Publish Date: Sat, 24 Oct 2020 (10:18 IST)
Updated Date: Sat, 24 Oct 2020 (10:22 IST)
ನವದೆಹಲಿ: ಭಾರೀ ಮಳೆಯಿಂದಾಗಿ ಬೆಳೆ ನಷ್ಟವಾಗಿರುವ ಹಿನ್ನಲೆಯಲ್ಲಿ ಈರುಳ್ಳಿ ಬೆಲೆ ಗಗನಕ್ಕೇರಿದೆ. ಹೀಗಾಗಿ ಈರುಳ್ಳಿ ದಾಸ್ತಾನಿಗೂ ಕೇಂದ್ರ ಮಿತಿ ಹೇರಿದೆ.
ಪ್ರವಾಹದಿಂದ ಈರುಳ್ಳಿ ಬೆಳೆ ನಷ್ಟವಾಗಿದ್ದು, ಬೆಲೆ 70 ರಿಂದ 100 ರೂ. ಗೆ ಏರಿಕೆಯಾಗಿದೆ. ದರ ಏರಿಕೆ ಗ್ರಾಹಕರ ಕಣ್ಣಲ್ಲಿ ನೀರು ತರಿಸಿದ್ದು, ಇನ್ನು, ದಲ್ಲಾಳಿಗಳು ಇದರ ದುರ್ಲಾಭ ಪಡೆಯದಂತೆ ಚಿಲ್ಲರೆ ಮಾರಾಟಕ್ಕಾಗಿ 2 ಮೆಟ್ರಿಕ್, 25 ಮೆಟ್ರಿಕ್ ಸಗಟು ಮಾರಾಟಕ್ಕಾಗಿ ದಾಸ್ತಾನು ಮಾಡಿಕೊಳ್ಳಲು ಕೇಂದ್ರ ಮಿತಿ ಹೇರಿದೆ.