Select Your Language

Notifications

webdunia
webdunia
webdunia
webdunia

ಡಿವೈಎಸ್‌ಪಿ ಕಲ್ಲಪ್ಪಾ ಹಂಡಿಭಾಗ್ ಪತ್ನಿಗೆ ಉಪ ನೋಂದಣಾಧಿಕಾರಿ ಹುದ್ದೆ

ಡಿವೈಎಸ್‌ಪಿ ಕಲ್ಲಪ್ಪಾ ಹಂಡಿಭಾಗ್ ಪತ್ನಿಗೆ ಉಪ ನೋಂದಣಾಧಿಕಾರಿ ಹುದ್ದೆ
ಬೆಂಗಳೂರು , ಸೋಮವಾರ, 26 ಸೆಪ್ಟಂಬರ್ 2016 (19:36 IST)
ಆತ್ಮಹತ್ಯೆಗೆ ಶರಣಾಗಿದ್ದ ಚಿಕ್ಕಮಗಳೂರು ಡಿವೈಎಸ್‌ಪಿ ಕಲ್ಲಪ್ಪಾ ಹಂಡಿಭಾಗ್ ಅವರ ಪತ್ನಿಗೆ ಉಪ ನೋಂದಣಾಧಿಕಾರಿ ಹುದ್ದೆ ನೀಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
 
ಅನುಕಂಪದ ಆಧಾರದ ಮೇಲೆ ಕಲ್ಲಪ್ಪ ಹಂಡಿಭಾಗ್ ಅವರ ಧರ್ಮಪತ್ನಿ ವಿದ್ಯಾ ಅವರಿಗೆ ರಾಜ್ಯ ಸರಕಾರ ಉಪ ನೋಂದಣಾಧಿಕಾರಿ ಹುದ್ದೆ ನೀಡುವ ಮೂಲಕ ಮಾನವೀಯತೆ ಮೆರೆದಿದೆ. 
 
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗೃಹ ಕಚೇರಿಯಲ್ಲಿ ಇಂದು ಕಲ್ಲಪ್ಪ ಹಂಡಿಭಾಗ್ ಅವರ ಧರ್ಮಪತ್ನಿ ವಿದ್ಯಾ ಅವರಿಗೆ ಆದೇಶ ಪತ್ರ ನೀಡಲಾಯಿತು.
 
ತೇಜಸ್ ಅಪಹರಣಕ್ಕೆ ಕುಮ್ಮಕ್ಕು ನೀಡಿದ ಮತ್ತು 10 ಲಕ್ಷ ರೂಪಾಯಿ ಹಣ ಪಡೆದಿದ್ದಾರೆ ಎಂಬ ಆರೋಪ ಕಲ್ಲಪ್ಪ ಅವರ ಮೇಲೆ ಕೇಳಿ ಬಂದಿತ್ತು. ಇದರಿಂದ ಮನನೊಂದು ಕಲ್ಲಪ್ಪ ಹಂಡಿಭಾಗ್ ಅವರು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಆದರೆ, ಕಲ್ಲಪ್ಪ ಆತ್ಮಹತ್ಯೆಗೆ ನಿಜವಾದ ಕಾರಣ ಏನೆಂಬ ಬಗ್ಗೆ ತನಿಖೆಯ ನಂತರವೇ ತಿಳಿದು ಬರಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ ಕಾಂಗ್ರೆಸ್ ಪಕ್ಷದ ಕಾರ್ಯಕಾರಣಿ ಸಭೆ