Webdunia - Bharat's app for daily news and videos

Install App

ನಿರ್ಬಂಧದ ನಡುವೆಯೂ ಭಾರತಕ್ಕೆ ತೈಲ ಸಾಗಣೆ!

Webdunia
ಶನಿವಾರ, 28 ಮೇ 2022 (12:05 IST)
ನವದೆಹಲಿ : ಉಕ್ರೇನ್ ಮೇಲೆ ರಷ್ಯಾ ದೇಶದ ಆಕ್ರಮಣದ ಕಾರಣದಿಂದಾಗಿ ರಷ್ಯಾದ ತೈಲದ ಮೇಲೆ ಯುರೋಪ್ ರಾಷ್ಟ್ರಗಳು ದೊಡ್ಡ ಪ್ರಮಾಣದಲ್ಲಿ ನಿರ್ಬಂಧ ವಿಧಿಸಿದೆ.

ಇದರ ಪರಿಣಾಮದಿಂದಾಗಿ ಯುರೋಪ್ ಅನ್ನು ಹಿಂದಿಕ್ಕಿ, ರಷ್ಯಾದ ಅತೀದೊಡ್ಡ ತೈಲ ಖರೀದಿದಾರ ಎನ್ನುವ ಸ್ಥಾನವನ್ನು ಕಳೆದ ತಿಂಗಳು ಏಷ್ಯಾ  ಸಂಪಾದನೆ ಮಾಡಿದೆ. ಈ ಅಂತರವು ಮೇ ತಿಂಗಳಿನಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಡೇಟಾ ಮತ್ತು ಅನಾಲಿಟಿಕ್ಸ್ ಕಂಪನಿಯಾದ ಕೆಪ್ಲರ್ ಪ್ರಕಾರ, 79 ಮಿಲಿಯನ್ ಬ್ಯಾರೆಲ್ಗಳು ಕಳೆದ ವಾರದಲ್ಲಿ ಸಾಗಣೆ ಮತ್ತು ಸಮುದ್ರದಲ್ಲಿ ತೇಲುವ ಸಂಗ್ರಹಣೆಯಲ್ಲಿವೆ, ಉಕ್ರೇನ್ ದೇಶದ ಮೇಲೆ ಫೆಬ್ರವರಿಯಲ್ಲಿ ಆಕ್ರಮಣ ಮಾಡುವ ಮೊದಲು 27 ಮಿಲಿಯನ್ ಬ್ಯಾರೆಲ್ಗಳಿಗಿಂತ ಎರಡು ಪಟ್ಟು ಹೆಚ್ಚ ಇದಾಗಿದೆ. ಏಷ್ಯಾದೆಡೆಗೆ ಬರುತ್ತಿರುವ ಬಹುತೇಕ ತೈಲವು ಭಾರತ ಹಾಗೂ ಚೀನಾಕ್ಕೆ ತಲುಪಲಿದೆ ಎನ್ನುವುದು ವಿಶೇಷ.

ಸಮುದ್ರದ ಮೂಲಕ ತೈಲ ಸಾಗಾಣೆಯಲ್ಲಿ ದೊಡ್ಡ ಮಟ್ಟದ ಏರಿಕೆ ಆಗುತ್ತಿರುವುದು, ರಷ್ಯಾದ ಆಕ್ರಮಣದಿಂದಾಗಿ ಜಾಗತಿಕ ಇಂಧನ ವ್ಯಾಪಾರವು ಯಾವ ಮಟ್ಟದಲ್ಲಿ ಪ್ರಕ್ಷುಬ್ಧತೆಗೆ ಒಳಗಾಗಿದೆ ಎನ್ನುವುದು ಎತ್ತಿ ತೋರಿಸಿದೆ. ರಷ್ಯಾದ ತೈಲದ ಪ್ರಮುಖ ಬಳಕೆದಾರರಾಗಿದ್ದ, ಪೈಪ್ ಲೈನ್ ಮೂಲಕ ರಷ್ಯಾದ ತೈಲವನ್ನು ಬಳಕೆ ಮಾಡುತ್ತಿದ್ದ ಯುರೋಪ್, ಇಂಗ್ಲೆಂಡ್ ಮತ್ತು ಅಮೆರಿಕ ಮಾಸ್ಕೋ ಮೇಲೆ ನಿರ್ಬಂಧ ವಿಧಿಸಿದೆ.

ಇದರಿಂದಾಗಿ ಮಾಸ್ಕೋ ಹೊಸ ಖರೀದಿದಾರರನ್ನು ಹುಡುಕುವ ಪ್ರಯತ್ನ ಮಾಡಿತ್ತು. ಅದರಂತೆ, ತೈಲಕ್ಕಾಗಿ ಮಧ್ಯಪ್ರಾಚ್ಯ ದೇಶಗಳ ಮೇಲೆ ಹೆಚ್ಚಿನ ಅವಲಂಬನೆ ಹೊಂದಿದ್ದ ಭಾರತ ಹಾಗೂ ಚೀನಾ, ರಷ್ಯಾದಿಂದ ಭಾರಿ ರಿಯಾಯಿತಿಯಲ್ಲಿ ಇಂಧನವನ್ನು ಖರೀದಿ ಮಾಡಿದ್ದು, ಲಕ್ಷಾಂತರ ಬ್ಯಾರಲ್ ಗಳ ತೈಲವನ್ನು ಸಾಗಾಣೆ ಮಾಡಿಕೊಳ್ಳುತ್ತಿವೆ.

"ಏಷ್ಯಾದಲ್ಲಿನ ಕೆಲವು ಆಸಕ್ತ ಖರೀದಿದಾರರು ರಾಜಕೀಯ ನಿಲುವನ್ನು ತೆಗೆದುಕೊಳ್ಳುವ ಬದಲು ದೇಶದ ಆರ್ಥಿಕತೆಯ ಕಾರಣಕ್ಕಾಗಿ ಹೆಚ್ಚು ಪ್ರೇರಿತರಾಗಿದ್ದಾರೆ" ಎಂದು ಸಿಂಗಾಪುರದ ಕೆಪ್ಲರ್ ನಲ್ಲಿ ಹಿರಿಯ ತೈಲ ವಿಶ್ಲೇಷಕ ಜೇನ್ ಕ್ಸಿ ಹೇಳಿದ್ದಾರೆ.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜಾ ರಘುವಂಶಿ ಹತ್ಯೆಗೆ ಬಳಿಸಿದ್ದ ಮಚ್ಚು ವಶಕ್ಕೆ, ಪ್ರಾಣ ಉಳಿಸಿಕೊಳ್ಳಲು ಕೊನೆ ಕ್ಷಣದವರೆಗೂ ಹೊರಡಿದ್ದ ಉದ್ಯಮಿ

ಹರಿಯಾಣ ಮಾಡೆಲ್‌ ಗಂಟಲು ಸೀಳಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ, ಸಹೋದರಿ ಹೇಳಿದ್ದು ಹೀಗೇ

ಇರಾನ್, ಇಸ್ರೇಲ್ ಯುದ್ಧ ಇಫೆಕ್ಟ್: ಭಾರತದಲ್ಲಿ ಇದರ ಬೆಲೆ ಹೆಚ್ಚೋದು ಗ್ಯಾರಂಟಿ

Video, ನಿನ್ನ ಗುರುತೇ ಸಿಗದ ಹಾಗೇ ಮಾಡುತ್ತೇನೆ: ಗ್ಯಾಸ್ ಸ್ಟೇಷನ್ ಸಿಬ್ಬಂದಿಗೆ ಮಹಿಳೆ ಗನ್ ಪಾಯಿಂಟ್‌

ಪ್ರಧಾನಿ ಮೋದಿ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ ವ್ಯಕ್ತಿ ವಿರುದ್ಧ ಬಿಜೆಪಿ ದೂರು

ಮುಂದಿನ ಸುದ್ದಿ
Show comments