Select Your Language

Notifications

webdunia
webdunia
webdunia
Friday, 11 April 2025
webdunia

ಮಹಾ ಗೃಹ ಸಚಿವ ಅನಿಲ್ ವಿರುದ್ಧ ಕಾನೂನು ಸಮರಕ್ಕಿಳಿದ ಪರಂಬೀರ್ ಸಿಂಗ್

ಅನಿಲ್ ದೇಶಮುಖ್
ಮುಂಬೈ , ಮಂಗಳವಾರ, 23 ಮಾರ್ಚ್ 2021 (09:05 IST)
ಮುಂಬೈ: ಮಹಾರಾಷ್ಟ್ರದ ಗೃಹಸಚಿವ ಅನಿಲ್ ದೇಶ್ ಮುಖ್ ವಿರುದ್ಧ ಮಾಜಿ ಡಿಜಿಪಿ ಪರಂಬೀರ್ ಸಿಂಗ್ ಕಾನೂನು ಸಮರಕ್ಕಿಳಿಯಲು ತೀರ್ಮಾನಿಸಿದ್ದಾರೆ.


ಪೊಲೀಸರಿಗೆ ಪ್ರತಿ ತಿಂಗಳು 100 ಕೋಟಿ ರೂ. ಹಣ ಸಂಗ್ರಹಿಸಲು ಆದೇಶಿಸಿದ್ದ ಗೃಹ ಸಚಿವರು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ವರ್ಗಾವಣೆ ಬಳಿಕ ಪರಂಬೀರ್ ಸಿಂಗ್ ಸಿಎಂ ಉದ್ಧವ್ ಠಾಕ್ರೆಗೆ ಪತ್ರ ಬರೆದು ಆರೋಪಿಸಿದ್ದರು. ಆದರೆ ಈ ಬಗ್ಗೆ ಸಭೆ ನಡೆಸಿರುವ ಸಚಿವ ಸಂಪುಟ ಸದಸ್ಯರು ಅನಿಲ್ ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದರು. ಅತ್ತ ಅನಿಲ್ ಕೂಡಾ ತಮ್ಮ ವಿರುದ್ಧ ಸುಳ್ಳು ಆಪಾದನೆ ಮಾಡಲಾಗಿದೆ, ಪರಂಬೀರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದರು.

ಇದೀಗ ಗೃಹರಕ್ಷಣಾ ಇಲಾಖೆಗೆ ವರ್ಗವಾಗಿರುವ ಪರಂಬೀರ್ ಸಿಂಗ್ ಅನಿಲ್ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ. ಈ ಸಂಬಂಧ ಸಿಬಿಐ ತನಿಖೆ ನಡೆಸಲಿ ಎಂದು ಅವರು ಆಗ್ರಹಿಸಿದ್ದಾರೆ. ಸಾಕ್ಷ್ಯ ನಾಶವಾಗುವ ಮೊದಲು ಅನಿಲ್ ನಿವಾಸದ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸುವಂತೆ ಮನವಿಯಲ್ಲಿ ಆಗ್ರಹಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೆಳೆಯನ ಜೊತೆಗಿನ ಸಂಬಂಧವನ್ನು ವಿರೋಧಿಸಿದ ತಂದೆಗೆ ಇಂತಹ ಗತಿ ತಂದ ಮಗಳು