Select Your Language

Notifications

webdunia
webdunia
webdunia
webdunia

ಪಾಕ್ ಕಲಾವಿದರನ್ನು ಬೂಟಿನಿಂದ ಹೊಡೆಯಬೇಕು: ಬಿಜೆಪಿ

ಪಾಕ್ ಕಲಾವಿದರನ್ನು ಬೂಟಿನಿಂದ ಹೊಡೆಯಬೇಕು: ಬಿಜೆಪಿ
ನವದೆಹಲಿ , ಸೋಮವಾರ, 26 ಸೆಪ್ಟಂಬರ್ 2016 (20:14 IST)
ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಪಾಕಿಸ್ತಾನದ ಕಲಾವಿದರು ತಮ್ಮ ದೇಶಕ್ಕೆ ಮರಳುವಂತೆ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಕರೆ ನೀಡಿದ ಮಾರನೇ ದಿನವೇ ಬಿಜೆಪಿ ಶಾಸಕ ಸಂಗೀತ್ ಸೋಮ್, ಪಾಕ್ ಕಲಾವಿದರನ್ನು ಶೂ ತೆಗೆದುಕೊಂಡು ಹೊಡಿಯಬೇಕು ಎಂದು ಕರೆ ನೀಡಿದ್ದಾರೆ.
 
ಉತ್ತರ ಕಾಶ್ಮಿರದ ಉರಿ ಸೇನಾಕಚೇರಿಯ ಮೇಲೆ ಪಾಕ್ ಉಗ್ರರು ನಡೆಸಿದ ದಾಳಿಯಲ್ಲಿ 19 ಸೈನಿಕರು ಹುತಾತ್ಮರಾಗಿದ್ದರೂ ಘಟನೆಯನ್ನು ಖಂಡಿಸದ ಪಾಕ್ ಕಲಾವಿದರಿಗೆ ಭಾರತದಲ್ಲಿ ಕಾರ್ಯನಿರ್ವಹಿಸಲು ಯಾವುದೇ ಅವಕಾಶವಿಲ್ಲ ಎಂದು ಗುಡುಗಿದ್ದಾರೆ.    
 
ಪಾಕಿಸ್ತಾನದ ಕೆಲ ಕಲಾವಿದರು ಭಾರತದಲ್ಲಿ ಕೋಟಿ ಕೋಟಿ ರೂಪಾಯಿ ಗಳಿಕೆ ಮಾಡುತ್ತಿದ್ದಾರೆ. ಹಣ ಹೆಸರು ಗಳಿಸಲು ಭಾರತ ಬೇಕಾಗಿದೆ. ಆದರೆ, ಭಾರತದ ಮೇಲೆ ಪಾಕ್ ದಾಳಿ ನಡೆಸಿದರೂ ಅದರ ಬಗ್ಗೆ ಚಕಾರವೆತ್ತದ ಕಲಾವಿದರು ಗದ್ದಾರ್‌ಗಳು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ನಾವು ಭಾರತದ ಅನ್ನವನ್ನು ತಿನ್ನುತ್ತಿದ್ದೇವೆ. ಗಳಿಕೆ ಮಾಡುತ್ತಿದ್ದೇವೆ. ಆದ್ದರಿಂದ ಇಂತಹ ಘಟನೆಗಳು ಮರುಕಳಿಸಬಾರದು ಎನ್ನುವ ಸ್ಪಷ್ಟ ಸಂದೇಶವನ್ನು ಪಾಕ್ ಕಲಾವಿದರು ಪಾಕಿಸ್ತಾನಕ್ಕೆ ರವಾನಿಸಬೇಕಾಗಿದೆ ಎಂದು ಸಲಹೆ ನೀಡಿದರು.
 
ಇಂತದ ಪಾಕ್ ಕಲಾವಿದರನ್ನು ಬೂಟಿನಿಂದ ಹೊಡೆದು ದೇಶಕ್ಕೆ ಹೊರಗೆ ಹಾಕಬೇಕು. ಪ್ರಾಣಿಗಳು ಕೂಡಾ ಅನ್ನವನ್ನು ತಿಂದ ಮನೆಯ ಋಣ ತೀರಿಸುತ್ತವೆ. ಪಾಕಿಸ್ತಾನಿ ಕಲಾವಿದರು ನಮ್ಮಲ್ಲಿ ತಿಂದು ನಮ್ಮ ಬೆನ್ನ ಹಿಂದೆ ಚಾಕು ಹಾಕುತ್ತಿವೆ. ಪಾಕಿಸ್ತಾನಕ್ಕೆ ಭಾರತ ಸೇನೆ ತಕ್ಕ ಪಾಠ ಕಲಿಸಲಿದೆ ಎಂದು ತಿಳಿಸಿದ್ದಾರೆ.
 
ಪಾಕಿಸ್ತಾನಿ ನಟ ಫವಾದ್ ಖಾನ್ ಏ ದಿಲ್ ಹೈ ಮುಷ್ಕಿಲ್ ಚಿತ್ರದಲ್ಲಿ ನಟಿಸುತ್ತಿದ್ದರೆ, ಪಾಕ್ ನಟಿ ಮಹೀರಾ ಖಾನ್ ಶಾರುಕ್ ಖಾನ್ ನಟನೆಯ ರಯೀಸ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.   

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಡಿವೈಎಸ್‌ಪಿ ಕಲ್ಲಪ್ಪಾ ಹಂಡಿಭಾಗ್ ಪತ್ನಿಗೆ ಉಪ ನೋಂದಣಾಧಿಕಾರಿ ಹುದ್ದೆ