನೆಲೆ: ಈಚೆಗೆ  ಇತ್ತೀಚೆಗಷ್ಟೇ ಭೀಮಾವರಂನ ಶಿವಕುಮಾರಿ ಎಂಬ ಮಹಿಳೆ ತನ್ನ ಮಗಳು ಕಾಣೆಯಾಗಿದ್ದಾಳೆ ಎಂದು ಪವನ್ ಕಲ್ಯಾಣ್ ಅವರ ಬಳಿ ದೂರು ನೀಡಿದ್ದಾಳೆ.  ಯುವತಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವತಃ ಪವನ್ ಕಲ್ಯಾಣ್ ಅವರೇ ಸಿಐ ಜತೆ ದೂರವಾಣಿಯಲ್ಲಿ ಮಾತನಾಡಿದ್ದು, ಫೀಲ್ಡಿಗಿಳಿದ ವಿಜಯವಾಡ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ.

ವಿಜಯವಾಡದ ರಾಮವರಪ್ಪಾಡು ಮೂಲದ ಯುವಕನೊಂದಿಗೆ ಯುವತಿ ಜಮ್ಮುವಿನಲ್ಲಿ ಇರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಇದಲ್ಲದೆ, ಇಬ್ಬರನ್ನೂ ಬಂಧಿಸಿದ್ದಾರೆ. ಇಬ್ಬರನ್ನೂ ಜಮ್ಮುವಿನಿಂದ ವಿಜಯವಾಡಕ್ಕೆ ಕರೆತರಲಾಗುತ್ತಿದ್ದು, ವಿಶೇಷ ತಂಡ ಅವರನ್ನು ಕರೆತರುತ್ತಿದೆ. ಪವನ್ ಕಲ್ಯಾಣ್ ಆದೇಶದ ಮೇರೆಗೆ ನಗರ ಪೊಲೀಸ್ ಆಯುಕ್ತರು ಯುವತಿ ನಾಪತ್ತೆ ಪ್ರಕರಣದ ಬಗ್ಗೆ ವಿಶೇಷ ಗಮನ ಹರಿಸಿದ್ದಾರೆ.

ಮಹಿಳೆ ನೀಡಿದ ದೂರಿನಲ್ಲಿ ಏನಿದೆ:  ವಿಜಯವಾಡದಲ್ಲಿ ಓದುತ್ತಿದ್ದ ತನ್ನ ಮಗಳನ್ನು ಪ್ರೀತಿಯ ಹೆಸರಲ್ಲಿ ಯುವಕನೊಬ್ಬ ಅಪಹರಿಸಿದ್ದಾನೆಎಂದು ಸಂತ್ರಸ್ತೆ ಶಿವಕುಮಾರಿ ತಮ್ಮ ಅಳಲು ತೋಡಿಕೊಂಡರು. ಮಗಳು ನಾಪತ್ತೆಯಾಗಿ ತಿಂಗಳುಗಟ್ಟಲೇ ಆದರೂ ಆಕೆಯನ್ನು ಪತ್ತೆ ಹಚ್ಚಿಲ್ಲ. ಮಾಚವರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ಪವನ್‌ಗೆ ದೂರು ನೀಡಿದ್ದಾಳೆ.

ಇನ್ನೂ ಪೊಲೀಸರು ಮಗಳ ಪತ್ತೆಗೆ ಸಹಕರಿಸಿಲ್ಲ ಎಂದು ದೂರಿದ್ದಾಳೆ. ಆಕೆಯ ನೋವನ್ನು ಕಂಡ ಪವನ್ ಕಲ್ಯಾಣ್ ತಕ್ಷಣ ಪ್ರತಿಕ್ರಿಯಿಸಿದ್ದಾರೆ. ಎಫ್‌ಐಆರ್ ಪ್ರತಿಯನ್ನು ಶಿವಕುಮಾರಿಯಲ್ಲಿ ಪರಿಶೀಲಿಸಲಾಯಿತು. ಕೂಡಲೇ ಮಾಚವರಂ ಸಿಐಗೆ ಕರೆ ಮಾಡಿ ನಾಪತ್ತೆ ಪ್ರಕರಣದ ವಿವರ ಕೇಳಿದರು. ಪ್ರಕರಣವನ್ನು ಶೀಘ್ರ ಇತ್ಯರ್ಥಗೊಳಿಸುವಂತೆ ಆದೇಶಿಸಿದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments